ನಕಲಿ ಎನ್ಕೌಂಟರ್ ಸಂಬಂಧ ಪೊಲೀಸ್ ಆಧಿಕಾರಿ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಮೊದಲ ಪ್ರಕರಣವು ಇದಾಗಿದೆ. ಪ್ರದೀಪ್ ಶರ್ಮಾ (63) ಸ್ವಯಂ ನಿವೃತ್ತಿ ಪಡೆದ ಬಳಿಕ ಶಿವಸೇನೆಗೆ ಸೇರಿದ್ದರು. 2019ರಲ್ಲಿ ವಿಧಾನಸಭೆಗೆ ಸ್ಪರ್ಧಿಸಿ, ಸೋತಿದ್ದರು. ಮೂರು ದಶಕಗಳ ಸೇವೆಯಲ್ಲಿ ಭೂಗತಪಾತಕಿಗಳು, ಉಗ್ರರು, ಶಾರ್ಪ್ ಶೂಟರ್ ಸೇರಿ 113 ಕ್ರಿಮಿನಲ್ಗಳಿಗೆ ಅಂತ್ಯ ಹಾಡಿದ್ದರು.