<p><strong>ಕೋಲ್ಕತ್ತ: </strong>ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತ ಮೊಂಡಲ್ ಖಾನ್ ಅವರು ಸೋಮವಾರ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.</p>.<p>‘2019 ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯ ಸಿಗುವಂತೆ ಮಾಡಲು ನಾನು ಶ್ರಮ ವಹಿಸಿದೆ. ಆದರೆ ಬಿಜೆಪಿಯಲ್ಲಿ ನನಗೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ’ ಎಂದು ಸುಜಾತ್ ಖಾನ್ ಅವರು ದೂರಿದ್ದಾರೆ.</p>.<p>‘ಬಿಜೆಪಿಯಲ್ಲಿ ನಿಷ್ಠಾವಂತರಿಗಿಂತ ಹೊಸದಾಗಿ ಸೇರ್ಪಡೆಯಾದವರಿಗೆ ಮತ್ತು ಭ್ರಷ್ಟ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.</p>.<p>ಟಿಎಂಸಿ ಸಂಸದ ಸೌಗತ್ ರಾಯ್ ಮತ್ತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರ ಉಪಸ್ಥಿತಿಯಲ್ಲಿ ಸುಜಾತ ಮೊಂಡಲ್ ಅವರು ಸೋಮವಾರ ಟಿಎಂಸಿ ಪಕ್ಷಗೆ ಸೇರ್ಪಡೆಯಾದರು. ಈ ಬಳಿಕ ಮಾತನಾಡಿದ ಅವರು, ‘ದಾಳಿ ನಡೆದರೂ ಸಹಿಸಿಕೊಂಡು, ಚುನಾವಣೆಯಲ್ಲಿ ಪತಿಗೆ ಗೆಲುವನ್ನು ಒದಗಿಸಲು ಬಹಳ ತ್ಯಾಗಗಳನ್ನು ಮಾಡಿದ್ದೇನೆ. ಆದರೂ ನನಗೆ ಪ್ರತಿಫಲ ದೊರಕಲಿಲ್ಲ. ಹಾಗಾಗಿ ಮಮತಾ ಬ್ಯಾನರ್ಜಿ ಮತ್ತು ಅಣ್ಣ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂದಿದ್ದಾರೆ.</p>.<p>‘ಸೌಮಿತ್ರ ಖಾನ್ ಅವರು ತಮ್ಮ ಭವಿಷ್ಯವನ್ನು ಸ್ವಯಂ ನಿರ್ಧರಿಸಲಿ. ಒಂದಲ್ಲ ಒಂದು ದಿನ ಅವರಿಗೆ ಈ ಬಗ್ಗೆ ಅರಿವು ಮೂಡಲಿದೆ. ಆಗ ಅವರು ಟಿಎಂಸಿಗೆ ಬರಲಿದ್ದಾರೆ’ ಎಂದು ಸುಜಾತ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ: </strong>ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತ ಮೊಂಡಲ್ ಖಾನ್ ಅವರು ಸೋಮವಾರ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.</p>.<p>‘2019 ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯ ಸಿಗುವಂತೆ ಮಾಡಲು ನಾನು ಶ್ರಮ ವಹಿಸಿದೆ. ಆದರೆ ಬಿಜೆಪಿಯಲ್ಲಿ ನನಗೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ’ ಎಂದು ಸುಜಾತ್ ಖಾನ್ ಅವರು ದೂರಿದ್ದಾರೆ.</p>.<p>‘ಬಿಜೆಪಿಯಲ್ಲಿ ನಿಷ್ಠಾವಂತರಿಗಿಂತ ಹೊಸದಾಗಿ ಸೇರ್ಪಡೆಯಾದವರಿಗೆ ಮತ್ತು ಭ್ರಷ್ಟ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.</p>.<p>ಟಿಎಂಸಿ ಸಂಸದ ಸೌಗತ್ ರಾಯ್ ಮತ್ತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರ ಉಪಸ್ಥಿತಿಯಲ್ಲಿ ಸುಜಾತ ಮೊಂಡಲ್ ಅವರು ಸೋಮವಾರ ಟಿಎಂಸಿ ಪಕ್ಷಗೆ ಸೇರ್ಪಡೆಯಾದರು. ಈ ಬಳಿಕ ಮಾತನಾಡಿದ ಅವರು, ‘ದಾಳಿ ನಡೆದರೂ ಸಹಿಸಿಕೊಂಡು, ಚುನಾವಣೆಯಲ್ಲಿ ಪತಿಗೆ ಗೆಲುವನ್ನು ಒದಗಿಸಲು ಬಹಳ ತ್ಯಾಗಗಳನ್ನು ಮಾಡಿದ್ದೇನೆ. ಆದರೂ ನನಗೆ ಪ್ರತಿಫಲ ದೊರಕಲಿಲ್ಲ. ಹಾಗಾಗಿ ಮಮತಾ ಬ್ಯಾನರ್ಜಿ ಮತ್ತು ಅಣ್ಣ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂದಿದ್ದಾರೆ.</p>.<p>‘ಸೌಮಿತ್ರ ಖಾನ್ ಅವರು ತಮ್ಮ ಭವಿಷ್ಯವನ್ನು ಸ್ವಯಂ ನಿರ್ಧರಿಸಲಿ. ಒಂದಲ್ಲ ಒಂದು ದಿನ ಅವರಿಗೆ ಈ ಬಗ್ಗೆ ಅರಿವು ಮೂಡಲಿದೆ. ಆಗ ಅವರು ಟಿಎಂಸಿಗೆ ಬರಲಿದ್ದಾರೆ’ ಎಂದು ಸುಜಾತ್ ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>