<p><strong>ನವದೆಹಲಿ</strong>: ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಕೆಂಪು ಬಣ್ಣದಲ್ಲಿ ‘1984’ ಎಂದು ಬರೆದ ಕೈಚೀಲವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಶುಕ್ರವಾರ ಉಡುಗೊರೆಯಾಗಿ ನೀಡಿದ್ದಾರೆ.</p>.<p>ಪ್ಯಾಲೆಸ್ಟೀನ್ ಜನರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ಬರಹ ಇದ್ದ ಕೈಚೀಲವನ್ನು ಹಿಡಿದುಕೊಂಡು ಪ್ರಿಯಾಂಕಾ ಅವರು ಸಂಸತ್ತಿಗೆ ಬಂದ ಕೆಲ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.</p>.<p class="bodytext">ಭುನವೇಶ್ವರ ಕ್ಷೇತ್ರದ ಸಂಸದೆ ಸಾರಂಗಿ ಅವರು ಸಂಸತ್ ಕಟ್ಟಡದ ಮೊಗಸಾಲೆಯಲ್ಲಿ ಪ್ರಿಯಾಂಕಾ ಅವರಿಗೆ ಈ ಕೈಚೀಲ ನೀಡಿದ್ದಾರೆ. ಸಾರಂಗಿ ಅವರಿಂದ ಕೈಚೀಲ ಪಡೆದ ಪ್ರಿಯಾಂಕಾ ಮರು ಮಾತನಾಡದೆ ಅಲ್ಲಿಂದ ತೆರಳಿದ್ದಾರೆ.</p>.<p class="bodytext">‘ಕೈಚೀಲದಲ್ಲಿ ‘1984ರ ಗಲಭೆ’ ಎಂದು ಬರೆಯಲಾಗಿದೆ. ಪ್ರಿಯಾಂಕಾ ಅವರು ಕೈಚೀಲದಲ್ಲಿ ಬರಹಗಳ ಮೂಲಕ ವಿವಿಧ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ಕೂಡಾ ಅವರು ಪ್ರಸ್ತಾಪಿಸಬೇಕಾದ ವಿಷಯ’ ಎಂದು ಸಾರಂಗಿ ಹೇಳಿದ್ದಾರೆ.</p>.<p>ಇಸ್ರೇಲ್–ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ಟೀನ್ ಜನರ ಪರ ಬೆಂಬಲ ಸೂಚಿಸಲು ಪ್ರಿಯಾಂಕಾ ಅವರು ಸೋಮವಾರ ‘ಪ್ಯಾಲೆಸ್ಟೀನ್’ ಎಂದು ಬರೆದಿದ್ದ ಕೈಚೀಲದೊಂದಿಗೆ ಸಂಸತ್ತಿಗೆ ಬಂದಿದ್ದರು.</p>.<p>ಅದರ ಮರುದಿನ ಅವರು ‘ಬಾಂಗ್ಲಾದೇಶ್ ಕೆ ಹಿಂದೂ ಔರ್ ಈಸಾಯಿಯೋಂಕೆ ಸಾಥ್ ಖಢೆ ಹೊ’ (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲಿ) ಎಂಬ ಬರಹ ಇದ್ದ ಕೈಚೀಲ ಹಿಡಿದುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರು ಕೆಂಪು ಬಣ್ಣದಲ್ಲಿ ‘1984’ ಎಂದು ಬರೆದ ಕೈಚೀಲವನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಶುಕ್ರವಾರ ಉಡುಗೊರೆಯಾಗಿ ನೀಡಿದ್ದಾರೆ.</p>.<p>ಪ್ಯಾಲೆಸ್ಟೀನ್ ಜನರು ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಪರ ಬರಹ ಇದ್ದ ಕೈಚೀಲವನ್ನು ಹಿಡಿದುಕೊಂಡು ಪ್ರಿಯಾಂಕಾ ಅವರು ಸಂಸತ್ತಿಗೆ ಬಂದ ಕೆಲ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.</p>.<p class="bodytext">ಭುನವೇಶ್ವರ ಕ್ಷೇತ್ರದ ಸಂಸದೆ ಸಾರಂಗಿ ಅವರು ಸಂಸತ್ ಕಟ್ಟಡದ ಮೊಗಸಾಲೆಯಲ್ಲಿ ಪ್ರಿಯಾಂಕಾ ಅವರಿಗೆ ಈ ಕೈಚೀಲ ನೀಡಿದ್ದಾರೆ. ಸಾರಂಗಿ ಅವರಿಂದ ಕೈಚೀಲ ಪಡೆದ ಪ್ರಿಯಾಂಕಾ ಮರು ಮಾತನಾಡದೆ ಅಲ್ಲಿಂದ ತೆರಳಿದ್ದಾರೆ.</p>.<p class="bodytext">‘ಕೈಚೀಲದಲ್ಲಿ ‘1984ರ ಗಲಭೆ’ ಎಂದು ಬರೆಯಲಾಗಿದೆ. ಪ್ರಿಯಾಂಕಾ ಅವರು ಕೈಚೀಲದಲ್ಲಿ ಬರಹಗಳ ಮೂಲಕ ವಿವಿಧ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಇದು ಕೂಡಾ ಅವರು ಪ್ರಸ್ತಾಪಿಸಬೇಕಾದ ವಿಷಯ’ ಎಂದು ಸಾರಂಗಿ ಹೇಳಿದ್ದಾರೆ.</p>.<p>ಇಸ್ರೇಲ್–ಹಮಾಸ್ ಯುದ್ಧದಲ್ಲಿ ಪ್ಯಾಲೆಸ್ಟೀನ್ ಜನರ ಪರ ಬೆಂಬಲ ಸೂಚಿಸಲು ಪ್ರಿಯಾಂಕಾ ಅವರು ಸೋಮವಾರ ‘ಪ್ಯಾಲೆಸ್ಟೀನ್’ ಎಂದು ಬರೆದಿದ್ದ ಕೈಚೀಲದೊಂದಿಗೆ ಸಂಸತ್ತಿಗೆ ಬಂದಿದ್ದರು.</p>.<p>ಅದರ ಮರುದಿನ ಅವರು ‘ಬಾಂಗ್ಲಾದೇಶ್ ಕೆ ಹಿಂದೂ ಔರ್ ಈಸಾಯಿಯೋಂಕೆ ಸಾಥ್ ಖಢೆ ಹೊ’ (ಬಾಂಗ್ಲಾದೇಶದ ಹಿಂದೂಗಳು ಮತ್ತು ಕ್ರೈಸ್ತರ ಪರವಾಗಿ ನಿಲ್ಲಿ) ಎಂಬ ಬರಹ ಇದ್ದ ಕೈಚೀಲ ಹಿಡಿದುಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>