‘ಎರಡು ದಿನಗಳೊಳಗೆ ಕುಲಪತಿಗಳು ತೃಪ್ತಿದಾಯಕ ಉತ್ತರ ನೀಡದಿದ್ದರೆ, ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ’ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ. ಈ ಕುರಿತು ಶಿಕ್ಷಣ ಕಾರ್ಯದರ್ಶಿ ಬೈದ್ಯನಾಥ್ ಯಾದವ್ ಅವರು ಪತ್ರ ಹೊರಡಿಸಿದ್ದು, ಮಗಧ್ ವಿಶ್ವವಿದ್ಯಾಲಯ ಮತ್ತು ಕಾಮೇಶ್ವರ ಸಿಂಗ್ ದರ್ಭಾಂಗ್ ಸಂಸ್ಕೃತ ವಿಶ್ವವಿದ್ಯಾಲಯ ಹೊರತುಪಡಿಸಿ ಉಳಿದ ಎಲ್ಲ ಸರ್ಕಾರಿ ವಿ.ವಿಗಳ ಪರೀಕ್ಷಾ ನಿಯಂತ್ರಕರಿಗೂ ರವಾನಿಸಲಾಗಿದೆ.