‘ನನ್ನ ಕುಟುಂಬವನ್ನು ನಾಶಮಾಡಿದ್ದ ಹಾಗೂ ನನ್ನ ಅಸ್ತಿತ್ವಕ್ಕೇ ಬೆದರಿಕೆಯಾಗಿದ್ದವರು ಬಿಡುಗಡೆ ಆದಾಗ ನಾನು ಕುಸಿದುಹೋಗಿದ್ದೆ. ನನ್ನಲ್ಲಿನ ಧೈರ್ಯ ಮುಗಿದುಹೋಯಿತು ಅನಿಸಿತ್ತು. ಆದರೆ ದೇಶದ ಸಹಸ್ರಾರು ಮಂದಿ ಜನಸಾಮಾನ್ಯರು, ಮಹಿಳೆಯರು ಮುಂದೆ ಬಂದರು. ಅವರು ನನ್ನ ಜೊತೆ ನಿಂತರು. ಕರ್ನಾಟಕದ 29 ಜಿಲ್ಲೆಗಳಿಂದ ನನ್ನ ಪರವಾಗಿ ಜನ ಅನಿಸಿಕೆ ವ್ಯಕ್ತಪಡಿಸಿದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ.