ಮುಂಬೈ: ಕರ್ನಾಟಕ –ಮಹಾರಾಷ್ಟ್ರ ನಡುವಣ ಗಡಿವಿವಾದ ಉದ್ವಿಗ್ನಗೊಂಡಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಂತೆ ಇರುವುದು ಸರಿಯಲ್ಲ ಎಂದು ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಭಾಷಾ ಮಾಧ್ಯಮ ಮತ್ತು ಹೋರಾಟವನ್ನು ಹತ್ತಿಕ್ಕಲು ಅಧಿಕಾರ ದುರ್ಬಳಕೆ ಆದಾಗ ಆ ಬಗ್ಗೆ ಪ್ರತಿಕ್ರಿಯಿಸಲೇ ಬೇಕು. ಆದರೆ, ಕೇಂದ್ರ ಈ ವಿಷಯದಲ್ಲಿ ಕುರುಡಾಗಿದೆ ಎಂದು ಅವರು ಹೇಳಿದರು.
‘ಲೋಕಸಭೆಯಲ್ಲಿ ಬುಧವಾರ ಸುಪ್ರಿಯಾ ಸುಳೆ ಈ ವಿಷಯ ಪ್ರಸ್ತಾಪಿಸಿದಾಗ, ಇದು ಇಲ್ಲಿ ಚರ್ಚಿಸುವ ವಿಷಯವಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ಸಂಸತ್ತು ಗಮನಿಸದಿದ್ದರೆ ಇನ್ಯಾರು ಗಮನಿಸಬೇಕು’ ಎಂದು ಪವಾರ್ ಪ್ರಶ್ನಿಸಿದರು.