ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ‘ದೇಶದ ಬಹುಪಾಲು ಜನರಿಗೆ ಮಾಧ್ಯಮಗಳ ಪರಿಚಯವಿಲ್ಲ. ಟಿ.ವಿ, ದಿನಪತ್ರಿಕೆ ಸೇರಿದಂತೆ ಇತರೆ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಸಮಾಜದಲ್ಲಿನ ಇಂತಹ ವರ್ಗದ ಜನರಿಗೆ ಮಾಹಿತಿ ತಲುಪಿಸುವ ಮಹತ್ತರವಾದ ಜವಾಬ್ದಾರಿ ಐಐಎಸ್ ಅಧಿಕಾರಿಗಳ ಮೇಲಿದೆ’ ಎಂದರು.