<p><strong>ಮುಂಬೈ:</strong> ಭೂಗತ ಮಾಜಿ ಪಾತಕಿ ಹಾಗೂ ಮಾಜಿ ಶಾಸಕ ಅರುಣ್ ಗವಳಿ ಅವರ ಇಬ್ಬರು ಪುತ್ರಿಯರಾದ ಗೀತಾ ಹಾಗೂ ಯೋಗಿತಾ ಅವರು ಬ್ರಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸೋಲುಂಡಿದ್ದಾರೆ.</p><p>ಇಬ್ಬರೂ ಕೂಡ ತಂದೆ ಸ್ಥಾಪಿಸಿದ್ದ ಅಖಿಲ್ ಭಾರತೀಯ ಸೇನಾ(ಎಬಿಎಚ್ಎಸ್)ನಿಂದ ಕಣಕ್ಕಿಳಿದಿದ್ದರು. </p><p>ಮೂರು ಅವಧಿಗೆ ಬಿಎಂಸಿಯ ಕಾರ್ಪೊರೇಟರ್ ಆಗಿದ್ದ ಗೀತಾ ಅವರು ವಾರ್ಡ್ 212ರಿಂದ ಸ್ಪರ್ಧಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಮ್ರಿನ್ ಶೆಹಜಾದ್ ವಿರುದ್ಧ ಸೋಲುಂಡಿದ್ದು, ಮೊದಲ ಬಾರಿಗೆ ಸ್ಪರ್ಧಿಸಿದ್ದ ಯೋಗಿತಾ ವಾರ್ಡ್ 207ರಲ್ಲಿ ಸ್ಪರ್ಧಿಸಿ ಬಿಜೆಪಿಯ ರೋಹಿದಾಸ್ ಲೊಖಂಡೆ ವಿರುದ್ಧ ಪರಾಭವಗೊಂಡರು. </p><p>2007ರಲ್ಲಿ ಶಿವಸೇನಾ ಕಾರ್ಪೋರೆಟರ್ ಆಗಿದ್ದ ಕಮ್ಲಾಕರ್ ಜಮ್ಶಂಡೆಕರ್ ಅವರನ್ನು ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗವಳಿ, ನಾಗಪುರ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಹೊರಬಂದಿದ್ದರು. </p><p>ಅರುಣ್ ಗವಳಿ 2004 ರಿಂದ 2009ರ ತನಕ ಚಿಂಛ್ಪೊಕ್ಲಿ ಕ್ಷೇತ್ರದಿಂದ ಶಾಸಕರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಭೂಗತ ಮಾಜಿ ಪಾತಕಿ ಹಾಗೂ ಮಾಜಿ ಶಾಸಕ ಅರುಣ್ ಗವಳಿ ಅವರ ಇಬ್ಬರು ಪುತ್ರಿಯರಾದ ಗೀತಾ ಹಾಗೂ ಯೋಗಿತಾ ಅವರು ಬ್ರಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಸೋಲುಂಡಿದ್ದಾರೆ.</p><p>ಇಬ್ಬರೂ ಕೂಡ ತಂದೆ ಸ್ಥಾಪಿಸಿದ್ದ ಅಖಿಲ್ ಭಾರತೀಯ ಸೇನಾ(ಎಬಿಎಚ್ಎಸ್)ನಿಂದ ಕಣಕ್ಕಿಳಿದಿದ್ದರು. </p><p>ಮೂರು ಅವಧಿಗೆ ಬಿಎಂಸಿಯ ಕಾರ್ಪೊರೇಟರ್ ಆಗಿದ್ದ ಗೀತಾ ಅವರು ವಾರ್ಡ್ 212ರಿಂದ ಸ್ಪರ್ಧಿಸಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಮ್ರಿನ್ ಶೆಹಜಾದ್ ವಿರುದ್ಧ ಸೋಲುಂಡಿದ್ದು, ಮೊದಲ ಬಾರಿಗೆ ಸ್ಪರ್ಧಿಸಿದ್ದ ಯೋಗಿತಾ ವಾರ್ಡ್ 207ರಲ್ಲಿ ಸ್ಪರ್ಧಿಸಿ ಬಿಜೆಪಿಯ ರೋಹಿದಾಸ್ ಲೊಖಂಡೆ ವಿರುದ್ಧ ಪರಾಭವಗೊಂಡರು. </p><p>2007ರಲ್ಲಿ ಶಿವಸೇನಾ ಕಾರ್ಪೋರೆಟರ್ ಆಗಿದ್ದ ಕಮ್ಲಾಕರ್ ಜಮ್ಶಂಡೆಕರ್ ಅವರನ್ನು ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಗವಳಿ, ನಾಗಪುರ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದ ಬಳಿಕ ಜೈಲಿನಿಂದ ಹೊರಬಂದಿದ್ದರು. </p><p>ಅರುಣ್ ಗವಳಿ 2004 ರಿಂದ 2009ರ ತನಕ ಚಿಂಛ್ಪೊಕ್ಲಿ ಕ್ಷೇತ್ರದಿಂದ ಶಾಸಕರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>