ಮಲಪ್ಪುರಂ ಜಿಲ್ಲಾಧಿಕಾರಿ ಜಫರ್ ಮಲಿಕ್ ಬಸ್ ನಿರ್ವಾಹಕನ ಮನಸ್ಸು ಬದಲಾಯಿಸಲಿ ಎಂಬ ಉದ್ದೇಶದಿಂದ ಈ ವಿಭಿನ್ನ ರೀತಿಯ ಶಿಕ್ಷೆ ವಿಧಿಸಿದ್ದಾರೆ. ಜುಲೈ 23ರಂದು ಪರಪ್ಪನಂಗಡಿಯಲ್ಲಿ ಎಂಬಲ್ಲಿ ಎಲ್ಕೆಜಿ ಕಲಿಯುತ್ತಿದ್ದ ಪುಟಾಣಿಯೊಬ್ಬ ಅಕ್ಕನೊಡನೆ ಖಾಸಗಿ ಬಸ್ಸು ಏರಿದ್ದ. ಅಕ್ಕ ತಮ್ಮ ಇಬ್ಬರೂ ಇಳಿಯಬೇಕಾದ ನಿಲ್ದಾಣ ಬಂದಾಗ, ಅಕ್ಕ ಇಳಿದ ಕೂಡಲೇ ಗಡಿಬಿಡಿ ಕಂಡಕ್ಟರ್ ಬಸ್ ಗೆ ರೈಟ್ ಹೇಳಿದ್ದ. ಪುಟ್ಟ ತಮ್ಮ ಬಸ್ಸು ಇಳಿಯುವ ಮುನ್ನವೇ ಬಸ್ಸು ಹೊರಟಿತ್ತು. ತುಂತುರು ಮಳೆಯಲ್ಲಿ ತಮ್ಮನ ಕಾಣದ ಅಕ್ಕ ಕಿರುಚಿಕೊಂಡಾಗ ಬಸ್ಸು ಸುಮಾರು 300 ಮೀಟರ್ ದೂರ ಹೋಗಿ ನಿಂತಿತು.