ಈ ವೇಳೆ 6–7 ಹಸುವಿನ ಕರುಗಳಿದ್ದ ಜೀಪನ್ನು ಫುಸಾ ಕಿ ಧಾನಿ ಬಳಿ ತಡೆದ ಗಂಪು, ಮುನ್ಫೆದ್ ಖಾನ್ ಎಂಬಾತನ ಹೊರಗೆಳೆದು ಥಳಿಸಿತು. ‘ಖಾನ್ ವಿರುದ್ಧ ಗೋವು ಕಳ್ಳಸಾಗಣೆ ಕುರಿತ ದೂರುಗಳಿವೆ. ಜೀಪಿನಲ್ಲಿದ್ದ 6–7 ಕರುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಪರಸ್ಪರರ ವಿರುದ್ಧ ದೂರು ದಾಖಲಾಗಿದೆ. ತನಿಖೆ ನಡೆದಿದೆ’ ಎಂದು ಭಿವಂಡಿ ಜಿಲ್ಲೆಯ ಎಸ್ಪಿ ಅಮನ್ದೀಪ್ ಸಿಂಗ್ ಕಪೂರ್ ತಿಳಿಸಿದರು.