<p><strong>ಮುಜಾಫ್ಫರ್ನಗರ</strong>: ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮಾಜಿ ನಾಯಕ ರಾಕೇಶ್ ಟಿಕಾಯತ್ ಅವರು ಪಾಲ್ಗೊಂಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಶನಿವಾರ ನಗರದಲ್ಲಿ ‘ತುರ್ತು ಕಿಸಾನ್ ಪಂಚಾಯತಿ’ಗೆ ಬಿಕೆಯು ಕರೆ ನೀಡಿದೆ.</p>.<p>ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು. ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರ್ಎಲ್ಡಿ ಶಾಸಕ ರಾಜ್ಪಾಲ್ ಬಲಿಯಾನ್ ಅವರು ಆಗ್ರಹಿಸಿದ್ದಾರೆ.</p>.<p>‘ಮುಜಾಫ್ಫರ್ ನಗರದ ಜಿಐಸಿ ಮೈದಾನದಲ್ಲಿ ಪಂಚಾಯಿತಿ ನಡೆಯಲಿದೆ. ‘ಆಕ್ರೋಶ ರ್ಯಾಲಿ’ಯಲ್ಲಿ ನಡೆದ ಘಟನೆಯು ರೈತರ ಚಳವಳಿಯನ್ನು ದುರ್ಬಲಗೊಳಿಸುವ ಉದ್ದೇಶದ ರಾಜಕೀಯ ಪಕ್ಷವೊಂದರ ಪಿತೂರಿಯ ಭಾಗ’ ಎಂದು ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದರು.</p>.<p><strong>ಘಟನೆ ಏನು?: </strong></p>.<p>ಬಲಪಂಥೀಯ ಸಂಘಟನೆಗಳು ಪಹಲ್ಗಾಮ್ ದಾಳಿ ವಿರುದ್ಧ ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ರ್ಯಾಲಿಯಲ್ಲಿ ಟಿಕಾಯತ್ ಅವರು ಭಾಗಿಯಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು ಮತ್ತು ಹೊರಹೋಗುವಂತೆ ಹೇಳಲಾಯಿತು. ಈ ಸಂದರ್ಭದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಟಿಕಾಯತ್ ಅವರು ಧರಿಸಿದ್ದ ಟರ್ಬನ್ ನೆಲಕ್ಕೆ ಬಿತ್ತು. ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<div><blockquote>ರೈತರ ಧ್ವನಿಯನ್ನು ದಮನಗೊಳಿಸಲು ರಾಜಕೀಯ ಪಕ್ಷವೊಂದು ಮಾಡಿರುವ ಪಿತೂರಿ ಇದು. ರ್ಯಾಲಿಯನ್ನು ಹಾಳು ಮಾಡಲೆಂದೇ ಕೆಲವು ಯುವಕರನ್ನು ಕಳುಹಿಸಲಾಗಿತ್ತು </blockquote><span class="attribution">ರಾಕೇಶ್ ಟಿಕಾಯತ್ ರೈತ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಜಾಫ್ಫರ್ನಗರ</strong>: ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಮಾಜಿ ನಾಯಕ ರಾಕೇಶ್ ಟಿಕಾಯತ್ ಅವರು ಪಾಲ್ಗೊಂಡಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಶನಿವಾರ ನಗರದಲ್ಲಿ ‘ತುರ್ತು ಕಿಸಾನ್ ಪಂಚಾಯತಿ’ಗೆ ಬಿಕೆಯು ಕರೆ ನೀಡಿದೆ.</p>.<p>ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು. ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಆರ್ಎಲ್ಡಿ ಶಾಸಕ ರಾಜ್ಪಾಲ್ ಬಲಿಯಾನ್ ಅವರು ಆಗ್ರಹಿಸಿದ್ದಾರೆ.</p>.<p>‘ಮುಜಾಫ್ಫರ್ ನಗರದ ಜಿಐಸಿ ಮೈದಾನದಲ್ಲಿ ಪಂಚಾಯಿತಿ ನಡೆಯಲಿದೆ. ‘ಆಕ್ರೋಶ ರ್ಯಾಲಿ’ಯಲ್ಲಿ ನಡೆದ ಘಟನೆಯು ರೈತರ ಚಳವಳಿಯನ್ನು ದುರ್ಬಲಗೊಳಿಸುವ ಉದ್ದೇಶದ ರಾಜಕೀಯ ಪಕ್ಷವೊಂದರ ಪಿತೂರಿಯ ಭಾಗ’ ಎಂದು ಬಿಕೆಯು ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದರು.</p>.<p><strong>ಘಟನೆ ಏನು?: </strong></p>.<p>ಬಲಪಂಥೀಯ ಸಂಘಟನೆಗಳು ಪಹಲ್ಗಾಮ್ ದಾಳಿ ವಿರುದ್ಧ ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ರ್ಯಾಲಿಯಲ್ಲಿ ಟಿಕಾಯತ್ ಅವರು ಭಾಗಿಯಾಗಿದ್ದಕ್ಕೆ ವಿರೋಧ ವ್ಯಕ್ತಪಡಿಸಲಾಯಿತು ಮತ್ತು ಹೊರಹೋಗುವಂತೆ ಹೇಳಲಾಯಿತು. ಈ ಸಂದರ್ಭದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿ ಟಿಕಾಯತ್ ಅವರು ಧರಿಸಿದ್ದ ಟರ್ಬನ್ ನೆಲಕ್ಕೆ ಬಿತ್ತು. ಈ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<div><blockquote>ರೈತರ ಧ್ವನಿಯನ್ನು ದಮನಗೊಳಿಸಲು ರಾಜಕೀಯ ಪಕ್ಷವೊಂದು ಮಾಡಿರುವ ಪಿತೂರಿ ಇದು. ರ್ಯಾಲಿಯನ್ನು ಹಾಳು ಮಾಡಲೆಂದೇ ಕೆಲವು ಯುವಕರನ್ನು ಕಳುಹಿಸಲಾಗಿತ್ತು </blockquote><span class="attribution">ರಾಕೇಶ್ ಟಿಕಾಯತ್ ರೈತ ನಾಯಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>