<p><strong>ಕೋಯಿಕ್ಕೋಡ್:</strong> ಮಿದುಳು ಸೋಂಕಿನಿಂದ (ಅಮೀಬಿಕ್ ಎನ್ಸೆಫಲಿಟಿಸ್) ಉತ್ತರ ಕೇರಳದ ಜಿಲ್ಲೆಯೊಂದರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಎರಡು ದಿನದ ಹಿಂದೆ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.</p><p>ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಗಸ್ಟ್ 13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದರಿಂದ 14ರಂದೇ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆಕೆ ಅದೇ ದಿನ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.</p><p>ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಶುಕ್ರವಾರ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ಮಿದುಳು ಸೋಂಕು ಕಾರಣ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.</p><p>‘ತಾಮರಸ್ಸೇರಿಯ ಬಾಲಕಿಗೆ ಮಾರಣಾಂತಿಕ ಸೋಂಕು ತಗುಲಿದ ಜಲಮೂಲವನ್ನು ಗುರುತಿಸಲು ಶೋಧ ನಡೆಸಲಾಗುತ್ತಿದೆ. ಅದು ಪತ್ತೆಯಾಗುತ್ತಿದ್ದಂತೆ, ಈಚೆಗೆ ಅದರಲ್ಲಿ ಸ್ನಾನ ಮಾಡಿದವರನ್ನು ಹುಡುಕುತ್ತೇವೆ’ ಎಂದು ಅವರು ಹೇಳಿದರು.</p><p>ಪ್ರಸಕ್ತ ವರ್ಷದಲ್ಲಿ ಈ ಜಿಲ್ಲೆಯಲ್ಲೇ ವರದಿಯಾದ ಅಪರೂಪದ ಮಿದುಳು ಸೋಂಕಿನ ನಾಲ್ಕನೇ ಪ್ರಕರಣವಿದು. ಕಲುಷಿತ ನೀರಿನಲ್ಲಿ ಕಂಡುಬರುವ ಅಮೀಬಾದಿಂದ ಈ ಸೋಂಕು ತಗುಲುತ್ತದೆ ಎಂದು ಮಾಹಿತಿ ನೀಡಿದರು.</p>.ಆಳ–ಅಗಲ | ‘ದೇವರ ನಾಡ’ಲ್ಲಿ ಆತಂಕ ತಂದ ‘ಮಿದುಳು ತಿನ್ನುವ ಅಮೀಬಾ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಯಿಕ್ಕೋಡ್:</strong> ಮಿದುಳು ಸೋಂಕಿನಿಂದ (ಅಮೀಬಿಕ್ ಎನ್ಸೆಫಲಿಟಿಸ್) ಉತ್ತರ ಕೇರಳದ ಜಿಲ್ಲೆಯೊಂದರ ಒಂಬತ್ತು ವರ್ಷದ ಬಾಲಕಿಯೊಬ್ಬಳು ಎರಡು ದಿನದ ಹಿಂದೆ ಮೃತಪಟ್ಟಿದ್ದಾಳೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.</p><p>ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಆಗಸ್ಟ್ 13ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯವು ತೀವ್ರವಾಗಿ ಹದಗೆಟ್ಟಿದ್ದರಿಂದ 14ರಂದೇ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆಕೆ ಅದೇ ದಿನ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.</p><p>ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಶುಕ್ರವಾರ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ಬಾಲಕಿಯ ಸಾವಿಗೆ ಮಿದುಳು ಸೋಂಕು ಕಾರಣ ಎಂಬುದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.</p><p>‘ತಾಮರಸ್ಸೇರಿಯ ಬಾಲಕಿಗೆ ಮಾರಣಾಂತಿಕ ಸೋಂಕು ತಗುಲಿದ ಜಲಮೂಲವನ್ನು ಗುರುತಿಸಲು ಶೋಧ ನಡೆಸಲಾಗುತ್ತಿದೆ. ಅದು ಪತ್ತೆಯಾಗುತ್ತಿದ್ದಂತೆ, ಈಚೆಗೆ ಅದರಲ್ಲಿ ಸ್ನಾನ ಮಾಡಿದವರನ್ನು ಹುಡುಕುತ್ತೇವೆ’ ಎಂದು ಅವರು ಹೇಳಿದರು.</p><p>ಪ್ರಸಕ್ತ ವರ್ಷದಲ್ಲಿ ಈ ಜಿಲ್ಲೆಯಲ್ಲೇ ವರದಿಯಾದ ಅಪರೂಪದ ಮಿದುಳು ಸೋಂಕಿನ ನಾಲ್ಕನೇ ಪ್ರಕರಣವಿದು. ಕಲುಷಿತ ನೀರಿನಲ್ಲಿ ಕಂಡುಬರುವ ಅಮೀಬಾದಿಂದ ಈ ಸೋಂಕು ತಗುಲುತ್ತದೆ ಎಂದು ಮಾಹಿತಿ ನೀಡಿದರು.</p>.ಆಳ–ಅಗಲ | ‘ದೇವರ ನಾಡ’ಲ್ಲಿ ಆತಂಕ ತಂದ ‘ಮಿದುಳು ತಿನ್ನುವ ಅಮೀಬಾ’.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>