<p><strong>ಕಣ್ಣೂರು(ಕೇರಳ):</strong> ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್ಒ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೆಲಸದ ಒತ್ತಡ ಇತ್ತು ಎಂದು ಹೇಳಲಾಗಿದೆ.</p>.<p>ಪಯ್ಯಣ್ಣೂರು ಸರ್ಕಾರಿ ಶಾಲೆಯ ಗುಮಾಸ್ತರಾಗಿದ್ದ ಅನೀಶ್ ಜಾರ್ಜ್ ಮೃತ ವ್ಯಕ್ತಿ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೆಲಸದ ಒತ್ತಡದಿಂದಲೇ ಅನೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.</p>.<p>ಅನೀಶ್ ಮೃತದೇಹ ಅವರ ಮನೆಯ ಮೊದಲ ಮಹಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಬಿಎಲ್ಒ ಕರ್ತವ್ಯದ ಒತ್ತಡದಲ್ಲಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p>.<p>ಅತಿಯಾದ ಕೆಲಸ ಮತ್ತು ಎಸ್ಐಆರ್ ಅನ್ನು ಬೇಗ ಮುಗಿಸುವ ಒತ್ತಡದ ಬಗ್ಗೆ ಅನೀಶ್ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಅನೀಶ್ ಕುಟುಂಬದ ಆಪ್ತ ಶ್ಯಾಮ್ ಎಂಬುವವರು ಹೇಳಿದ್ದಾರೆ.</p>.<p>ಭಾನುವಾರ ಮುಂಜಾನೆ 2 ಗಂಟೆವರೆಗೂ ಅನೀಶ್ ಕೆಲಸ ಮಾಡುತ್ತಿದ್ದರು. ಎಸ್ಐಆರ್ ಅರ್ಜಿಗಳನ್ನು ಭರ್ತಿ ಮಾಡುವ ಮತ್ತು ತನಗೆ ನೀಡಿದ ಪ್ರದೇಶದ ಪ್ರತಿಯೊಬ್ಬರಿಗೂ ವಿತರಿಸುವ ಒತ್ತಡದಲ್ಲಿ ಅವರು ಇದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.</p>.<p>ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಣ್ಣೂರು ಜಿಲ್ಲಾಧಿಕಾರಿ ಬಳಿ ಘಟನೆಯ ಕುರಿತು ವರದಿ ಕೇಳಿದ್ದೇವೆ. ಬಿಎಸ್ಒಗಳಿಗೆ ಕಾರ್ಯದೊತ್ತಡ ಇರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ರತನ್.ಯು ಕೇಲ್ಕರ್ ತಿಳಿಸಿದ್ದಾರೆ.</p>.<p>ಎಸ್ಐಆರ್ ನಡೆಯುವ 31 ದಿನಗಳವರೆಗೆ ಬಿಎಲ್ಒಗಳು ಮತ್ಯಾವುದೇ ಕೆಲಸ ಮಾಡುವ ಅಗತ್ಯ ಇಲ್ಲ. ಹೀಗಾಗಿ ಒತ್ತಡ ಉದ್ಭವಿಸದು. ತನಿಖಾ ವರದಿ ನಂತರ ಎಲ್ಲವೂ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.</p>.<p>ಕುಟುಂಬದ ಇತರೆ ಸದಸ್ಯರು ಚರ್ಚ್ಗೆ ಹೋಗಿದ್ದಾಗ ಭಾನುವಾರ ಮುಂಜಾನೆ ಅನೀಶ್ ಜಾರ್ಜ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎಸ್ಐಆರ್ ಕೆಲಸದಿಂದಾಗಿ ಜಾರ್ಜ್ ಚರ್ಚ್ಗೆ ಹೋಗಿರಲಿಲ್ಲ. ಅವರಿಗೆ ತಂದೆ–ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಇದ್ದರು.</p>.<p>ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಎಸ್ಐಆರ್ ಅನ್ನು ತೀವ್ರವಾಗಿ ವಿರೋಧಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. </p>.<p>‘ಅನೀಶ್ ಅವರಿಗೆ ಎಲ್ಲರ ಮನೆಗಳ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಮತಗಟ್ಟೆ ಏಜೆಂಟ್ ಸಹಕಾರವನ್ನು ಅವರು ಪಡೆಯುತ್ತಿದ್ದರು. ಇದರಿಂದಾಗಿ ಇತರೆ ಪಕ್ಷಗಳ ಕಾರ್ಯಕರ್ತರು ಅವರನ್ನು ಬೆದರಿಸಿದ್ದರು’ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.</p>.<p>ತನಗೆ ಆಗುತ್ತಿರುವ ಕೆಲಸದ ಒತ್ತಡದ ಬಗ್ಗೆ ಅನೀಶ್ ಜಾರ್ಜ್ ಜಿಲ್ಲಾಧಿಕಾರಿಗೆ ಈಗಾಗಲೇ ದೂರು ನೀಡಿದ್ದರು ಎಂದು ಖಚಿತಪಡಿಸದ ವರದಿಗಳು ಹರಿದಾಡುತ್ತಿವೆ.</p>. <p>ಎಸ್ಐಆರ್ ಕೆಲಸದಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಿಗೆ (ಬಿಎಲ್ಒ) ಭಾರಿ ಒತ್ತಡ ಇದೆ. ತನ್ನ ಜೀವ ಕಳೆದುಕೊಳ್ಳುವುದಲ್ಲದೇ ಬೇರೆ ದಾರಿ ಇಲ್ಲ ಎಂದು ಅವರಿಗೆ ಅನಿಸಿರಬಹುದು ಎಂದು ಸಿಪಿಎಂ ನಾಯಕ ಎಂ.ವಿ. ಜಯರಾಜನ್ ಆರೋಪಿಸಿದ್ದಾರೆ.</p>.<p>ಕಾಂಗ್ರೆಸ್ ನಾಯಕ ರಿಜಿಲ್ ಮಕ್ಕುಟ್ಟಿ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಸೂಚಿಯನ್ನು ಪೂರೈಸಲು ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಎಸ್ಐಆರ್ ಜಾರಿಗೊಳಿಸಬೇಕು ಎನ್ನುವ ಚುನಾವಣಾ ಆಯೋಗದ ಪ್ರಯತ್ನಕ್ಕೆ ಅನೀಶ್ ಬಲಿಪಶುವಾಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೆ ಆಯೋಗ ಎಸ್ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಲಿ ಎಂದು ಆಗ್ರಹಿಸಿದ್ದಾರೆ.</p>.<p>ಕೇರಳದಲ್ಲಿ ಶನಿವಾರದವರೆಗೂ 2.51 ಕೋಟಿಗೂ ಹೆಚ್ಚು ಮತದಾರರಿಗೆ (ಶೇ 90) ಎಣಿಕೆ (ಸಮೀಕ್ಷೆ) ಅರ್ಜಿಗಳನ್ನು ವಿತರಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಣ್ಣೂರು(ಕೇರಳ):</strong> ಕೇರಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್ ಮಟ್ಟದ ಅಧಿಕಾರಿಯೊಬ್ಬರು (ಬಿಎಲ್ಒ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೆಲಸದ ಒತ್ತಡ ಇತ್ತು ಎಂದು ಹೇಳಲಾಗಿದೆ.</p>.<p>ಪಯ್ಯಣ್ಣೂರು ಸರ್ಕಾರಿ ಶಾಲೆಯ ಗುಮಾಸ್ತರಾಗಿದ್ದ ಅನೀಶ್ ಜಾರ್ಜ್ ಮೃತ ವ್ಯಕ್ತಿ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕೆಲಸದ ಒತ್ತಡದಿಂದಲೇ ಅನೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಮತ್ತು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.</p>.<p>ಅನೀಶ್ ಮೃತದೇಹ ಅವರ ಮನೆಯ ಮೊದಲ ಮಹಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಬಿಎಲ್ಒ ಕರ್ತವ್ಯದ ಒತ್ತಡದಲ್ಲಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.</p>.<p>ಅತಿಯಾದ ಕೆಲಸ ಮತ್ತು ಎಸ್ಐಆರ್ ಅನ್ನು ಬೇಗ ಮುಗಿಸುವ ಒತ್ತಡದ ಬಗ್ಗೆ ಅನೀಶ್ ನನ್ನ ಬಳಿ ಹೇಳಿಕೊಂಡಿದ್ದರು ಎಂದು ಅನೀಶ್ ಕುಟುಂಬದ ಆಪ್ತ ಶ್ಯಾಮ್ ಎಂಬುವವರು ಹೇಳಿದ್ದಾರೆ.</p>.<p>ಭಾನುವಾರ ಮುಂಜಾನೆ 2 ಗಂಟೆವರೆಗೂ ಅನೀಶ್ ಕೆಲಸ ಮಾಡುತ್ತಿದ್ದರು. ಎಸ್ಐಆರ್ ಅರ್ಜಿಗಳನ್ನು ಭರ್ತಿ ಮಾಡುವ ಮತ್ತು ತನಗೆ ನೀಡಿದ ಪ್ರದೇಶದ ಪ್ರತಿಯೊಬ್ಬರಿಗೂ ವಿತರಿಸುವ ಒತ್ತಡದಲ್ಲಿ ಅವರು ಇದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.</p>.<p>ಈ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಣ್ಣೂರು ಜಿಲ್ಲಾಧಿಕಾರಿ ಬಳಿ ಘಟನೆಯ ಕುರಿತು ವರದಿ ಕೇಳಿದ್ದೇವೆ. ಬಿಎಸ್ಒಗಳಿಗೆ ಕಾರ್ಯದೊತ್ತಡ ಇರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ರತನ್.ಯು ಕೇಲ್ಕರ್ ತಿಳಿಸಿದ್ದಾರೆ.</p>.<p>ಎಸ್ಐಆರ್ ನಡೆಯುವ 31 ದಿನಗಳವರೆಗೆ ಬಿಎಲ್ಒಗಳು ಮತ್ಯಾವುದೇ ಕೆಲಸ ಮಾಡುವ ಅಗತ್ಯ ಇಲ್ಲ. ಹೀಗಾಗಿ ಒತ್ತಡ ಉದ್ಭವಿಸದು. ತನಿಖಾ ವರದಿ ನಂತರ ಎಲ್ಲವೂ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.</p>.<p>ಕುಟುಂಬದ ಇತರೆ ಸದಸ್ಯರು ಚರ್ಚ್ಗೆ ಹೋಗಿದ್ದಾಗ ಭಾನುವಾರ ಮುಂಜಾನೆ ಅನೀಶ್ ಜಾರ್ಜ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಎಸ್ಐಆರ್ ಕೆಲಸದಿಂದಾಗಿ ಜಾರ್ಜ್ ಚರ್ಚ್ಗೆ ಹೋಗಿರಲಿಲ್ಲ. ಅವರಿಗೆ ತಂದೆ–ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಇದ್ದರು.</p>.<p>ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಎಸ್ಐಆರ್ ಅನ್ನು ತೀವ್ರವಾಗಿ ವಿರೋಧಿಸುತ್ತಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. </p>.<p>‘ಅನೀಶ್ ಅವರಿಗೆ ಎಲ್ಲರ ಮನೆಗಳ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಮತಗಟ್ಟೆ ಏಜೆಂಟ್ ಸಹಕಾರವನ್ನು ಅವರು ಪಡೆಯುತ್ತಿದ್ದರು. ಇದರಿಂದಾಗಿ ಇತರೆ ಪಕ್ಷಗಳ ಕಾರ್ಯಕರ್ತರು ಅವರನ್ನು ಬೆದರಿಸಿದ್ದರು’ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.</p>.<p>ತನಗೆ ಆಗುತ್ತಿರುವ ಕೆಲಸದ ಒತ್ತಡದ ಬಗ್ಗೆ ಅನೀಶ್ ಜಾರ್ಜ್ ಜಿಲ್ಲಾಧಿಕಾರಿಗೆ ಈಗಾಗಲೇ ದೂರು ನೀಡಿದ್ದರು ಎಂದು ಖಚಿತಪಡಿಸದ ವರದಿಗಳು ಹರಿದಾಡುತ್ತಿವೆ.</p>. <p>ಎಸ್ಐಆರ್ ಕೆಲಸದಲ್ಲಿ ಮತಗಟ್ಟೆ ಹಂತದ ಅಧಿಕಾರಿಗಳಿಗೆ (ಬಿಎಲ್ಒ) ಭಾರಿ ಒತ್ತಡ ಇದೆ. ತನ್ನ ಜೀವ ಕಳೆದುಕೊಳ್ಳುವುದಲ್ಲದೇ ಬೇರೆ ದಾರಿ ಇಲ್ಲ ಎಂದು ಅವರಿಗೆ ಅನಿಸಿರಬಹುದು ಎಂದು ಸಿಪಿಎಂ ನಾಯಕ ಎಂ.ವಿ. ಜಯರಾಜನ್ ಆರೋಪಿಸಿದ್ದಾರೆ.</p>.<p>ಕಾಂಗ್ರೆಸ್ ನಾಯಕ ರಿಜಿಲ್ ಮಕ್ಕುಟ್ಟಿ ಪ್ರತಿಕ್ರಿಯಿಸಿ, ಬಿಜೆಪಿ ಕಾರ್ಯಸೂಚಿಯನ್ನು ಪೂರೈಸಲು ಸ್ಥಳೀಯ ಸಂಸ್ಥೆ ಚುನಾವಣೆಗೂ ಮುನ್ನವೇ ಎಸ್ಐಆರ್ ಜಾರಿಗೊಳಿಸಬೇಕು ಎನ್ನುವ ಚುನಾವಣಾ ಆಯೋಗದ ಪ್ರಯತ್ನಕ್ಕೆ ಅನೀಶ್ ಬಲಿಪಶುವಾಗಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಯುವವರೆಗೆ ಆಯೋಗ ಎಸ್ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಲಿ ಎಂದು ಆಗ್ರಹಿಸಿದ್ದಾರೆ.</p>.<p>ಕೇರಳದಲ್ಲಿ ಶನಿವಾರದವರೆಗೂ 2.51 ಕೋಟಿಗೂ ಹೆಚ್ಚು ಮತದಾರರಿಗೆ (ಶೇ 90) ಎಣಿಕೆ (ಸಮೀಕ್ಷೆ) ಅರ್ಜಿಗಳನ್ನು ವಿತರಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>