‘2019ರ ಪೌರತ್ವ (ತಿದ್ದುಪಡಿ) ಕಾಯ್ದೆ ಯಾವುದೇ ಧರ್ಮಕ್ಕೆ ಸಂಬಂಧಿಸಿಲ್ಲವೆಂದಾದರೆ; ಹಿಂದು, ಸಿಖ್, ಬೌದ್ಧ, ಕ್ರೈಸ್ತ, ಪಾರ್ಸಿ ಮತ್ತು ಜೈನರಿಗೆ ಮಾತ್ರ ಎಂದು ನಾವು ಯಾಕೆ ಹೇಳುತ್ತಿದ್ದೇವೆ. ಮುಸ್ಲಿಮರನ್ನೂ ಯಾಕೆ ಸೇರಿಸಬಾರದು? ನಾವು ಪಾರದರ್ಶಕವಾಗಿರಬೇಕು’ ಎಂದುಬೋಸ್ ಟ್ವೀಟ್ ಮಾಡಿದ್ದಾರೆ.
If #CAA2019 is not related to any religion why are we stating - Hindu,Sikh,Boudha, Christians, Parsis & Jains only! Why not include #Muslims as well? Let's be transparent
‘ಭಾರತವನ್ನು ಬೇರೆ ಯಾವುದೇ ದೇಶಗಳೊಂದಿಗೆ ಹೋಲಿಸಬೇಡಿ ಮತ್ತು ಸಮೀಕರಿಸಿ ನೋಡಬೇಡಿ. ಇದು ಎಲ್ಲ ಧರ್ಮ ಮತ್ತು ಸಮುದಾಯಗಳವರಿಗೆ ಮುಕ್ತವಾಗಿರುವ ರಾಷ್ಟ್ರ’ ಎಂದು ಅವರು ಮತ್ತೊಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
Don't equate India or compare it with any other nation- as it's a nation Open to all religions and communities
ಪೌರತ್ವ ಕಾಯ್ದೆಗೆ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕಚಂದ್ರ ಕುಮಾರ್ ಬೋಸ್ ಸಹ ಕಾಯ್ದೆಯಲ್ಲಿರುವ ಅಂಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇವರುನೇತಾಜಿ ಸುಭಾಷ್ಚಂದ್ರ ಬೋಸ್ ಸಂಬಂಧಿಯೂ ಹೌದು.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ‘ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ಜಾರಿ ಮಾಡುವುದಿಲ್ಲ’ ಎಂದು ಪಕ್ಷದ ನಾಯಕರು ಸೋಮವಾರ ಹೇಳಿದ್ದರು. ಇದಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ ರೆಡ್ಡಿ ಅವರೂ ದನಿಗೂಡಿಸಿದ್ದರು.