ಅಪಘಾತದಲ್ಲಿ ಪೂರ್ಣ ಅಂಗವಿಕಲರಾಗಿದ್ದ ಕೇರಳದ ಜಿತೇಂದ್ರನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪರಿಗಣಿಸಿತು. ಕೇರಳ ಹೈಕೋರ್ಟ್ ಪರಿಹಾರದ ಮೊತ್ತವನ್ನು ₹ 14.31 ಲಕ್ಷದಿಂದ ₹ 27.67ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿತ್ತು. 2001ರಲ್ಲಿ ವೇಗವಾಗಿ ಬಂದಿದ್ದ ಕಾರು ಡಿಕ್ಕಿ ಹೊಡೆದಿದ್ದು, ಇವರು ವಾಹನದ ಹಿಂಬದಿ ಸವಾರರಾಗಿದ್ದರು. ಅಪಘಾತ ನಡೆದಾಗ 21 ವರ್ಷದವರಾಗಿದ್ದ ಇವರು ಜ್ಯುವೆಲ್ಲರಿ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ₹ 4,500 ಗಳಿಸುತ್ತಿದ್ದರು.