<p><strong>ಮುಂಬೈ:</strong> ದೋಣಿಯಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದ್ದ ಮೂವರು ಕುವೈತ್ನ ‘ನೋ ಫ್ಲೈ ಲಿಸ್ಟ್’ (ವಿದೇಶ ಪ್ರಯಾಣ ನಿಷಿದ್ಧ ಪಟ್ಟಿ)ನಲ್ಲಿದ್ದಾರೆ ಎಂದು ಮುಂಬೈ ಪೊಲೀಸರು ಶನಿವಾರ ಇಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.</p>.<p>ಕುವೈತ್ನಲ್ಲಿರುವ ಕಾನ್ಸುಲೆಟ್ನ ಮಾಹಿತಿಯ ಪ್ರಕಾರ, ಆರೋಪಿಗಳು ಮಧ್ಯಪ್ರಾಚ್ಯ ದೇಶದ ‘ನೋ ಫ್ಲೈ ಲಿಸ್ಟ್’ನಲ್ಲಿದ್ದಾರೆ. ಇದನ್ನು ಪರಿಶೀಲಿಸಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅಗತ್ಯವಿದೆ. ದೋಣಿಯ ಜಿಪಿಎಸ್ ಮಾರ್ಗವನ್ನು ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.</p>.<p>ಪಾಸ್ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಬಂಧಿಸಿರುವ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಫೆಬ್ರುವರಿ 12ರವರೆಗೆ ವಿಸ್ತರಿಸಿದ್ದಾರೆ.</p>.<p>ಕುವೈತ್ನಿಂದ ಪಾಕಿಸ್ತಾನದ ಮೂಲಕ ಸಮುದ್ರ ಮಾರ್ಗವಾಗಿ ದೋಣಿಯಲ್ಲಿ ಭಾರತದ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ್ದ ತಮಿಳುನಾಡು ಮೂಲದ ನಿಟ್ಸೋ ಡಿಟ್ಟೊ (31), ವಿಜಯ್ ವಿನಯ್ ಆಂಥೋನಿ (29), ಜೆ. ಸಹಾಯತ್ತ ಅನೀಶ್ (29) ಅವರನ್ನು ಫೆ.7ರಂದು ಬಂಧಿಸಲಾಗಿತ್ತು.</p>.<p>ಆರೋಪಿಗಳ ಪರ ವಾದಿಸಿದ ವಕೀಲ ಸುನೀಲ್ ಪಾಂಡೆ, ಬಂಧಿತರ ಜತೆಗೆ ಕೆಲಸದ ನಿಮಿತ್ತ ಕುವೈತ್ಗೆ ತೆರಳಿದ್ದ ಇತರ ಎಂಟು ಮಂದಿಯನ್ನು ಅಲ್ಲಿ ಉದ್ಯೋಗದಾತರು ಒತ್ತೆಯಾಳಾಗಿ ಇರಿಸಿಕೊಂಡು, ಪಾಸ್ಪೋರ್ಟ್ ವಶದಲ್ಲಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ದೋಣಿಯಲ್ಲಿ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಬಂಧಿಸಲಾಗಿದ್ದ ಮೂವರು ಕುವೈತ್ನ ‘ನೋ ಫ್ಲೈ ಲಿಸ್ಟ್’ (ವಿದೇಶ ಪ್ರಯಾಣ ನಿಷಿದ್ಧ ಪಟ್ಟಿ)ನಲ್ಲಿದ್ದಾರೆ ಎಂದು ಮುಂಬೈ ಪೊಲೀಸರು ಶನಿವಾರ ಇಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.</p>.<p>ಕುವೈತ್ನಲ್ಲಿರುವ ಕಾನ್ಸುಲೆಟ್ನ ಮಾಹಿತಿಯ ಪ್ರಕಾರ, ಆರೋಪಿಗಳು ಮಧ್ಯಪ್ರಾಚ್ಯ ದೇಶದ ‘ನೋ ಫ್ಲೈ ಲಿಸ್ಟ್’ನಲ್ಲಿದ್ದಾರೆ. ಇದನ್ನು ಪರಿಶೀಲಿಸಲು ಆರೋಪಿಗಳ ಕಸ್ಟಡಿ ವಿಚಾರಣೆಯ ಅಗತ್ಯವಿದೆ. ದೋಣಿಯ ಜಿಪಿಎಸ್ ಮಾರ್ಗವನ್ನು ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.</p>.<p>ಪಾಸ್ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿರುವ ಆರೋಪದಡಿ ಬಂಧಿಸಿರುವ ಆರೋಪಿಗಳ ಪೊಲೀಸ್ ಕಸ್ಟಡಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಫೆಬ್ರುವರಿ 12ರವರೆಗೆ ವಿಸ್ತರಿಸಿದ್ದಾರೆ.</p>.<p>ಕುವೈತ್ನಿಂದ ಪಾಕಿಸ್ತಾನದ ಮೂಲಕ ಸಮುದ್ರ ಮಾರ್ಗವಾಗಿ ದೋಣಿಯಲ್ಲಿ ಭಾರತದ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ್ದ ತಮಿಳುನಾಡು ಮೂಲದ ನಿಟ್ಸೋ ಡಿಟ್ಟೊ (31), ವಿಜಯ್ ವಿನಯ್ ಆಂಥೋನಿ (29), ಜೆ. ಸಹಾಯತ್ತ ಅನೀಶ್ (29) ಅವರನ್ನು ಫೆ.7ರಂದು ಬಂಧಿಸಲಾಗಿತ್ತು.</p>.<p>ಆರೋಪಿಗಳ ಪರ ವಾದಿಸಿದ ವಕೀಲ ಸುನೀಲ್ ಪಾಂಡೆ, ಬಂಧಿತರ ಜತೆಗೆ ಕೆಲಸದ ನಿಮಿತ್ತ ಕುವೈತ್ಗೆ ತೆರಳಿದ್ದ ಇತರ ಎಂಟು ಮಂದಿಯನ್ನು ಅಲ್ಲಿ ಉದ್ಯೋಗದಾತರು ಒತ್ತೆಯಾಳಾಗಿ ಇರಿಸಿಕೊಂಡು, ಪಾಸ್ಪೋರ್ಟ್ ವಶದಲ್ಲಿರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>