ಸಮೀಕ್ಷೆಯಲ್ಲಿ ಆಶಿಶ್ ಗೋಯಲ್, ಗೋಪಾಲ್ ಶರ್ಮಾ ಮತ್ತು ಅಬ್ದುಲ್ ಸಮದ್ ಅವರು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳನ್ನು ಪ್ರತಿನಿಧಿಸುತ್ತಿದ್ದಾರೆ. ಈ ಮಸೀದಿಯ ಸಂಕೀರ್ಣದಲ್ಲಿ ಹಿಂದೆ ವಾಗ್ದೇವಿ ದೇವಿಯ ದೇವಸ್ಥಾನವಿತ್ತು ಎಂದು ಹಿಂದೂಗಳು ನಂಬಿದ್ದಾರೆ. ಇದು ಕಮಲ ಮೌಲಾ ಮಸೀದಿಯಾಗಿದೆ ಎನ್ನುವುದು ಮುಸ್ಲಿಂ ಸಮುದಾಯದವರ ನಂಬಿಕೆ. ಹೀಗಾಗಿ ವಿವಾದಿತ ಸ್ಥಳದಲ್ಲಿ ಆರು ವಾರಗಳೊಳಗಾಗಿ ವೈಜ್ಞಾನಿಕ ಸಮೀಕ್ಷೆ ನಡೆಸಿ, ವರದಿ ನೀಡುವಂತೆ ಎಎಸ್ಐಗೆ ಹೈಕೋರ್ಟ್ ಆದೇಶಿಸಿದೆ.