ಮುಂಬೈ: ಮೂಳೆ ಮುರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಮುಂಬೈನ ಕೋಕಿಲಾಬೇನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ.
ಸೈಫ್ ಅವರ ಆರೋಗ್ಯ ಕುರಿತು ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.
ಸೈಫ್ ಅವರು ಪ್ಯಾನ್ ಇಂಡಿಯಾ ಸಿನಿಮಾ ‘ದೇವಾರ’ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರೊಂದಿಗೆ ನಟಿಸುತ್ತಿದ್ದಾರೆ.
ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ಜೂನಿಯರ್ ಎನ್ಟಿಆರ್ ಅವರು ನಿರ್ದಯಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮುದ್ರ ಹಾಗೂ ಹಡಗುಗಳೊಂದಿಗೆ ಆರಂಭವಾಗುವ ಟೀಸರ್ನಲ್ಲಿ, ಇಡೀ ಜಗತ್ತೇ ರಕ್ತದಲ್ಲಿ ಮಿಂದೆದ್ದಂತೆ ಕಾಣಿಸುತ್ತದೆ.
ಈ ಚಿತ್ರವನ್ನು ಕೊರಟಾಲ ಶಿವ ಅವರು ನಿರ್ದೇಶಿಸಿದ್ದಾರೆ. ಅನಿರುದ್ಧ ರವಿಚಂದ್ರ ಅವರ ಸಂಗೀತವಿದೆ.