<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ವೇದ್ ಪ್ರಕಾಶ್ ಅವರನ್ನು ಬಾಂಗ್ಲಾದೇಶದ ಜಾನುವಾರು ಕಳ್ಳಸಾಗಣೆದಾರರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. </p>.<p>ಕಳ್ಳಸಾಗಣೆದಾರರ ಬೆನ್ನುಹತ್ತಿ ಹೋಗುವ ವೇಳೆ ಅವರು ಗಡಿ ದಾಟಿದ್ದು, ಈ ವೇಳೆ ಅಪಹರಣಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಜಿಲ್ಲೆಯ ಮೇಖ್ಲಿಗಂಜ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಭಾರತೀಯ ಬಿಎಸ್ಎಫ್ ಅಧಿಕಾರಿಗಳು, ಬಾಂಗ್ಲಾದೇಶ ಗಡಿ ಭದ್ರತಾ ಪಡೆ (ಬಿಜಿಬಿ) ಜೊತೆ ಈ ವಿಷಯದ ಬಗ್ಗೆ ಮಾತನಾಡಿದ ನಂತರ ಅವರು ಸಂಜೆ ಶಿಬಿರಕ್ಕೆ ಮರಳಿದರು ಎಂದು ಹೇಳಿದ್ದಾರೆ.</p>.<p>ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ನಂತರ ಈ ವಿಷಯವನ್ನು ಬಿಜಿಬಿಗೆ ತಿಳಿಸಲಾಯಿತು ಎಂದು ಬಿಎಸ್ಎಫ್ ಅಧಿಕಾರಿ ಹೇಳಿದರು.</p>.<p>ಬಿಎಸ್ಎಫ್ ಮತ್ತು ಬಿಜಿಬಿ ಅಧಿಕಾರಿಗಳ ನಡುವಿನ ಸಭೆಗಳ ನಂತರ, ಪ್ರಕಾಶ್ ಸಂಜೆ ಸುರಕ್ಷತವಾಗಿ ತಮ್ಮ ಶಿಬಿರಕ್ಕೆ ಮರಳಿದರು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧ ವೇದ್ ಪ್ರಕಾಶ್ ಅವರನ್ನು ಬಾಂಗ್ಲಾದೇಶದ ಜಾನುವಾರು ಕಳ್ಳಸಾಗಣೆದಾರರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. </p>.<p>ಕಳ್ಳಸಾಗಣೆದಾರರ ಬೆನ್ನುಹತ್ತಿ ಹೋಗುವ ವೇಳೆ ಅವರು ಗಡಿ ದಾಟಿದ್ದು, ಈ ವೇಳೆ ಅಪಹರಣಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>.<p>ಜಿಲ್ಲೆಯ ಮೇಖ್ಲಿಗಂಜ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಭಾರತೀಯ ಬಿಎಸ್ಎಫ್ ಅಧಿಕಾರಿಗಳು, ಬಾಂಗ್ಲಾದೇಶ ಗಡಿ ಭದ್ರತಾ ಪಡೆ (ಬಿಜಿಬಿ) ಜೊತೆ ಈ ವಿಷಯದ ಬಗ್ಗೆ ಮಾತನಾಡಿದ ನಂತರ ಅವರು ಸಂಜೆ ಶಿಬಿರಕ್ಕೆ ಮರಳಿದರು ಎಂದು ಹೇಳಿದ್ದಾರೆ.</p>.<p>ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ನಂತರ ಈ ವಿಷಯವನ್ನು ಬಿಜಿಬಿಗೆ ತಿಳಿಸಲಾಯಿತು ಎಂದು ಬಿಎಸ್ಎಫ್ ಅಧಿಕಾರಿ ಹೇಳಿದರು.</p>.<p>ಬಿಎಸ್ಎಫ್ ಮತ್ತು ಬಿಜಿಬಿ ಅಧಿಕಾರಿಗಳ ನಡುವಿನ ಸಭೆಗಳ ನಂತರ, ಪ್ರಕಾಶ್ ಸಂಜೆ ಸುರಕ್ಷತವಾಗಿ ತಮ್ಮ ಶಿಬಿರಕ್ಕೆ ಮರಳಿದರು ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>