ಅಮೃತ್ ಧವನ್ ಅವರು ಬೆಂಗಳೂರಿನಲ್ಲಿ, ಭವ್ಯಾ ನರಸಿಂಹಮೂರ್ತಿ ಗೋವಾದಲ್ಲಿ, ರಜನೀತ್ ರಂಜನ್ ಭುವನೇಶ್ವರದಲ್ಲಿ, ಅಲ್ಕಾ ಲಂಬಾ ಅವರು ಜೈಪುರದಲ್ಲಿ, ಅಮಿ ಯಾಗ್ನಿಕ್ ಅವರು ಮುಂಬೈನಲ್ಲಿ, ರಾಗಿಣಿ ನಾಯಕ್ ಅವರು ರಾಂಚಿ ಹಾಗೂ ಶಮಾ ಮೊಹಮ್ಮದ್ ಅವರು ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ದೇಶದ 21 ನಗರಗಳಲ್ಲಿ 21 ಮಹಿಳಾ ನಾಯಕರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಹೆಸರಿನಲ್ಲಿ ಮೋದಿ ಸರ್ಕಾರ ಮಾಡಿರುವ ದ್ರೋಹವನ್ನು ಬಯಲಿಗೆಲೆಯಲಾವುದು ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.