<p><strong>ಕೋಲ್ಕತ್ತ:</strong> ಬಿಜೆಪಿ ಶಾಸಕ ಸೌಮೆನ್ ರಾಯ್ ಶನಿವಾರ ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಪಕ್ಷವನ್ನು ತೊರೆದಿದ್ದು ನನ್ನ ತಪ್ಪು ನಿರ್ಧಾರ ಎಂದು ಅವರು ಹೇಳಿದ್ದಾರೆ.</p>.<p>ಏಪ್ರಿಲ್-ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಪಕ್ಷವನ್ನು ತೊರೆದು ಟಿಎಂಸಿಗೆ ಸೇರಿದ ನಾಲ್ಕನೇ ಬಿಜೆಪಿ ಶಾಸಕರಾಗಿದ್ದಾರೆ.</p>.<p>ಅವರ ರಾಜೀನಾಮೆಯಿಂದ 294 ಸದಸ್ಯರ ಬಲದ ಸದನದಲ್ಲಿ ಬಿಜೆಪಿಯ ಬಲವು ಈಗ 71ಕ್ಕೆ ಇಳಿದಿದೆ.</p>.<p>ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಕಲಿಯಗಂಜ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಯ್, ಸಿಎಂ ಮಮತಾ ಬ್ಯಾನರ್ಜಿಯವರ ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಲು ಪಕ್ಷಕ್ಕೆ ಮರಳಿದ್ದಾಗಿ ಹೇಳಿದ್ದಾರೆ.</p>.<p>‘ನಾನು ಟಿಎಂಸಿಯನ್ನು ತೊರೆದಿದ್ದರೂ ನನ್ನ ಮನಸ್ಸು ಮತ್ತು ಆತ್ಮವು ಟಿಎಂಸಿಯಲ್ಲಿಯೇ ಉಳಿದಿತ್ತು. ಹಲವು ವರ್ಷಗಳಿಂದ ಇದ್ದ ಟಿಎಂಸಿ ಪಕ್ಷ ಬಿಟ್ಟಿದ್ದು ನನ್ನ ತಪ್ಪು’ಎಂದು ಅವರು ಹೇಳಿದರು.</p>.<p>ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಅವರು ಕೃಷ್ಣನಗರ ದಕ್ಷಿಣ ಕ್ಷೇತ್ರದಿಂದ ಕೇಸರಿ ಪಕ್ಷದ ಟಿಕೆಟ್ ಮೇಲೆ ಆಯ್ಕೆಯಾದ ನಂತರ ಮೇ ತಿಂಗಳಲ್ಲಿ ಪುತ್ರ ಸುಭ್ರಾನ್ಸು ಅವರೊಂದಿಗೆ ಟಿಎಂಸಿಗೆ ಮರಳಿದ್ದರು. ಅವರ ನಂತರ ಇನ್ನೂ ಮೂರು ಶಾಸಕರು ಟಿಎಂಸಿಗೆ ಮರಳಿದ್ದರು.</p>.<p>‘ಯಾರೇ ಪಕ್ಷವನ್ನು ತೊರೆದರೂ ಅದು ಅವರ ನಿರ್ಧಾರ. ಆದರೆ, ಪಕ್ಷವು ಅವರ ಅನರ್ಹತೆಯನ್ನು ಬಯಸುತ್ತದೆ’ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ:</strong> ಬಿಜೆಪಿ ಶಾಸಕ ಸೌಮೆನ್ ರಾಯ್ ಶನಿವಾರ ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ಮರಳಿದ್ದಾರೆ. ಎರಡು ವರ್ಷಗಳ ಹಿಂದೆ ಪಕ್ಷವನ್ನು ತೊರೆದಿದ್ದು ನನ್ನ ತಪ್ಪು ನಿರ್ಧಾರ ಎಂದು ಅವರು ಹೇಳಿದ್ದಾರೆ.</p>.<p>ಏಪ್ರಿಲ್-ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯ ನಂತರ ಪಕ್ಷವನ್ನು ತೊರೆದು ಟಿಎಂಸಿಗೆ ಸೇರಿದ ನಾಲ್ಕನೇ ಬಿಜೆಪಿ ಶಾಸಕರಾಗಿದ್ದಾರೆ.</p>.<p>ಅವರ ರಾಜೀನಾಮೆಯಿಂದ 294 ಸದಸ್ಯರ ಬಲದ ಸದನದಲ್ಲಿ ಬಿಜೆಪಿಯ ಬಲವು ಈಗ 71ಕ್ಕೆ ಇಳಿದಿದೆ.</p>.<p>ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಕಲಿಯಗಂಜ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಯ್, ಸಿಎಂ ಮಮತಾ ಬ್ಯಾನರ್ಜಿಯವರ ಅಭಿವೃದ್ಧಿ ಕೆಲಸದಲ್ಲಿ ಭಾಗಿಯಾಗಲು ಪಕ್ಷಕ್ಕೆ ಮರಳಿದ್ದಾಗಿ ಹೇಳಿದ್ದಾರೆ.</p>.<p>‘ನಾನು ಟಿಎಂಸಿಯನ್ನು ತೊರೆದಿದ್ದರೂ ನನ್ನ ಮನಸ್ಸು ಮತ್ತು ಆತ್ಮವು ಟಿಎಂಸಿಯಲ್ಲಿಯೇ ಉಳಿದಿತ್ತು. ಹಲವು ವರ್ಷಗಳಿಂದ ಇದ್ದ ಟಿಎಂಸಿ ಪಕ್ಷ ಬಿಟ್ಟಿದ್ದು ನನ್ನ ತಪ್ಪು’ಎಂದು ಅವರು ಹೇಳಿದರು.</p>.<p>ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್ ರಾಯ್ ಅವರು ಕೃಷ್ಣನಗರ ದಕ್ಷಿಣ ಕ್ಷೇತ್ರದಿಂದ ಕೇಸರಿ ಪಕ್ಷದ ಟಿಕೆಟ್ ಮೇಲೆ ಆಯ್ಕೆಯಾದ ನಂತರ ಮೇ ತಿಂಗಳಲ್ಲಿ ಪುತ್ರ ಸುಭ್ರಾನ್ಸು ಅವರೊಂದಿಗೆ ಟಿಎಂಸಿಗೆ ಮರಳಿದ್ದರು. ಅವರ ನಂತರ ಇನ್ನೂ ಮೂರು ಶಾಸಕರು ಟಿಎಂಸಿಗೆ ಮರಳಿದ್ದರು.</p>.<p>‘ಯಾರೇ ಪಕ್ಷವನ್ನು ತೊರೆದರೂ ಅದು ಅವರ ನಿರ್ಧಾರ. ಆದರೆ, ಪಕ್ಷವು ಅವರ ಅನರ್ಹತೆಯನ್ನು ಬಯಸುತ್ತದೆ’ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>