<p><strong>ನವದೆಹಲಿ:</strong> ಹಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.</p>.<p>ಈವರೆಗೆ ಸೋಂಕಿನಿಂದ ಅತಿಹೆಚ್ಚು ತೊಂದರೆಗೀಡಾಗಿರುವ ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 14,348 ಹೊಸ ಪ್ರಕರಣಗಳು ಪತ್ತೆಯಾಗಿವೆ. 278 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 14,30,861 ತಲುಪಿದೆ. 37,758 ಸಾವು ಸಂಭವಿಸಿದ್ದು, 11,34,555 ಮಂದಿ ಗುಣಮುಖರಾಗಿದ್ದಾರೆ. 2,58,108 ಸಕ್ರಿಯ ಪ್ರಕರಣಗಳಿವೆ.</p>.<p>ದೆಹಲಿಯಲ್ಲಿ 2,258 ಜನರಿಗೆ ಸೋಂಕು ತಗುಲಿದ್ದು, 34 ಜನ ಇಹಲೋಕ ತ್ಯಜಿಸಿದ್ದಾರೆ. 3,440 ಮಂದಿ ಚೇತರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 3,340 ಹೊಸ ಪ್ರಕರಣಗಳು ದೃಢಪಟ್ಟಿದ್ದು, 62 ಜನ ಸಾವಿಗೀಡಾಗಿದ್ದಾರೆ. 3,013 ಜನ ಗುಣಮುಖರಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ 6,224 ಹೊಸ ಪ್ರಕರಣಗಳು ವರದಿಯಾಗಿದ್ದು, 41 ಮಂದಿ ಅಸುನೀಗಿದ್ದಾರೆ. 7,798 ಜನ ಚೇತರಿಸಿಕೊಂಡಿದ್ದಾರೆ.</p>.<p><strong>ಇದನ್ನೂ ಓದಿ:</strong><a class="pj-top-story-small-image-card__content__title pb-1" href="https://www.prajavani.net/karnataka-news/coronavirus-latest-updates-from-karnataka-covid19-infections-deaths-and-other-news-767818.html">Covid-19 Karnataka Update: ರಾಜ್ಯದಲ್ಲಿ 9,886 ಹೊಸ ಕೋವಿಡ್ ಪ್ರಕರಣ</a></p>.<p>ರಾಜಸ್ಥಾನದಲ್ಲಿ 2,150 ಮಂದಿ ಸೋಂಕಿತರಾಗಿದ್ದು, 14 ಜನ ಮೃತಪಟ್ಟಿದ್ದಾರೆ. 2003 ಸೋಂಕಿತರು ಗುಣಮುಖರಾಗಿದ್ದಾರೆ.</p>.<p>ಉಳಿದಂತೆ ಚಂಡೀಗಡದಲ್ಲಿ 148, ಮಣಿಪುರದಲ್ಲಿ 252, ಉತ್ತರಾಖಂಡದಲ್ಲಿ 503, ಪಂಜಾಬ್ನಲ್ಲಿ 1,106, ಕರ್ನಾಟಕದಲ್ಲಿ 9,886, ಗುಜರಾತ್ನಲ್ಲಿ 1,343, ಹಿಮಾಚಲ ಪ್ರದೇಶದಲ್ಲಿ 170, ಜಾರ್ಖಂಡ್ನಲ್ಲಿ 877 ಪ್ರಕರಣಗಳು ವರದಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹಲವು ರಾಜ್ಯಗಳಲ್ಲಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆ ಆರಂಭವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.</p>.<p>ಈವರೆಗೆ ಸೋಂಕಿನಿಂದ ಅತಿಹೆಚ್ಚು ತೊಂದರೆಗೀಡಾಗಿರುವ ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 14,348 ಹೊಸ ಪ್ರಕರಣಗಳು ಪತ್ತೆಯಾಗಿವೆ. 278 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 14,30,861 ತಲುಪಿದೆ. 37,758 ಸಾವು ಸಂಭವಿಸಿದ್ದು, 11,34,555 ಮಂದಿ ಗುಣಮುಖರಾಗಿದ್ದಾರೆ. 2,58,108 ಸಕ್ರಿಯ ಪ್ರಕರಣಗಳಿವೆ.</p>.<p>ದೆಹಲಿಯಲ್ಲಿ 2,258 ಜನರಿಗೆ ಸೋಂಕು ತಗುಲಿದ್ದು, 34 ಜನ ಇಹಲೋಕ ತ್ಯಜಿಸಿದ್ದಾರೆ. 3,440 ಮಂದಿ ಚೇತರಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 3,340 ಹೊಸ ಪ್ರಕರಣಗಳು ದೃಢಪಟ್ಟಿದ್ದು, 62 ಜನ ಸಾವಿಗೀಡಾಗಿದ್ದಾರೆ. 3,013 ಜನ ಗುಣಮುಖರಾಗಿದ್ದಾರೆ. ಆಂಧ್ರ ಪ್ರದೇಶದಲ್ಲಿ 6,224 ಹೊಸ ಪ್ರಕರಣಗಳು ವರದಿಯಾಗಿದ್ದು, 41 ಮಂದಿ ಅಸುನೀಗಿದ್ದಾರೆ. 7,798 ಜನ ಚೇತರಿಸಿಕೊಂಡಿದ್ದಾರೆ.</p>.<p><strong>ಇದನ್ನೂ ಓದಿ:</strong><a class="pj-top-story-small-image-card__content__title pb-1" href="https://www.prajavani.net/karnataka-news/coronavirus-latest-updates-from-karnataka-covid19-infections-deaths-and-other-news-767818.html">Covid-19 Karnataka Update: ರಾಜ್ಯದಲ್ಲಿ 9,886 ಹೊಸ ಕೋವಿಡ್ ಪ್ರಕರಣ</a></p>.<p>ರಾಜಸ್ಥಾನದಲ್ಲಿ 2,150 ಮಂದಿ ಸೋಂಕಿತರಾಗಿದ್ದು, 14 ಜನ ಮೃತಪಟ್ಟಿದ್ದಾರೆ. 2003 ಸೋಂಕಿತರು ಗುಣಮುಖರಾಗಿದ್ದಾರೆ.</p>.<p>ಉಳಿದಂತೆ ಚಂಡೀಗಡದಲ್ಲಿ 148, ಮಣಿಪುರದಲ್ಲಿ 252, ಉತ್ತರಾಖಂಡದಲ್ಲಿ 503, ಪಂಜಾಬ್ನಲ್ಲಿ 1,106, ಕರ್ನಾಟಕದಲ್ಲಿ 9,886, ಗುಜರಾತ್ನಲ್ಲಿ 1,343, ಹಿಮಾಚಲ ಪ್ರದೇಶದಲ್ಲಿ 170, ಜಾರ್ಖಂಡ್ನಲ್ಲಿ 877 ಪ್ರಕರಣಗಳು ವರದಿಯಾಗಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>