<p><strong>ಹೈದರಾಬಾದ್:</strong> ರಾಜ್ಯದ ಖಜಾನೆಗೆ ₹300 ಕೋಟಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ‘ಕೌಶಲ ಅಭಿವೃದ್ಧಿ ಹಗರಣ’ಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಇತರೆ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಐಡಿ ಸಲ್ಲಿಸಿದ್ದ ಮನವಿಯನ್ನು ವಿಜಯವಾಡದ ‘ಎಸಿಬಿ’ ಕೋರ್ಟ್ ಮಂಗಳವಾರ ಅನುಮೋದಿಸಿದೆ. </p><p>ವೈಎಸ್ಆರ್ಸಿಪಿ ಅವಧಿಯಲ್ಲಿ ವಿರೋಧ ಪಕ್ಷದ ಮುಖಂಡರಾಗಿದ್ದ ನಾಯ್ಡು ಅವರನ್ನು ‘ಕೌಶಲ ಅಭಿವೃದ್ಧಿ ಹಗರಣದಲ್ಲಿ ಆರೋಪಿಯನ್ನಾಗಿ ಮಾಡಿ, 2023ರ ಸೆಪ್ಟೆಂಬರ್ 9ರಂದು ಬಂಧಿಸಲಾಗಿತ್ತು. 50 ದಿನ ಜೈಲಿನಲ್ಲಿ ಕಳೆದ ಅವರು 2023ರ ಅಕ್ಟೋಬರ್ 31ರಂದು ಜಾಮೀನು ಪಡೆದು ಹೊರಬಂದಿದ್ದರು. </p><p>ಒಟ್ಟು ₹3,300 ಕೋಟಿ ಮೊತ್ತದಲ್ಲಿ ಕ್ಲಸ್ಟರ್ ಮಟ್ಟದ ಶ್ರೇಷ್ಠತಾ ಕೇಂದ್ರಗಳನ್ನು ತೆರೆಯುವ (ಸಿಒಇಎಸ್) ಯೋಜನೆ ಇದಾಗಿತ್ತು. ಇದರಲ್ಲಿ ನಾಯ್ಡು ಮತ್ತು ಸಹ ಆರೋಪಿಗಳು ಸೇರಿಕೊಂಡು ₹300 ಕೋಟಿಗೂ ಹೆಚ್ಚಿನ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಸಿಐಡಿ ಸೋಮವಾರ ಎಸಿಬಿ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಇದು ‘ತಪ್ಪು ಗ್ರಹಿಕೆ’ ಪ್ರಕರಣವಾಗಿದ್ದು, ಮುಕ್ತಾಯಗೊಳಿಸಲು ಅನುಮತಿ ನೀಡಬೇಕಾಗಿ ಕೋರಿತ್ತು. </p><p>‘ನಾಯ್ದು ಅವರು ತನಿಖಾ ಸಂಸ್ಥೆಗಳ ಪ್ರಭಾವ ಬೀರಿದ್ದಾರೆ ಎಂದು ವೈಎಸ್ಆರ್ಸಿಪಿ ಆರೋಪಿಸಿದೆ. ಪಕ್ಷವು ನಾಯ್ಡು ವಿರುದ್ಧ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಮಾಜಿ ಸಚಿವ ಕೆ. ಕನ್ನಬಾಬು ಹೇಳಿದ್ದಾರೆ. </p><p>‘ಕೌಶಲ ಅಭಿವೃದ್ಧಿ ಹಗರಣ’ದ ತನಿಖೆಯನ್ನು ಮುಕ್ತಾಯಗೊಳಿಸುವುದು ಅಸಾಂವಿಧಾನಿಕ, ಅಪಾಯಕಾರಿ’ ಎಂದು ಸಾಕೆ ಸೈಲಾಜನಾಥ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ರಾಜ್ಯದ ಖಜಾನೆಗೆ ₹300 ಕೋಟಿಗೂ ಹೆಚ್ಚಿನ ನಷ್ಟ ಉಂಟು ಮಾಡಿದ ‘ಕೌಶಲ ಅಭಿವೃದ್ಧಿ ಹಗರಣ’ಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಇತರೆ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಮುಕ್ತಾಯಗೊಳಿಸಲು ಸಿಐಡಿ ಸಲ್ಲಿಸಿದ್ದ ಮನವಿಯನ್ನು ವಿಜಯವಾಡದ ‘ಎಸಿಬಿ’ ಕೋರ್ಟ್ ಮಂಗಳವಾರ ಅನುಮೋದಿಸಿದೆ. </p><p>ವೈಎಸ್ಆರ್ಸಿಪಿ ಅವಧಿಯಲ್ಲಿ ವಿರೋಧ ಪಕ್ಷದ ಮುಖಂಡರಾಗಿದ್ದ ನಾಯ್ಡು ಅವರನ್ನು ‘ಕೌಶಲ ಅಭಿವೃದ್ಧಿ ಹಗರಣದಲ್ಲಿ ಆರೋಪಿಯನ್ನಾಗಿ ಮಾಡಿ, 2023ರ ಸೆಪ್ಟೆಂಬರ್ 9ರಂದು ಬಂಧಿಸಲಾಗಿತ್ತು. 50 ದಿನ ಜೈಲಿನಲ್ಲಿ ಕಳೆದ ಅವರು 2023ರ ಅಕ್ಟೋಬರ್ 31ರಂದು ಜಾಮೀನು ಪಡೆದು ಹೊರಬಂದಿದ್ದರು. </p><p>ಒಟ್ಟು ₹3,300 ಕೋಟಿ ಮೊತ್ತದಲ್ಲಿ ಕ್ಲಸ್ಟರ್ ಮಟ್ಟದ ಶ್ರೇಷ್ಠತಾ ಕೇಂದ್ರಗಳನ್ನು ತೆರೆಯುವ (ಸಿಒಇಎಸ್) ಯೋಜನೆ ಇದಾಗಿತ್ತು. ಇದರಲ್ಲಿ ನಾಯ್ಡು ಮತ್ತು ಸಹ ಆರೋಪಿಗಳು ಸೇರಿಕೊಂಡು ₹300 ಕೋಟಿಗೂ ಹೆಚ್ಚಿನ ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಸಿಐಡಿ ಸೋಮವಾರ ಎಸಿಬಿ ಕೋರ್ಟ್ಗೆ ಸಲ್ಲಿಸಿದ ವರದಿಯಲ್ಲಿ ಇದು ‘ತಪ್ಪು ಗ್ರಹಿಕೆ’ ಪ್ರಕರಣವಾಗಿದ್ದು, ಮುಕ್ತಾಯಗೊಳಿಸಲು ಅನುಮತಿ ನೀಡಬೇಕಾಗಿ ಕೋರಿತ್ತು. </p><p>‘ನಾಯ್ದು ಅವರು ತನಿಖಾ ಸಂಸ್ಥೆಗಳ ಪ್ರಭಾವ ಬೀರಿದ್ದಾರೆ ಎಂದು ವೈಎಸ್ಆರ್ಸಿಪಿ ಆರೋಪಿಸಿದೆ. ಪಕ್ಷವು ನಾಯ್ಡು ವಿರುದ್ಧ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಮಾಜಿ ಸಚಿವ ಕೆ. ಕನ್ನಬಾಬು ಹೇಳಿದ್ದಾರೆ. </p><p>‘ಕೌಶಲ ಅಭಿವೃದ್ಧಿ ಹಗರಣ’ದ ತನಿಖೆಯನ್ನು ಮುಕ್ತಾಯಗೊಳಿಸುವುದು ಅಸಾಂವಿಧಾನಿಕ, ಅಪಾಯಕಾರಿ’ ಎಂದು ಸಾಕೆ ಸೈಲಾಜನಾಥ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>