<p><strong>ನವದೆಹಲಿ</strong>: ಹಿಂದಿ ಕಲಿಯದಿದ್ದಕ್ಕಾಗಿ ಆಫ್ರಿಕನ್ ಪ್ರಜೆಯೊಬ್ಬರಿಗೆ ಬಿಜೆಪಿ ಕೌನ್ಸಿಲರ್ ರೇಣು ಚೌಧರಿ ಅವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p><p>ಪೂರ್ವ ದೆಹಲಿಯ ಪತ್ಪರ್ಗಂಜ್ ಕೌನ್ಸಿಲರ್ ಆಗಿರುವ ಚೌಧರಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ ಉದ್ಯಾನದಲ್ಲಿ ಮಕ್ಕಳಿಗೆ ಫುಟ್ಬಾಲ್ ತರಬೇತಿ ನೀಡುತ್ತಿರುವ ಆಫ್ರಿಕನ್ ಪ್ರಜೆಯನ್ನು ಮಾತನಾಡಿಸಿದ್ದಾರೆ. </p><p>ಈ ವೇಳೆ ಭಾಷೆ ಕಲಿಯುವಂತೆ ತಾವು ಈ ಹಿಂದೆ ನೀಡಿದ ಸಲಹೆಯನ್ನು ನಿರ್ಲಕ್ಷ್ಯಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ಭಾಷೆ ಕಲಿಯದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p><p>ಭಾರತದಲ್ಲಿ ಹಣ ಸಂಪಾದಿಸುವ ಪ್ರತಿಯೊಬ್ಬರು ಅಲ್ಲಿನ ಭಾಷೆ ಕಲಿಯಬೇಕು ಎಂದೂ ಅವರು ಹೇಳಿದ್ದಾರೆ.</p><p>ಚೌಧರಿ ಅವರ ನಡೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು, ಹಿಂದಿಯೇತರ ರಾಜ್ಯದಲ್ಲಿರುವ ನಿಮ್ಮವರಿಗೂ ಇದೇ ಉಪದೇಶ ನೀಡಿ ಎಂದು ಹೇಳಿದ್ದಾರೆ.</p><p>ಇನ್ನು, ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಚೌಧರಿ, ‘ಆ ವ್ಯಕ್ತಿಗೆ ಹಿಂದಿ ಕಲಿಯುವಂತೆ ಎಂಟು ತಿಂಗಳ ಹಿಂದೆಯೇ ಸಲಹೆ ನೀಡಿದ್ದೆ. ಹಿಂದಿ ಕಲಿಯುವುದಾದರೆ ತರಬೇತಿಗೆ ತಗಲುವ ವೆಚ್ಚವನ್ನು ನಾನೇ ಭರಿಸುವುದಾಗಿಯೂ ಹೇಳಿದ್ದೆ’ ಎಂದಿದ್ದಾರೆ.</p><p>ತೆರಿಗೆ ಪಾವತಿಸಿದೆ ಆ ವ್ಯಕ್ತಿ ಉದ್ಯಾನದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಸ್ಪಚ್ಛತೆಯನ್ನು ಕಾಪಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಿಂದಿ ಕಲಿಯದಿದ್ದಕ್ಕಾಗಿ ಆಫ್ರಿಕನ್ ಪ್ರಜೆಯೊಬ್ಬರಿಗೆ ಬಿಜೆಪಿ ಕೌನ್ಸಿಲರ್ ರೇಣು ಚೌಧರಿ ಅವರು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.</p><p>ಪೂರ್ವ ದೆಹಲಿಯ ಪತ್ಪರ್ಗಂಜ್ ಕೌನ್ಸಿಲರ್ ಆಗಿರುವ ಚೌಧರಿ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ಗೆ ಸೇರಿದ ಉದ್ಯಾನದಲ್ಲಿ ಮಕ್ಕಳಿಗೆ ಫುಟ್ಬಾಲ್ ತರಬೇತಿ ನೀಡುತ್ತಿರುವ ಆಫ್ರಿಕನ್ ಪ್ರಜೆಯನ್ನು ಮಾತನಾಡಿಸಿದ್ದಾರೆ. </p><p>ಈ ವೇಳೆ ಭಾಷೆ ಕಲಿಯುವಂತೆ ತಾವು ಈ ಹಿಂದೆ ನೀಡಿದ ಸಲಹೆಯನ್ನು ನಿರ್ಲಕ್ಷ್ಯಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ಒಂದು ತಿಂಗಳೊಳಗೆ ಭಾಷೆ ಕಲಿಯದಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.</p><p>ಭಾರತದಲ್ಲಿ ಹಣ ಸಂಪಾದಿಸುವ ಪ್ರತಿಯೊಬ್ಬರು ಅಲ್ಲಿನ ಭಾಷೆ ಕಲಿಯಬೇಕು ಎಂದೂ ಅವರು ಹೇಳಿದ್ದಾರೆ.</p><p>ಚೌಧರಿ ಅವರ ನಡೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು, ಹಿಂದಿಯೇತರ ರಾಜ್ಯದಲ್ಲಿರುವ ನಿಮ್ಮವರಿಗೂ ಇದೇ ಉಪದೇಶ ನೀಡಿ ಎಂದು ಹೇಳಿದ್ದಾರೆ.</p><p>ಇನ್ನು, ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಚೌಧರಿ, ‘ಆ ವ್ಯಕ್ತಿಗೆ ಹಿಂದಿ ಕಲಿಯುವಂತೆ ಎಂಟು ತಿಂಗಳ ಹಿಂದೆಯೇ ಸಲಹೆ ನೀಡಿದ್ದೆ. ಹಿಂದಿ ಕಲಿಯುವುದಾದರೆ ತರಬೇತಿಗೆ ತಗಲುವ ವೆಚ್ಚವನ್ನು ನಾನೇ ಭರಿಸುವುದಾಗಿಯೂ ಹೇಳಿದ್ದೆ’ ಎಂದಿದ್ದಾರೆ.</p><p>ತೆರಿಗೆ ಪಾವತಿಸಿದೆ ಆ ವ್ಯಕ್ತಿ ಉದ್ಯಾನದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ. ಸ್ಪಚ್ಛತೆಯನ್ನು ಕಾಪಾಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>