ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಬೊಂಗಾಂವ್ ದಕ್ಷಿಣದ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್, 'ಸುಳ್ಳು ಪ್ರಕರಣಗಳಲ್ಲಿ ನಮ್ಮ ಕಾರ್ಯಕರ್ತರನ್ನು ಸಿಲುಕಿಸಲು ಟಿಎಂಸಿ ನಾಯಕರು ಪ್ರಯತ್ನಿಸಿದರೆ, ನಮ್ಮ ಕಾರ್ಯಕರ್ತರು ತೊಂದರೆಗೆ ಸಿಲುಕಿದ್ದೇ ಆದಲ್ಲಿ ಅಂತಹ ನಾಯಕರು ಸುರಕ್ಷಿತವಾಗಿ ಹಿಂದಿರುಗುವುದಿಲ್ಲ. ಆಗಿದ್ದಾಗಲಿ, ನಿಮ್ಮ ಆತ್ಮರಕ್ಷಣೆಗಾಗಿ ಅವರ ಕೈ ಕಾಲುಗಳನ್ನು ಮುರಿದು ನನ್ನ ಬಳಿಗೆ ಬನ್ನಿ. ಯಾವುದೇ ಪರಿಸ್ಥಿತಿಯಲ್ಲೂ ನಾನು ನಿಮ್ಮ ಪರವಾಗಿರುತ್ತೇನೆ' ಎಂದು ಪಕ್ಷದ ಸಭೆಯಲ್ಲಿ ಬೆಂಬಲಿಗರಿಗೆ ಹೇಳಿರುವುದು ಕಂಡುಬಂದಿದೆ.