‘ನೀವು ಅನುಭವಸ್ಥ ನಾಯಕರು. ನಿಮ್ಮ ಆಯ್ಕೆಗಾಗಿ ಅಭಿನಂದನೆ. ಎಲ್ಲ ಶಾಸಕರೂ ನಿಮ್ಮನ್ನು ಬೆಂಬಲಿಸಿದ್ದಾರೆ. ಆಡಳಿತ ಹಾಗೂ ವಿರೋಧ ಪಕ್ಷ ಎರಡರ ಅಭಿಪ್ರಾಯಗಳನ್ನೂ ನೀವು ಆಲಿಸುವಿರಿ ಎನ್ನುವುದರಲ್ಲಿ ಅನುಮಾನವಿಲ್ಲ’ ಎಂದು ನಿತೀಶ್ ಕುಮಾರ್ ಹೇಳಿದರು. ತೇಜಸ್ವಿ ಯಾದವ್ ಸಹ ಈ ಅಭಿಪ್ರಾಯವನ್ನು ಪುನರುಚ್ಚರಿಸಿದರು. ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಕುಮಾರ್ ಸಿನ್ಹ ಅವರೂ ಹೊಸ ಸ್ಪೀಕರ್ಗೆ ಅಭಿನಂದನೆ ಹೇಳಿದರು.