‘ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಎಸ್.ಜೈಶಂಕರ್ ಅವರು ತಾವು ತಮಿಳರು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ ಅವರು ತಮಿಳ್ ಇಸೈ ಸೌಂದರರಾಜನ್, ಎಲ್.ಮುರುಗನ್ ಮತ್ತು ಕೆ.ಅಣ್ಣಾಮಲೈ ಅವರಂತೆ ತಮಿಳುನಾಡಿನಿಂದಲೇ ಚುನಾವಣೆಗೆ ಸ್ಪರ್ಧಿಸಿ, ಕಚ್ಚತೀವು ವಿಷಯದ ಬಗ್ಗೆ ಚರ್ಚಿಸಲಿ. ಯಾಕೆ ಅವರು ಇಲ್ಲಿಂದ ಸ್ಪರ್ಧಿಸಲ್ಲ. ಯಾಕೆ ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಅವಿತುಕೊಂಡು ಈ ವಿಷಯದ ಬಗ್ಗೆ ಮಾತನಾಡುತ್ತಾರೆ’ ಎಂದು ಪ್ರಶ್ನಿಸಿದರು.