<p><strong>ವಾರಾಣಸಿ (ಉತ್ತರ ಪ್ರದೇಶ):</strong> ‘ದೇಶದಲ್ಲಿ ಎರಡು ಭಾರತಗಳಿವೆ. ಅದರಲ್ಲಿ ಒಂದು ಶ್ರೀಮಂತರದ್ದಾಗಿದ್ದರೆ, ಇನ್ನೊಂದು ಬಡವರದ್ದಾಗಿದೆ’ ಎಂದು ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ’ ಎಂದರು.</p>.<p>ಉತ್ತರ ಪ್ರದೇಶದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಎರಡನೇ ದಿನವಾದ ಶನಿವಾರ ಮಾತನಾಡಿದ ಅವರು, ‘ಭಾರತವು ಪ್ರೀತಿ ಹಂಚುವ ದೇಶವೇ ಹೊರತು, ದ್ವೇಷ ಹರಡುವ ದೇಶವಲ್ಲ’ ಎಂದು ಹೇಳಿದರು. </p>.<p>ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರಾಯ್ ಮತ್ತು ಇತರ ಕಾಂಗ್ರೆಸ್ ನಾಯಕರ ಜತೆಗೆ ತೆರೆದ ಜೀಪಿನಲ್ಲಿ ಇಲ್ಲಿನ ಜನನಿಬಿಡ ಗುಡೌಲಿಯಾದಲ್ಲಿ ಯಾತ್ರೆಯಲ್ಲಿ ಅವರು ಸಾಗಿದರು. ಇದೇ ವೇಳೆ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.</p>.<p>‘ಸಹೋದರರ ನಡುವಿನ ಸಂಘರ್ಷದಿಂದ ದೇಶ ದುರ್ಬಲವಾಗಿದೆ’ ಎಂದ ಅವರು, ‘ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ’ ಎಂದು ಪುನರುಚ್ಚರಿಸಿದರು.</p>.<p>‘ನಾನು ಗಂಗಾ ನದಿಯಲ್ಲಿ ತಲೆಬಾಗಿ ಮಿಂದೆದ್ದು ಬಂದಿದ್ದೇನೆ. ಈ ಯಾತ್ರೆಯಲ್ಲಿ ಅವರು ತಮ್ಮ ಸಹೋದರರನ್ನು ಭೇಟಿಯಾಗಲು ಬಂದಿದ್ದಾರೆ ಎಂದು ಎಲ್ಲರೂ ಭಾವಿಸಬೇಕು’ ಎಂದು ರಾಹುಲ್ ಗಾಂಧಿ ಹೇಳಿದರು.</p>.<p><strong>ಮಾಧ್ಯಮಗಳ ವಿರುದ್ಧ ವಾಗ್ದಾಳಿ:</strong></p>.<p>ದೇಶದ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಮಾಧ್ಯಮಗಳು ಸರಿಯಾಗಿ ಬಿತ್ತರಿಸುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರನ್ನು ಮಾಧ್ಯಮಗಳು ದಿನದ 24 ಗಂಟೆಯೂ ತೋರಿಸುತ್ತವೆ. ಐಶ್ವರ್ಯ ರೈ ಅವರನ್ನೂ ತೋರಿಸುತ್ತವೆ. ಆದರೆ ನಿಜವಾದ ಸಮಸ್ಯೆಗಳನ್ನು ಬಿತ್ತರಿಸುವುದಿಲ್ಲ ಎಂದರು.</p>.<p>ಯಾತ್ರೆ ವೇಳೆ ಜನರ ಗುಂಪಿನಲ್ಲಿದ್ದ ರಾಹುಲ್ ಎಂಬ ಯುವಕನನ್ನು ಕರೆದ ಅವರು, ಶಿಕ್ಷಣಕ್ಕಾಗಿ ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿ ಪಡೆದರು. ಅಲ್ಲದೆ ನಿರುದ್ಯೋಗದ ಕುರಿತೂ ಆ ಯುವಕನನ್ನು ಕೇಳಿದರು. ಬಳಿಕ ಅವರು ನಿರುದ್ಯೋಗ ಮತ್ತು ಹಣದುಬ್ಬರವು ದೇಶದ ಎರಡು ಪ್ರಮುಖ ಸಮಸ್ಯೆಗಳಾಗಿವೆ ಎಂದರು.</p>.<p>ಅಪ್ನಾದಳ ನಾಯಕಿ ಪಲ್ಲವಿ ಪಟೇಲ್, ಸಮಾಜವಾದಿ ಪಕ್ಷದ ಕೆಲ ಶಾಸಕರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆಯು ಬಿಹಾರದಿಂದ ಚಂದೌಲಿ ಮೂಲಕ ಶುಕ್ರವಾರ ಸಂಜೆ ಉತ್ತರ ಪ್ರದೇಶ ಪ್ರವೇಶಿಸಿತು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ರಾಯ್ ಬರೇಲಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p><strong>ದೇವಾಲಯ ಭೇಟಿ, ರೋಡ್ ಶೋ</strong></p><p>ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೂಜೆ ಸಲ್ಲಿಸಿದರು.</p><p>ಬಳಿಕ ರಾಹುಲ್ ಅವರು ಪಟ್ಟಣದಲ್ಲಿ 12 ಕಿ.ಮೀ ರೋಡ್ ಶೋ ನಡೆಸಿದರು. ಗೊಡೌಲಿಯಾ, ಮೈದಾಗಿನ್, ಜ್ಞಾನವಾಪಿ, ಗೋಲ್ಗಡ್ಡಾ ಮೂಲಕ ಸಾಗಿದ ಯಾತ್ರೆ ಮಾಂಡುವಾಡಿಹ್ನಲ್ಲಿ ಕೊನೆಗೊಂಡಿತು. ಮುಸ್ಲಿಂ ಸಮುದಾಯದವರ ಪ್ರಾಬಲ್ಯವಿರುವ ಹಲವು ಪ್ರದೇಶಗಳ ಮೂಲಕ ಯಾತ್ರೆ ಸಾಗಿತು.</p>.<p><strong>ರಸ್ತೆ ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು</strong> </p><p>ಲಖನೌ: ವಾರಾಣಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಸಾಗಿದ ಬೆನ್ನಲ್ಲೇ ಆ ರಸ್ತೆಗಳನ್ನು ಬಿಜೆಪಿ ಕಾರ್ಯಕರ್ತರು ಗಂಗಾನದಿಯ ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿದರು.</p><p>ಗಂಗಾಜಲ ತುಂಬಿದ್ದ ಬಕೆಟ್ಗಳನ್ನು ಹೊತ್ತು ತಂದ ಕೇಸರಿ ಪಕ್ಷದ ನೂರಾರು ಕಾರ್ಯಕರ್ತರು, ರಾಹುಲ್ ಯಾತ್ರೆಯ ಬಳಿಕ ಆ ಮಾರ್ಗವನ್ನು ತೊಳೆದರು. </p><p>‘ರಾಹುಲ್ ಅವರಿಗೆ ಸನಾತನ ಧರ್ಮದಲ್ಲಿ ನಂಬಿಕೆ ಇಲ್ಲ ಮತ್ತು ಅವರು ಮಾಂಸಾಹಾರಿ. ಅವರಿಂದ ಈ ಮಾರ್ಗ ಅಶುದ್ಧವಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದರು. ಈ ವೇಳೆ ಕೇಸರಿ ಪಕ್ಷದ ಕಾರ್ಯಕರ್ತರು<br>ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಾರಾಣಸಿ (ಉತ್ತರ ಪ್ರದೇಶ):</strong> ‘ದೇಶದಲ್ಲಿ ಎರಡು ಭಾರತಗಳಿವೆ. ಅದರಲ್ಲಿ ಒಂದು ಶ್ರೀಮಂತರದ್ದಾಗಿದ್ದರೆ, ಇನ್ನೊಂದು ಬಡವರದ್ದಾಗಿದೆ’ ಎಂದು ಹೇಳಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ’ ಎಂದರು.</p>.<p>ಉತ್ತರ ಪ್ರದೇಶದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಎರಡನೇ ದಿನವಾದ ಶನಿವಾರ ಮಾತನಾಡಿದ ಅವರು, ‘ಭಾರತವು ಪ್ರೀತಿ ಹಂಚುವ ದೇಶವೇ ಹೊರತು, ದ್ವೇಷ ಹರಡುವ ದೇಶವಲ್ಲ’ ಎಂದು ಹೇಳಿದರು. </p>.<p>ಉತ್ತರ ಪ್ರದೇಶ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರಾಯ್ ಮತ್ತು ಇತರ ಕಾಂಗ್ರೆಸ್ ನಾಯಕರ ಜತೆಗೆ ತೆರೆದ ಜೀಪಿನಲ್ಲಿ ಇಲ್ಲಿನ ಜನನಿಬಿಡ ಗುಡೌಲಿಯಾದಲ್ಲಿ ಯಾತ್ರೆಯಲ್ಲಿ ಅವರು ಸಾಗಿದರು. ಇದೇ ವೇಳೆ ಅವರು ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರು.</p>.<p>‘ಸಹೋದರರ ನಡುವಿನ ಸಂಘರ್ಷದಿಂದ ದೇಶ ದುರ್ಬಲವಾಗಿದೆ’ ಎಂದ ಅವರು, ‘ದೇಶವನ್ನು ಒಗ್ಗೂಡಿಸುವುದೇ ನಿಜವಾದ ದೇಶಭಕ್ತಿಯಾಗಿದೆ’ ಎಂದು ಪುನರುಚ್ಚರಿಸಿದರು.</p>.<p>‘ನಾನು ಗಂಗಾ ನದಿಯಲ್ಲಿ ತಲೆಬಾಗಿ ಮಿಂದೆದ್ದು ಬಂದಿದ್ದೇನೆ. ಈ ಯಾತ್ರೆಯಲ್ಲಿ ಅವರು ತಮ್ಮ ಸಹೋದರರನ್ನು ಭೇಟಿಯಾಗಲು ಬಂದಿದ್ದಾರೆ ಎಂದು ಎಲ್ಲರೂ ಭಾವಿಸಬೇಕು’ ಎಂದು ರಾಹುಲ್ ಗಾಂಧಿ ಹೇಳಿದರು.</p>.<p><strong>ಮಾಧ್ಯಮಗಳ ವಿರುದ್ಧ ವಾಗ್ದಾಳಿ:</strong></p>.<p>ದೇಶದ ರೈತರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ಮಾಧ್ಯಮಗಳು ಸರಿಯಾಗಿ ಬಿತ್ತರಿಸುವುದಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅವರನ್ನು ಮಾಧ್ಯಮಗಳು ದಿನದ 24 ಗಂಟೆಯೂ ತೋರಿಸುತ್ತವೆ. ಐಶ್ವರ್ಯ ರೈ ಅವರನ್ನೂ ತೋರಿಸುತ್ತವೆ. ಆದರೆ ನಿಜವಾದ ಸಮಸ್ಯೆಗಳನ್ನು ಬಿತ್ತರಿಸುವುದಿಲ್ಲ ಎಂದರು.</p>.<p>ಯಾತ್ರೆ ವೇಳೆ ಜನರ ಗುಂಪಿನಲ್ಲಿದ್ದ ರಾಹುಲ್ ಎಂಬ ಯುವಕನನ್ನು ಕರೆದ ಅವರು, ಶಿಕ್ಷಣಕ್ಕಾಗಿ ಎಷ್ಟು ಖರ್ಚಾಗಿದೆ ಎಂಬುದರ ಮಾಹಿತಿ ಪಡೆದರು. ಅಲ್ಲದೆ ನಿರುದ್ಯೋಗದ ಕುರಿತೂ ಆ ಯುವಕನನ್ನು ಕೇಳಿದರು. ಬಳಿಕ ಅವರು ನಿರುದ್ಯೋಗ ಮತ್ತು ಹಣದುಬ್ಬರವು ದೇಶದ ಎರಡು ಪ್ರಮುಖ ಸಮಸ್ಯೆಗಳಾಗಿವೆ ಎಂದರು.</p>.<p>ಅಪ್ನಾದಳ ನಾಯಕಿ ಪಲ್ಲವಿ ಪಟೇಲ್, ಸಮಾಜವಾದಿ ಪಕ್ಷದ ಕೆಲ ಶಾಸಕರೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಯಾತ್ರೆಯು ಬಿಹಾರದಿಂದ ಚಂದೌಲಿ ಮೂಲಕ ಶುಕ್ರವಾರ ಸಂಜೆ ಉತ್ತರ ಪ್ರದೇಶ ಪ್ರವೇಶಿಸಿತು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ರಾಯ್ ಬರೇಲಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.</p>.<p><strong>ದೇವಾಲಯ ಭೇಟಿ, ರೋಡ್ ಶೋ</strong></p><p>ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪೂಜೆ ಸಲ್ಲಿಸಿದರು.</p><p>ಬಳಿಕ ರಾಹುಲ್ ಅವರು ಪಟ್ಟಣದಲ್ಲಿ 12 ಕಿ.ಮೀ ರೋಡ್ ಶೋ ನಡೆಸಿದರು. ಗೊಡೌಲಿಯಾ, ಮೈದಾಗಿನ್, ಜ್ಞಾನವಾಪಿ, ಗೋಲ್ಗಡ್ಡಾ ಮೂಲಕ ಸಾಗಿದ ಯಾತ್ರೆ ಮಾಂಡುವಾಡಿಹ್ನಲ್ಲಿ ಕೊನೆಗೊಂಡಿತು. ಮುಸ್ಲಿಂ ಸಮುದಾಯದವರ ಪ್ರಾಬಲ್ಯವಿರುವ ಹಲವು ಪ್ರದೇಶಗಳ ಮೂಲಕ ಯಾತ್ರೆ ಸಾಗಿತು.</p>.<p><strong>ರಸ್ತೆ ಸ್ವಚ್ಛಗೊಳಿಸಿದ ಬಿಜೆಪಿ ಕಾರ್ಯಕರ್ತರು</strong> </p><p>ಲಖನೌ: ವಾರಾಣಸಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ‘ಭಾರತ ಜೋಡೊ ನ್ಯಾಯ ಯಾತ್ರೆ’ ಸಾಗಿದ ಬೆನ್ನಲ್ಲೇ ಆ ರಸ್ತೆಗಳನ್ನು ಬಿಜೆಪಿ ಕಾರ್ಯಕರ್ತರು ಗಂಗಾನದಿಯ ಪವಿತ್ರ ನೀರಿನಿಂದ ಸ್ವಚ್ಛಗೊಳಿಸಿದರು.</p><p>ಗಂಗಾಜಲ ತುಂಬಿದ್ದ ಬಕೆಟ್ಗಳನ್ನು ಹೊತ್ತು ತಂದ ಕೇಸರಿ ಪಕ್ಷದ ನೂರಾರು ಕಾರ್ಯಕರ್ತರು, ರಾಹುಲ್ ಯಾತ್ರೆಯ ಬಳಿಕ ಆ ಮಾರ್ಗವನ್ನು ತೊಳೆದರು. </p><p>‘ರಾಹುಲ್ ಅವರಿಗೆ ಸನಾತನ ಧರ್ಮದಲ್ಲಿ ನಂಬಿಕೆ ಇಲ್ಲ ಮತ್ತು ಅವರು ಮಾಂಸಾಹಾರಿ. ಅವರಿಂದ ಈ ಮಾರ್ಗ ಅಶುದ್ಧವಾಗಿದೆ’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದರು. ಈ ವೇಳೆ ಕೇಸರಿ ಪಕ್ಷದ ಕಾರ್ಯಕರ್ತರು<br>ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>