<p>ಚಿನ್ನ ಹೆಚ್ಚು ಬೆಲೆ ಬಾಳುವ ವಸ್ತುವಾಗಿದೆ. ಈಗಂತೂ ಚಿನ್ನ ಖರೀದಿಸಲು ವರ್ಷಗಟ್ಟಲೇ ಹಣವನ್ನು ಕೂಡಿಟ್ಟರೂ ಸಾಕಾಗುವುದಿಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.</p><p>ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ ಅವರು ಪ್ರತಿ ದಿನದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಟಿ.ನಗರದ ಮುಪ್ಪತ್ಮನ್ ದೇವಸ್ಥಾನ ಬೀದಿಯಲ್ಲಿ ಚೀಲವೊಂದು ಕಣ್ಣಿಗೆ ಬಿದ್ದಿದೆ. ಏನೆಂದು ನೋಡಿದ ಪದ್ಮಾ ಅವರಿಗೆ ಆರ್ಶರ್ಯವೇ ಕಾದಿತ್ತು. ಚೀಲದಲ್ಲಿ ಸುಮಾರು ₹45 ಲಕ್ಷ ಮೌಲ್ಯದ 360ಗ್ರಾಂ ತೂಕದ ಚಿನ್ನಾಭರಣಗಳಲ್ಲಿದ್ದವು. </p>.<p>ಪದ್ಮಾ ಅವರು ಚೀಲ ತೆಗೆದುಕೊಂಡು ನೇರವಾಗಿ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಚಿನ್ನದ ಮಾಲೀಕರು ಯಾರೆಂದು ಹುಡುಕಾಟವನ್ನು ಆರಂಭಿಸಿದರು. ಈ ಹಿಂದೆ ಚಿನ್ನದ ಆಭರಣವಿರುವ ಚೀಲ ಕಳೆದುಕೊಂಡಿರುವ ಬಗ್ಗೆ ದೂರು ಸಲ್ಲಿಸಿದ್ದ ನಂಗನಲ್ಲೂರಿನ ನಿವಾಸಿ ರಮೇಶ್ ನೆನಪಾದರು. ತಕ್ಷಣ ಅವರನ್ನು ಠಾಣೆಗೆ ಕರೆಸಿ, ಸರಿಯಾದ ಪರಿಶೀಲನೆ ಮತ್ತು ವಿಚಾರಣೆಯ ನಂತರ ಆಭರಣಗಳನ್ನು ಅವರಿಗೆ ಹಿಂದಿರುಗಿಸಿದ್ದಾರೆ. </p><p><strong>ಪದ್ಮಾಗೆ ಸನ್ಮಾನ</strong></p><p>ಪದ್ಮಾ ಅವರ ಪ್ರಾಮಾಣಿಕತೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್ ಸಮಯದಲ್ಲಿ ಪದ್ಮಾ ಅವರ ಪತಿ ಕೂಡ ತಮಗೆ ಸಿಕ್ಕಿದ್ದ ₹1.5 ಲಕ್ಷ ಹಣವನ್ನು ಪೊಲೀಸರಿಗೆ ನೀಡಿದ್ದರು. ಈ ದಂಪತಿ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರ ಪ್ರಮಾಣಿಕತೆಯನ್ನು ಗುರುತಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸನ್ಮಾನಿಸಿ, ಮೆಚ್ಚುಗೆಯ ಸಂಕೇತವಾಗಿ ₹1 ಲಕ್ಷ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿನ್ನ ಹೆಚ್ಚು ಬೆಲೆ ಬಾಳುವ ವಸ್ತುವಾಗಿದೆ. ಈಗಂತೂ ಚಿನ್ನ ಖರೀದಿಸಲು ವರ್ಷಗಟ್ಟಲೇ ಹಣವನ್ನು ಕೂಡಿಟ್ಟರೂ ಸಾಕಾಗುವುದಿಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.</p><p>ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ ಅವರು ಪ್ರತಿ ದಿನದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಟಿ.ನಗರದ ಮುಪ್ಪತ್ಮನ್ ದೇವಸ್ಥಾನ ಬೀದಿಯಲ್ಲಿ ಚೀಲವೊಂದು ಕಣ್ಣಿಗೆ ಬಿದ್ದಿದೆ. ಏನೆಂದು ನೋಡಿದ ಪದ್ಮಾ ಅವರಿಗೆ ಆರ್ಶರ್ಯವೇ ಕಾದಿತ್ತು. ಚೀಲದಲ್ಲಿ ಸುಮಾರು ₹45 ಲಕ್ಷ ಮೌಲ್ಯದ 360ಗ್ರಾಂ ತೂಕದ ಚಿನ್ನಾಭರಣಗಳಲ್ಲಿದ್ದವು. </p>.<p>ಪದ್ಮಾ ಅವರು ಚೀಲ ತೆಗೆದುಕೊಂಡು ನೇರವಾಗಿ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಚಿನ್ನದ ಮಾಲೀಕರು ಯಾರೆಂದು ಹುಡುಕಾಟವನ್ನು ಆರಂಭಿಸಿದರು. ಈ ಹಿಂದೆ ಚಿನ್ನದ ಆಭರಣವಿರುವ ಚೀಲ ಕಳೆದುಕೊಂಡಿರುವ ಬಗ್ಗೆ ದೂರು ಸಲ್ಲಿಸಿದ್ದ ನಂಗನಲ್ಲೂರಿನ ನಿವಾಸಿ ರಮೇಶ್ ನೆನಪಾದರು. ತಕ್ಷಣ ಅವರನ್ನು ಠಾಣೆಗೆ ಕರೆಸಿ, ಸರಿಯಾದ ಪರಿಶೀಲನೆ ಮತ್ತು ವಿಚಾರಣೆಯ ನಂತರ ಆಭರಣಗಳನ್ನು ಅವರಿಗೆ ಹಿಂದಿರುಗಿಸಿದ್ದಾರೆ. </p><p><strong>ಪದ್ಮಾಗೆ ಸನ್ಮಾನ</strong></p><p>ಪದ್ಮಾ ಅವರ ಪ್ರಾಮಾಣಿಕತೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್ ಸಮಯದಲ್ಲಿ ಪದ್ಮಾ ಅವರ ಪತಿ ಕೂಡ ತಮಗೆ ಸಿಕ್ಕಿದ್ದ ₹1.5 ಲಕ್ಷ ಹಣವನ್ನು ಪೊಲೀಸರಿಗೆ ನೀಡಿದ್ದರು. ಈ ದಂಪತಿ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರ ಪ್ರಮಾಣಿಕತೆಯನ್ನು ಗುರುತಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸನ್ಮಾನಿಸಿ, ಮೆಚ್ಚುಗೆಯ ಸಂಕೇತವಾಗಿ ₹1 ಲಕ್ಷ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>