<p><strong>ನೊಯ್ಡಾ:</strong> ಉತ್ತರ ಪ್ರದೇಶದ ಜೇವರ್ ಪ್ರದೇಶದಲ್ಲಿ ಮಧ್ಯ ವಯಸ್ಸಿನ ದಲಿತ ಮಹಿಳೆಯ ಮೇಲೆ ಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.</p>.<p>ಸಂತ್ರಸ್ತ ಮಹಿಳೆ ಭಾನುವಾರ ಬೆಳಿಗ್ಗೆ ಜಾನುವಾರುಗಳಿಗೆ ಹುಲ್ಲು ತರುವುದಕ್ಕಾಗಿ ಗ್ರಾಮದಿಂದ ಹೊರಗೆ ಹೋಗಿದ್ದಾಗ, ಪ್ರಕರಣದ ಪ್ರಮುಖ ಆರೋಪಿಯು ಜಾನುವಾರುಗಳನ್ನು ಮೇಯಿಸಲು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದಾನೆ. ಆಗ ಈ ದೃಷ್ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ.</p>.<p><strong>ಓದಿ:</strong><a href="https://www.prajavani.net/india-news/being-a-politician-doesnt-mean-you-run-over-anyone-with-a-fortuner-bjp-leader-874618.html" itemprop="url">ರಾಜಕಾರಣಿ ಎಂದರೆ ಜನರ ಮೇಲೆ ಫಾರ್ಚುನರ್ ಹರಿಸುವುದಲ್ಲ: ಉ. ಪ್ರ ಬಿಜೆಪಿ ಅಧ್ಯಕ್ಷ</a></p>.<p>ಡಿಸಿಪಿ (ಮಹಿಳಾ ಮತ್ತು ಮಕ್ಕಳ ಸುರಕ್ಷತೆ ವಿಭಾಗ) ವೃಂದಾ ಶುಕ್ಲಾ, ‘ಭಾನುವಾರ ಬೆಳಿಗ್ಗೆ 9.30 ಯಿಂದ 10.30 ಗಂಟೆಯೊಳಗೆ ಗ್ರಾಮದ ಸಮೀಪದ ಬಯಲು ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆದಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಹಳ್ಳಿಯವರಾಗಿದ್ದು, ಪರಸ್ಪರ ಪರಿಚಿತರು. ಜಾನುವಾರುಗಳಿಗೆ ಮೇವು ತರಲು ಮತ್ತು ಅವುಗಳನ್ನು ಮೇಯಿಸಲು ಇಬ್ಬರೂ ಪ್ರತಿ ನಿತ್ಯ ಈ ಜಾಗಕ್ಕೆ ಬರುತ್ತಿದ್ದರು‘ ಎಂದು ಹೇಳಿದ್ದಾರೆ.</p>.<p>ಪ್ರಮುಖ ಆರೋಪಿ ಮಾದಕ ವ್ಯಸನಿಯಾಗಿದ್ದು, ಮಹಿಳೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.</p>.<p>‘ಈ ಪ್ರಕರಣದಲ್ಲಿ ಇತರ ಜನರ ಪಾತ್ರವಿರುವ ಕುರಿತು ತನಿಖೆಯ ನಂತರ ಖಚಿತಪಡಿಸಲಾಗುವುದು. ಪ್ರಮುಖ ಆರೋಪಿಯು ಪರಾರಿಯಾಗಿದ್ದಾನೆ. ಅವನನ್ನು ಬಂಧಿಸಿದ ನಂತರ ಇತರೆ ವಿಚಾರಗಳನ್ನು ಖಚಿತಪಡಿಸಬಹುದು‘ ಎಂದು ಸಿಪಿ ಶುಕ್ಲಾ ಹೇಳಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಡಿಸಿಪಿ ಶುಕ್ಲಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೊಯ್ಡಾ:</strong> ಉತ್ತರ ಪ್ರದೇಶದ ಜೇವರ್ ಪ್ರದೇಶದಲ್ಲಿ ಮಧ್ಯ ವಯಸ್ಸಿನ ದಲಿತ ಮಹಿಳೆಯ ಮೇಲೆ ಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.</p>.<p>ಸಂತ್ರಸ್ತ ಮಹಿಳೆ ಭಾನುವಾರ ಬೆಳಿಗ್ಗೆ ಜಾನುವಾರುಗಳಿಗೆ ಹುಲ್ಲು ತರುವುದಕ್ಕಾಗಿ ಗ್ರಾಮದಿಂದ ಹೊರಗೆ ಹೋಗಿದ್ದಾಗ, ಪ್ರಕರಣದ ಪ್ರಮುಖ ಆರೋಪಿಯು ಜಾನುವಾರುಗಳನ್ನು ಮೇಯಿಸಲು ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದಾನೆ. ಆಗ ಈ ದೃಷ್ಕೃತ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದ್ದು, ಈವರೆಗೂ ಯಾರನ್ನೂ ಬಂಧಿಸಿಲ್ಲ.</p>.<p><strong>ಓದಿ:</strong><a href="https://www.prajavani.net/india-news/being-a-politician-doesnt-mean-you-run-over-anyone-with-a-fortuner-bjp-leader-874618.html" itemprop="url">ರಾಜಕಾರಣಿ ಎಂದರೆ ಜನರ ಮೇಲೆ ಫಾರ್ಚುನರ್ ಹರಿಸುವುದಲ್ಲ: ಉ. ಪ್ರ ಬಿಜೆಪಿ ಅಧ್ಯಕ್ಷ</a></p>.<p>ಡಿಸಿಪಿ (ಮಹಿಳಾ ಮತ್ತು ಮಕ್ಕಳ ಸುರಕ್ಷತೆ ವಿಭಾಗ) ವೃಂದಾ ಶುಕ್ಲಾ, ‘ಭಾನುವಾರ ಬೆಳಿಗ್ಗೆ 9.30 ಯಿಂದ 10.30 ಗಂಟೆಯೊಳಗೆ ಗ್ರಾಮದ ಸಮೀಪದ ಬಯಲು ಪ್ರದೇಶದಲ್ಲಿ ಈ ದುಷ್ಕೃತ್ಯ ನಡೆದಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಒಂದೇ ಹಳ್ಳಿಯವರಾಗಿದ್ದು, ಪರಸ್ಪರ ಪರಿಚಿತರು. ಜಾನುವಾರುಗಳಿಗೆ ಮೇವು ತರಲು ಮತ್ತು ಅವುಗಳನ್ನು ಮೇಯಿಸಲು ಇಬ್ಬರೂ ಪ್ರತಿ ನಿತ್ಯ ಈ ಜಾಗಕ್ಕೆ ಬರುತ್ತಿದ್ದರು‘ ಎಂದು ಹೇಳಿದ್ದಾರೆ.</p>.<p>ಪ್ರಮುಖ ಆರೋಪಿ ಮಾದಕ ವ್ಯಸನಿಯಾಗಿದ್ದು, ಮಹಿಳೆಯನ್ನು ಹೊಲಕ್ಕೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.</p>.<p>‘ಈ ಪ್ರಕರಣದಲ್ಲಿ ಇತರ ಜನರ ಪಾತ್ರವಿರುವ ಕುರಿತು ತನಿಖೆಯ ನಂತರ ಖಚಿತಪಡಿಸಲಾಗುವುದು. ಪ್ರಮುಖ ಆರೋಪಿಯು ಪರಾರಿಯಾಗಿದ್ದಾನೆ. ಅವನನ್ನು ಬಂಧಿಸಿದ ನಂತರ ಇತರೆ ವಿಚಾರಗಳನ್ನು ಖಚಿತಪಡಿಸಬಹುದು‘ ಎಂದು ಸಿಪಿ ಶುಕ್ಲಾ ಹೇಳಿದ್ದಾರೆ. ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಡಿಸಿಪಿ ಶುಕ್ಲಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>