ಸಿಪಿಐ(ಎಂ)ನ ಮಾಜಿ ಶಾಸಕ ನರಸಯ್ಯ ಎಡಂ ಉಚ್ಚಾಟನೆಗೊಂಡವರು. ತಾವು ಶಾಸಕರಾಗಿದ್ದ ಅವಧಿ ವೇಳೆ ನಿರ್ಮಿಸಲು ಉದ್ದೇಶಿಸಿದ್ದಸೋಲಾಪುರ್ ಜಿಲ್ಲೆಯ ವಸತಿ ಯೋಜನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಅತ್ಯಂತ ಕ್ಷಿಪ್ರಗತಿಯಲ್ಲಿ ಅನುಮೋದನೆ ನೀಡಿದ್ದರು. ಇದಕ್ಕಾಗಿ ಮೋದಿ, ಫಡಣವೀಸ್ ಅವರಿಗೆ ಧನ್ಯವಾದ ಸಲ್ಲಿಸಿದ್ದ ಅವರು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಾರೈಸಿದ್ದರು.