<p><strong>ಚೆನ್ನೈ:</strong> ಚೆನ್ನೈ ಉಪನಗರದ ಪಣಯೂರಿನಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಮಾಹಿತಿ ಕೋರಿದ್ದಾರೆ.</p><p>ಸೆಪ್ಟೆಂಬರ್ 27 ರಂದು ವಿಜಯ್ ಅವರ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು.</p>.ಕರೂರು ಕಾಲ್ತುಳಿತ: ವಿಜಯ್ ನೀಡಿದ್ದ ₹20 ಲಕ್ಷ ಹಣ ವಾಪಸ್ ನೀಡಿದ ಮಹಿಳೆ.<p>ಸಿಬಿಐ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ್ದನ್ನು ಪಕ್ಷದ ಜಂಟಿ ಕಾರ್ಯದರ್ಶಿ ಸಿ.ಟಿ.ಆರ್ ನಿರ್ಮಲ್ ಕುಮಾರ್ ಖಚಿತ ಪಡಿಸಿದ್ದು, ಸಿಸಿಟಿವಿ ದೃಶ್ಯವಳಿಗಳು ಸೇರಿ ಇತರ ಮಾಹಿತಿಗಳನ್ನು ಕೋರಿದ್ದಾರೆ ಎಂದು ತಿಳಿಸಿದ್ದಾರೆ.</p><p>‘ಅವರು ಮಾಹಿತಿ ಪಡೆಯಲು ಬಂದಿದ್ದರು, ವಿಚಾರಣೆಗೆ ಅಲ್ಲ. ಮಾಹಿತಿ ನೀಡಬೇಕು ಎಂದು ಸಮನ್ಸ್ ನೀಡಿದ್ದಾರೆ. ನಮ್ಮ ಪ್ರತಿನಿಧಿಯ ಮೂಲಕ ಮೂರು–ನಾಲ್ಕು ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ನಾವು ಹೇಳಿದ್ದೇವೆ. ಪಕ್ಷ ಈಗಾಗಲೇ ಆ ದಾಖಲೆಗಳನ್ನೆಲ್ಲಾ ಎಸ್ಐಟಿಗೆ ಸಲ್ಲಿಸಲಾಗಿದೆ’ ಎಂದು ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.</p><p>ಸುಪ್ರೀಂ ಕೋರ್ಟ್ ಆದೇಶದ ಬಳಿಕ ಪ್ರಕರಣದ ತನಿಖೆಯನ್ನು ಎಸ್ಐಟಿಯಿಂದ ಸಿಬಿಐ ವಹಿಸಿಕೊಂಡಿದೆ.</p> .ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್ಗೆ ಕರೆಯಿಸಿ ಭೇಟಿಯಾದ TVK ವಿಜಯ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಚೆನ್ನೈ ಉಪನಗರದ ಪಣಯೂರಿನಲ್ಲಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಮಾಹಿತಿ ಕೋರಿದ್ದಾರೆ.</p><p>ಸೆಪ್ಟೆಂಬರ್ 27 ರಂದು ವಿಜಯ್ ಅವರ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು.</p>.ಕರೂರು ಕಾಲ್ತುಳಿತ: ವಿಜಯ್ ನೀಡಿದ್ದ ₹20 ಲಕ್ಷ ಹಣ ವಾಪಸ್ ನೀಡಿದ ಮಹಿಳೆ.<p>ಸಿಬಿಐ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿದ್ದನ್ನು ಪಕ್ಷದ ಜಂಟಿ ಕಾರ್ಯದರ್ಶಿ ಸಿ.ಟಿ.ಆರ್ ನಿರ್ಮಲ್ ಕುಮಾರ್ ಖಚಿತ ಪಡಿಸಿದ್ದು, ಸಿಸಿಟಿವಿ ದೃಶ್ಯವಳಿಗಳು ಸೇರಿ ಇತರ ಮಾಹಿತಿಗಳನ್ನು ಕೋರಿದ್ದಾರೆ ಎಂದು ತಿಳಿಸಿದ್ದಾರೆ.</p><p>‘ಅವರು ಮಾಹಿತಿ ಪಡೆಯಲು ಬಂದಿದ್ದರು, ವಿಚಾರಣೆಗೆ ಅಲ್ಲ. ಮಾಹಿತಿ ನೀಡಬೇಕು ಎಂದು ಸಮನ್ಸ್ ನೀಡಿದ್ದಾರೆ. ನಮ್ಮ ಪ್ರತಿನಿಧಿಯ ಮೂಲಕ ಮೂರು–ನಾಲ್ಕು ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ನಾವು ಹೇಳಿದ್ದೇವೆ. ಪಕ್ಷ ಈಗಾಗಲೇ ಆ ದಾಖಲೆಗಳನ್ನೆಲ್ಲಾ ಎಸ್ಐಟಿಗೆ ಸಲ್ಲಿಸಲಾಗಿದೆ’ ಎಂದು ಕುಮಾರ್ ವರದಿಗಾರರಿಗೆ ತಿಳಿಸಿದ್ದಾರೆ.</p><p>ಸುಪ್ರೀಂ ಕೋರ್ಟ್ ಆದೇಶದ ಬಳಿಕ ಪ್ರಕರಣದ ತನಿಖೆಯನ್ನು ಎಸ್ಐಟಿಯಿಂದ ಸಿಬಿಐ ವಹಿಸಿಕೊಂಡಿದೆ.</p> .ಕರೂರು ಕಾಲ್ತುಳಿತ: ಸಂತ್ರಸ್ತರನ್ನು ರೆಸಾರ್ಟ್ಗೆ ಕರೆಯಿಸಿ ಭೇಟಿಯಾದ TVK ವಿಜಯ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>