ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಸಾಕ್ಷಾತ್ಕಾರ ತತ್ವದಲ್ಲಿ ನಡೆಯುತ್ತಿದೆ ಭಾರತ: ಪ್ರಧಾನಿ ಮೋದಿ 

ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಸಿ ಪ್ರಧಾನಿ ಭಾಷಣ
Last Updated 7 ಮೇ 2020, 4:35 IST
ಅಕ್ಷರ ಗಾತ್ರ

ನವದೆಹಲಿ: ‘ಸಾಕ್ಷಾತ್ಕಾರ, ಭಾರತದ ಸ್ವಯಂ ಸಾಕ್ಷಾತ್ಕಾರಕ್ಕೆ ಬುದ್ಧ ಸಂಕೇತ. ಈ ಸ್ವಯಂ ಸಾಕ್ಷಾತ್ಕಾರದ ಮೂಲಕ ಭಾರತವು ಮಾನವೀಯತೆ ಮತ್ತು ಜಗತ್ತಿನ ಹಿತಕ್ಕಾಗಿ ಕೆಲಸ ಮಾಡುತ್ತಿದೆ. ನಾವು ಇದೇ ರೀತಿ ಮುಂದುವರೆಯುತ್ತೇವೆ,’ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಸಿ ಪ್ರಧಾನಿ ಮಾತನಾಡಿದರು. ‘ಬುದ್ಧ ಪೂರ್ಣಿಮೆ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ. ಇಂದಿನ ಪರಿಸ್ಥಿತಿಯಲ್ಲಿ ನಾನು ಬುದ್ಧ ಪೂರ್ಣಿಮೆ ಕಾರ್ಯಕ್ರಮಗಳಲ್ಲಿ ದೈಹಿಕವಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆಚರಣೆಯಲ್ಲಿ ನಿಮ್ಮಲ್ಲರೊಂದಿಗೆ ಭಾಗವಹಿಸುವುದು ನನಗೆ ಸಂತೋಷದ ವಿಚಾರ. ಆದರೆ ಇಂದಿನ ಸಂದರ್ಭಗಳು ನಾವೆಲ್ಲರೂ ಒಟ್ಟುಗೂಡಲು ಬಿಡುತ್ತಿಲ್ಲ,’ ಎಂದು ಹೇಳಿದರು.

‘ಪ್ರತಿಯೊಬ್ಬರ ಸಮಸ್ಯೆಗಳನ್ನು ನೀಗಿಸುವ ಬುದ್ಧನ ಸಂದೇಶ ಮತ್ತು ಸಂಕಲ್ಪವು ಭಾರತದ ಸಂಸ್ಕೃತಿಗೆ ಮಾರ್ಗದರ್ಶಕವಾಗಿದೆ. ಭಗವಾನ್ ಬುದ್ಧ ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಸಮೃದ್ಧಿಗೆ ಕೊಡುಗೆ ನೀಡಿದ್ದಾನೆ. ಬುದ್ಧ ಬೆಳಕಾಗಿ ಮಾರ್ಪಟ್ಟವನು. ತನ್ನ ಪಯಣದಲ್ಲಿ ಇತರರ ಜೀವನಕ್ಕೆ ಬೆಳಕಾದವನು,’ ಎಂದು ಅಭಿಪ್ರಾಯಪಟ್ಟರು.

‘ಕೊರೊನಾ ವೈರಸ್ ಲಾಕ್‌ಡೌನ್‌ನ ಈ ಸಂಕಷ್ಟದ ಸಮಯದಲ್ಲೂ ಇತರರಿಗೆ ಸಹಾಯ ಮಾಡಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು, ಸೋಂಕಿತರನ್ನು ಗುಣಪಡಿಸಲು ಮತ್ತು ಸ್ವಚ್ಛತೆ ಕಾಪಾಡಲು ಹಲವು ತ್ಯಾಗಗಳನ್ನು ಮಾಡುತ್ತಿರುವ ಹಲವಾರು ಮಂದಿ ನಮ್ಮ ಸುತ್ತಲೂ ಇದ್ದಾರೆ. ಅಂಥ ಎಲ್ಲ ಜನರು ಈ ಸಂದರ್ಭದಲ್ಲಿ ಮೆಚ್ಚುಗೆ ಮತ್ತು ಗೌರವಕ್ಕೆ ಅರ್ಹರು,’ ಎನ್ನುವ ಮೂಲಕ ಕೋವಿಡ್‌ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಎಲ್ಲರ ಬಗ್ಗೆ ಧನ್ಯವಾದ ಅರ್ಪಿಸಿದರು.

‘ದೇಶದ ಒಳಗಿರಬಹುದು, ಹೊರಗಿರಬಹುದು. ಇಂದು ಭಾರತವು ತೊಂದರೆಯಲ್ಲಿರುವ ಎಲ್ಲರಿಗೂ ಬೆಂಬಲವಾಗಿ ನಿಂತಿದೆ. ಭಾರತವು ಜಗತ್ತಿನಾದ್ಯಂತ ಇತರ ದೇಶಗಳಿಗೆ ಸಹಾಯ ಮಾಡಲು ನಿರಂತರವಾಗಿ ಕೆಲಸ ಮಾಡುತ್ತಿದೆ ಮತ್ತು ಅದೇ ದಾರಿಯಲ್ಲಿ ಮುಂದುವರಿಯುತ್ತದೆ. ಕೊರೊನಾ ವೈರಸ್ ಅನ್ನು ಸೋಲಿಸಲು ನಾವೆಲ್ಲರೂ ಒಟ್ಟಾಗಿ ಹೋರಾಡಬೇಕಾಗಿದೆ,’ ಎಂದು ದೇಶದ ಜನರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT