<p><strong>ನವದೆಹಲಿ</strong>: ‘ಆರೋಪಿಗಳ ಮನೆ ನೆಲಸಮ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ, ಕೂಡಲೇ ಇದನ್ನು ನಿಲ್ಲಿಸಬೇಕು‘ ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.</p><p>ಮಧ್ಯಪ್ರದೇಶದ ಛತರ್ಪುರದಲ್ಲಿ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಎನ್ನಲಾದ ವ್ಯಕ್ತಿಯ ಮನೆಯನ್ನು ನೆಲಸಮಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.</p><p>'ಶಹಜಾದ್ ಆಲಿ ಎಂಬವರ ಮನೆಯನ್ನು ನೆಲಸಮ ಮಾಡಲಾಗಿದೆ. ಹಿಂಸಾಚಾರ ಆರೋಪಕ್ಕೆ ಸಂಬಂಧಿಸಿ 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 46 ಮಂದಿಯ ಗುರುತು ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಯಾರದೊ ಮನೆಯನ್ನು ನೆಲಸಮ ಮಾಡುವುದು ಮತ್ತು ಕುಟುಂಬಸ್ಥರ ಸೂರನ್ನು ಕಸಿದುಕೊಳ್ಳುವುದು ಎರಡೂ ಅಮಾನವೀಯ ಮತ್ತು ಅನ್ಯಾಯ’ ಎಂದು ಎಕ್ಸ್ನಲ್ಲಿ ಹೇಳಿದ್ದಾರೆ.</p><p>ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಪದೇ ಪದೇ ಗುರಿಮಾಡಲಾಗುತ್ತಿದೆ. ಕಾನೂನಿನ ಆಳ್ವಿಕೆ ಇರುವ ಸಮಾಜದಲ್ಲಿ ಇಂಥ ಕೆಲಸಕ್ಕೆ ಜಾಗವಿಲ್ಲ’ ಎಂದು ಕಿಡಿಕಾರಿದ್ದಾರೆ.</p><p>ಜನರಲ್ಲಿ ಭಯ ಹುಟ್ಟಿಸಲು ಬುಲ್ಡೋಜರ್ ಬಳಕೆ ಮಾಡುತ್ತಿರುವ ಹಾಗೂ ಸಂವಿಧಾನಕ್ಕೆ ಅಗೌರವ ತೋರುತ್ತಿರುವ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.</p><p>‘ಅರಾಜಕತೆಯು ನ್ಯಾಯಕ್ಕೆ ಪರ್ಯಾಯ ಅಲ್ಲ– ಅಪರಾಧಗಳಿಗೆ ನ್ಯಾಯಾಲಯದ ಮೂಲಕವೇ ಶಿಕ್ಷೆಯಾಗಬೇಕು’ ಎಂದು ಹೇಳಿದರು.</p>.<p><strong>ಪ್ರಿಯಾಂಕಾ ಆಕ್ರೋಶ: </strong>ವ್ಯಕ್ತಿಯೊಬ್ಬ ಅಪರಾಧವೊಂದರ ಆರೋಪಿಯಾಗಿದ್ದಲ್ಲಿ ಆತ ತಪ್ಪು ಮಾಡಿದ್ದಾನೋ, ಇಲ್ಲವೋ ಎಂಬುದನ್ನು ನ್ಯಾಯಾಲಯವೇ ನಿರ್ಧಾರ ಮಾಡಿ ಶಿಕ್ಷೆ ವಿಧಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.</p><p>‘ಆದರೆ, ಆರೋಪ ಕೇಳಿಬಂದ ತಕ್ಷಣವೇ ಆತನ ಕುಟುಂಬಕ್ಕೆ ಶಿಕ್ಷೆ ನೀಡುವುದು ಮತ್ತು ಅವರ ಸೂರನ್ನು ಕಸಿದುಕೊಳ್ಳುವುದು ಕಾನೂನಿಗೆ ವಿರುದ್ಧವಾದುದು ಮತ್ತು ಕೋರ್ಟ್ಗೆ ಅವಿಧೇಯತೆ ತೋರಿದಂತೆ. ಆರೋಪಿಗಳ ಮನೆಯನ್ನು ನೆಲಸಮ ಮಾಡುವುದು ನ್ಯಾಯ ಅಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p><p>ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮಾನವೀಯತೆಯ ಪರಿಪಾಲನೆಯು ನಾಗರಿಕ ಸಮಾಜದ ಆಡಳಿತದ ಮೂಲಭೂತ ಷರತ್ತುಗಳು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಆರೋಪಿಗಳ ಮನೆ ನೆಲಸಮ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ, ಕೂಡಲೇ ಇದನ್ನು ನಿಲ್ಲಿಸಬೇಕು‘ ಎಂದು ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.</p><p>ಮಧ್ಯಪ್ರದೇಶದ ಛತರ್ಪುರದಲ್ಲಿ ಪ್ರತಿಭಟನೆ ವೇಳೆ ಉಂಟಾದ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಎನ್ನಲಾದ ವ್ಯಕ್ತಿಯ ಮನೆಯನ್ನು ನೆಲಸಮಗೊಳಿಸಿದ ಬೆನ್ನಲ್ಲೇ ಕಾಂಗ್ರೆಸ್ ಈ ಹೇಳಿಕೆ ನೀಡಿದೆ.</p><p>'ಶಹಜಾದ್ ಆಲಿ ಎಂಬವರ ಮನೆಯನ್ನು ನೆಲಸಮ ಮಾಡಲಾಗಿದೆ. ಹಿಂಸಾಚಾರ ಆರೋಪಕ್ಕೆ ಸಂಬಂಧಿಸಿ 150 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 46 ಮಂದಿಯ ಗುರುತು ಪತ್ತೆಯಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.</p><p>ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಯಾರದೊ ಮನೆಯನ್ನು ನೆಲಸಮ ಮಾಡುವುದು ಮತ್ತು ಕುಟುಂಬಸ್ಥರ ಸೂರನ್ನು ಕಸಿದುಕೊಳ್ಳುವುದು ಎರಡೂ ಅಮಾನವೀಯ ಮತ್ತು ಅನ್ಯಾಯ’ ಎಂದು ಎಕ್ಸ್ನಲ್ಲಿ ಹೇಳಿದ್ದಾರೆ.</p><p>ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಪದೇ ಪದೇ ಗುರಿಮಾಡಲಾಗುತ್ತಿದೆ. ಕಾನೂನಿನ ಆಳ್ವಿಕೆ ಇರುವ ಸಮಾಜದಲ್ಲಿ ಇಂಥ ಕೆಲಸಕ್ಕೆ ಜಾಗವಿಲ್ಲ’ ಎಂದು ಕಿಡಿಕಾರಿದ್ದಾರೆ.</p><p>ಜನರಲ್ಲಿ ಭಯ ಹುಟ್ಟಿಸಲು ಬುಲ್ಡೋಜರ್ ಬಳಕೆ ಮಾಡುತ್ತಿರುವ ಹಾಗೂ ಸಂವಿಧಾನಕ್ಕೆ ಅಗೌರವ ತೋರುತ್ತಿರುವ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳ ಕ್ರಮವನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.</p><p>‘ಅರಾಜಕತೆಯು ನ್ಯಾಯಕ್ಕೆ ಪರ್ಯಾಯ ಅಲ್ಲ– ಅಪರಾಧಗಳಿಗೆ ನ್ಯಾಯಾಲಯದ ಮೂಲಕವೇ ಶಿಕ್ಷೆಯಾಗಬೇಕು’ ಎಂದು ಹೇಳಿದರು.</p>.<p><strong>ಪ್ರಿಯಾಂಕಾ ಆಕ್ರೋಶ: </strong>ವ್ಯಕ್ತಿಯೊಬ್ಬ ಅಪರಾಧವೊಂದರ ಆರೋಪಿಯಾಗಿದ್ದಲ್ಲಿ ಆತ ತಪ್ಪು ಮಾಡಿದ್ದಾನೋ, ಇಲ್ಲವೋ ಎಂಬುದನ್ನು ನ್ಯಾಯಾಲಯವೇ ನಿರ್ಧಾರ ಮಾಡಿ ಶಿಕ್ಷೆ ವಿಧಿಸುತ್ತದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.</p><p>‘ಆದರೆ, ಆರೋಪ ಕೇಳಿಬಂದ ತಕ್ಷಣವೇ ಆತನ ಕುಟುಂಬಕ್ಕೆ ಶಿಕ್ಷೆ ನೀಡುವುದು ಮತ್ತು ಅವರ ಸೂರನ್ನು ಕಸಿದುಕೊಳ್ಳುವುದು ಕಾನೂನಿಗೆ ವಿರುದ್ಧವಾದುದು ಮತ್ತು ಕೋರ್ಟ್ಗೆ ಅವಿಧೇಯತೆ ತೋರಿದಂತೆ. ಆರೋಪಿಗಳ ಮನೆಯನ್ನು ನೆಲಸಮ ಮಾಡುವುದು ನ್ಯಾಯ ಅಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p><p>ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮಾನವೀಯತೆಯ ಪರಿಪಾಲನೆಯು ನಾಗರಿಕ ಸಮಾಜದ ಆಡಳಿತದ ಮೂಲಭೂತ ಷರತ್ತುಗಳು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>