<p><strong>ಬಹರೈಚ್</strong>: ಕುಂಭ ಮೇಳ ಅಥವಾ ದೇವಾಲಯದಿಂದಾಗಿ ದೇಶ ಅಭಿವೃದ್ದಿಯಾಗಲ್ಲ. ದೇಶ ಅಭಿವೃದ್ಧಿ ಹೊಂದಬೇಕಾದರೆ ಸಂವಿಧಾನದ ಅನುಷ್ಠಾನ ಆಗಬೇಕು ಎಂದು ಬಿಜೆಪಿಯ ಮಾಜಿ ನಾಯಕಿ ಸಾವಿತ್ರಿಬಾಯಿ ಫುಲೆ ಹೇಳಿದ್ದಾರೆ.</p>.<p>ಪರಿಶಿಷ್ಟ ಜಾತಿ ಮತ್ತು ವರ್ಗದವರು ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವಾಗ ಉತ್ತರ ಪ್ರದೇಶ ಸರ್ಕಾರ ಕುಂಭ ಮೇಳ ಮತ್ತು ದೇವಾಲಯಗಳಿಗೆ ಹಣ ಖರ್ಚು ಮಾಡುತ್ತಿದೆ ಎಂದು ಫುಲೆ ಯೋಗಿ ಆದಿತ್ಯನಾಥರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>ಕುಂಭ ಅಥವಾ ದೇವಾಲಯಗಳಿಗೆ ಖರ್ಚು ಮಾಡುವುದರಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಮುಸ್ಲಿಂ ಸಮುದಾಯದವರ ಏಳಿಗೆಯಾಗುತ್ತದೆಯೇ? ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಕುಂಭ ಮೇಳಕ್ಕೆ ಖರ್ಚು ಮಾಡುತ್ತಿದೆ. ದೇವರು ಅಥವಾ ದೇವಾಲಯದಿಂದ ಸರ್ಕಾರ ಆಡಳಿತ ನಡೆಯುವುದಿಲ್ಲ.ಅದು ನಡೆಯಬೇಕಾದರೆ ಸಂವಿಧಾನ ಬೇಕು.</p>.<p>ಉತ್ತರ ಪ್ರದೇಶದ ಕಾನೂನು ಸಂಪೂರ್ಣ ಕುಂಠಿತವಾಗಿದೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರಾಜ್ಯದ ಆಡಳಿತ ನಡೆಸಲು ಸಮರ್ಥರು ಅಲ್ಲ ಎಂದು ವಿವಿಧ ಸುದ್ದಿ ಪತ್ರಿಕೆಗಳ ವರದಿ ನೋಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ ಫುಲೆ.</p>.<p>2014ರಲ್ಲಿ ಬಹರೈಚ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಗೆದ್ದಿದ್ದ ಫುಲೆ, ಮೀಸಲಾತಿಗಾಗಿ ಬಿಜೆಪಿ ಯಾವುದೇ ಕಾರ್ಯ ಮಾಡುತ್ತಿಲ್ಲ.ಬಿಜೆಪಿ ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಿ ಡಿಸೆಂಬರ್ 6 ರಂದು ಪಕ್ಷ ತೊರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಹರೈಚ್</strong>: ಕುಂಭ ಮೇಳ ಅಥವಾ ದೇವಾಲಯದಿಂದಾಗಿ ದೇಶ ಅಭಿವೃದ್ದಿಯಾಗಲ್ಲ. ದೇಶ ಅಭಿವೃದ್ಧಿ ಹೊಂದಬೇಕಾದರೆ ಸಂವಿಧಾನದ ಅನುಷ್ಠಾನ ಆಗಬೇಕು ಎಂದು ಬಿಜೆಪಿಯ ಮಾಜಿ ನಾಯಕಿ ಸಾವಿತ್ರಿಬಾಯಿ ಫುಲೆ ಹೇಳಿದ್ದಾರೆ.</p>.<p>ಪರಿಶಿಷ್ಟ ಜಾತಿ ಮತ್ತು ವರ್ಗದವರು ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವಾಗ ಉತ್ತರ ಪ್ರದೇಶ ಸರ್ಕಾರ ಕುಂಭ ಮೇಳ ಮತ್ತು ದೇವಾಲಯಗಳಿಗೆ ಹಣ ಖರ್ಚು ಮಾಡುತ್ತಿದೆ ಎಂದು ಫುಲೆ ಯೋಗಿ ಆದಿತ್ಯನಾಥರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.</p>.<p>ಕುಂಭ ಅಥವಾ ದೇವಾಲಯಗಳಿಗೆ ಖರ್ಚು ಮಾಡುವುದರಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಮುಸ್ಲಿಂ ಸಮುದಾಯದವರ ಏಳಿಗೆಯಾಗುತ್ತದೆಯೇ? ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಕುಂಭ ಮೇಳಕ್ಕೆ ಖರ್ಚು ಮಾಡುತ್ತಿದೆ. ದೇವರು ಅಥವಾ ದೇವಾಲಯದಿಂದ ಸರ್ಕಾರ ಆಡಳಿತ ನಡೆಯುವುದಿಲ್ಲ.ಅದು ನಡೆಯಬೇಕಾದರೆ ಸಂವಿಧಾನ ಬೇಕು.</p>.<p>ಉತ್ತರ ಪ್ರದೇಶದ ಕಾನೂನು ಸಂಪೂರ್ಣ ಕುಂಠಿತವಾಗಿದೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರಾಜ್ಯದ ಆಡಳಿತ ನಡೆಸಲು ಸಮರ್ಥರು ಅಲ್ಲ ಎಂದು ವಿವಿಧ ಸುದ್ದಿ ಪತ್ರಿಕೆಗಳ ವರದಿ ನೋಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ ಫುಲೆ.</p>.<p>2014ರಲ್ಲಿ ಬಹರೈಚ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಗೆದ್ದಿದ್ದ ಫುಲೆ, ಮೀಸಲಾತಿಗಾಗಿ ಬಿಜೆಪಿ ಯಾವುದೇ ಕಾರ್ಯ ಮಾಡುತ್ತಿಲ್ಲ.ಬಿಜೆಪಿ ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಿ ಡಿಸೆಂಬರ್ 6 ರಂದು ಪಕ್ಷ ತೊರೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>