<p><strong>ಚೆನ್ನೈ:</strong> ಕೋವಿಡ್–19 ಚಿಕಿತ್ಸೆಗೆ ಪಾರಂಪರಿಕ ‘ಸಿದ್ಧ’ ಪದ್ಧತಿಯ ಔಷಧಿಯನ್ನು ನೀಡುವ ಸಂಬಂಧ ಚೆನ್ನೈನ ಸ್ಟ್ಯಾನ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಮುಕ್ತಾಯವಾಗಿದೆ.</p>.<p>ಕೋವಿಡ್ ನಿವಾರಣೆಯಲ್ಲಿ ಈ ಔಷಧಿ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ವರದಿ ಸಿದ್ಧವಾಗಿದೆ. ಆಯುಷ್ ಸಚಿವಾಲಯದ ಅನುಮತಿ ದೊರೆತ ತಕ್ಷಣವೇ ಈ ವರದಿಯನ್ನು ಬಹಿರಂಗಪಡಿಸಲಾಗುವುದು ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಸಿದ್ಧ (ಸಿಸಿಆರ್ಎಸ್) ಪ್ರಧಾನ ನಿರ್ದೇಶಕಿ ಡಾ.ಕೆ.ಕನಕವಲ್ಲಿ ತಿಳಿಸಿದ್ದಾರೆ.</p>.<p>ಸಿದ್ಧ ಪದ್ಧತಿಯ ಔಷಧಿ ನೀಡುವ ವೈದ್ಯರ ಸಹಯೋಗದಲ್ಲಿ ಈ ಪ್ರಾಜೆಕ್ಟ್ಅನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಟ್ಯಾನ್ಲೆ ಆಸ್ಪತ್ರೆಯ ಜೊತೆಗೆ ಇತರ 9 ಕಡೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭಗೊಂಡಿದ್ದು, ಅವು ಸಹ ಮುಕ್ತಾಯದ ಹಂತದಲ್ಲಿವೆ ಎಂದು ಮೂಲಗಳು ಹೇಳಿವೆ.</p>.<p>‘ಸಾರ್ಸ್–ಕೋವ್–2’ ವೈರಸ್ನಿಂದಾಗುವ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು, ಲಕ್ಷಣ ರಹಿತ ಕೋವಿಡ್–19 ತೀವ್ರಗೊಳ್ಳದಂತೆ ತಡೆಯಲು ಸಿದ್ಧ ಔಷಧಿಯನ್ನು ಈ ಟ್ರಯಲ್ನಲ್ಲಿ ಪ್ರಯೋಗಿಸಲಾಗಿದೆ.</p>.<p>ಕೋವಿಡ್ ಚಿಕಿತ್ಸೆಯಲ್ಲಿ ಅಲೋಪಥಿ ಪದ್ಧತಿಯಲ್ಲಿ ವಿಟಮಿನ್ ಸಿ ಹಾಗೂ ಸತು (ಝಿಂಕ್) ಇರುವ ಮಾತ್ರೆ ನೀಡಲಾಗುತ್ತದೆ. ಸಿದ್ಧ ಪದ್ಧತಿಯ ‘ಕಬಸುರ ಕುಡಿನೀರ್’ (ಕೆಎಸ್ಕೆ) ಎಂಬ ಔಷಧಿ ವಿಟಮಿನ್ ಸಿ ಮತ್ತು ಸತುವಿನಂತೆಯೇ ಕಾರ್ಯನಿರ್ವಹಿಸುತ್ತದೆ ಎಂಬುದು ಸಿದ್ಧ ಪದ್ಧತಿಯ ತಜ್ಞರ ಪ್ರತಿಪಾದನೆ. ಔಷಧಿಯ ಈ ಗುಣವನ್ನು ಸಹ ಟ್ರಯಲ್ ಸಂದರ್ಭದಲ್ಲಿ ಪರೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ಕೋವಿಡ್–19 ಚಿಕಿತ್ಸೆಗೆ ಪಾರಂಪರಿಕ ‘ಸಿದ್ಧ’ ಪದ್ಧತಿಯ ಔಷಧಿಯನ್ನು ನೀಡುವ ಸಂಬಂಧ ಚೆನ್ನೈನ ಸ್ಟ್ಯಾನ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಟ್ರಯಲ್ ಮುಕ್ತಾಯವಾಗಿದೆ.</p>.<p>ಕೋವಿಡ್ ನಿವಾರಣೆಯಲ್ಲಿ ಈ ಔಷಧಿ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ವರದಿ ಸಿದ್ಧವಾಗಿದೆ. ಆಯುಷ್ ಸಚಿವಾಲಯದ ಅನುಮತಿ ದೊರೆತ ತಕ್ಷಣವೇ ಈ ವರದಿಯನ್ನು ಬಹಿರಂಗಪಡಿಸಲಾಗುವುದು ಸೆಂಟ್ರಲ್ ಕೌನ್ಸಿಲ್ ಫಾರ್ ರಿಸರ್ಚ್ ಇನ್ ಸಿದ್ಧ (ಸಿಸಿಆರ್ಎಸ್) ಪ್ರಧಾನ ನಿರ್ದೇಶಕಿ ಡಾ.ಕೆ.ಕನಕವಲ್ಲಿ ತಿಳಿಸಿದ್ದಾರೆ.</p>.<p>ಸಿದ್ಧ ಪದ್ಧತಿಯ ಔಷಧಿ ನೀಡುವ ವೈದ್ಯರ ಸಹಯೋಗದಲ್ಲಿ ಈ ಪ್ರಾಜೆಕ್ಟ್ಅನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಟ್ಯಾನ್ಲೆ ಆಸ್ಪತ್ರೆಯ ಜೊತೆಗೆ ಇತರ 9 ಕಡೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಆರಂಭಗೊಂಡಿದ್ದು, ಅವು ಸಹ ಮುಕ್ತಾಯದ ಹಂತದಲ್ಲಿವೆ ಎಂದು ಮೂಲಗಳು ಹೇಳಿವೆ.</p>.<p>‘ಸಾರ್ಸ್–ಕೋವ್–2’ ವೈರಸ್ನಿಂದಾಗುವ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು, ಲಕ್ಷಣ ರಹಿತ ಕೋವಿಡ್–19 ತೀವ್ರಗೊಳ್ಳದಂತೆ ತಡೆಯಲು ಸಿದ್ಧ ಔಷಧಿಯನ್ನು ಈ ಟ್ರಯಲ್ನಲ್ಲಿ ಪ್ರಯೋಗಿಸಲಾಗಿದೆ.</p>.<p>ಕೋವಿಡ್ ಚಿಕಿತ್ಸೆಯಲ್ಲಿ ಅಲೋಪಥಿ ಪದ್ಧತಿಯಲ್ಲಿ ವಿಟಮಿನ್ ಸಿ ಹಾಗೂ ಸತು (ಝಿಂಕ್) ಇರುವ ಮಾತ್ರೆ ನೀಡಲಾಗುತ್ತದೆ. ಸಿದ್ಧ ಪದ್ಧತಿಯ ‘ಕಬಸುರ ಕುಡಿನೀರ್’ (ಕೆಎಸ್ಕೆ) ಎಂಬ ಔಷಧಿ ವಿಟಮಿನ್ ಸಿ ಮತ್ತು ಸತುವಿನಂತೆಯೇ ಕಾರ್ಯನಿರ್ವಹಿಸುತ್ತದೆ ಎಂಬುದು ಸಿದ್ಧ ಪದ್ಧತಿಯ ತಜ್ಞರ ಪ್ರತಿಪಾದನೆ. ಔಷಧಿಯ ಈ ಗುಣವನ್ನು ಸಹ ಟ್ರಯಲ್ ಸಂದರ್ಭದಲ್ಲಿ ಪರೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>