<p><strong>ನವದೆಹಲಿ</strong>: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಕುರಿತು ಕಾಂಗ್ರೆಸ್ಪ್ರತಿಕ್ರಿಯೆ ನೀಡಿದೆ.</p>.<p>ಈ ಕುರಿತು ನವದೆಹಲಿಯಲ್ಲಿ ಸೋಮವಾರ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾಅವರು, ‘ದೆಹಲಿ ನಾಯಕತ್ವದ ನಿರಂಕುಶಾಧಿಕಾರಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ತಲೆದಂಡವಾಗಿದೆ. ಇದು ಪ್ರಧಾನಿ ಮೋದಿ ಅವರು ಬಲವಂತವಾಗಿ ಬಿಜೆಪಿ ಹಿರಿಯ ನಾಯಕರಿಗೆ ನಿವೃತ್ತಿ ನೀಡುತ್ತಿರುವುದಕ್ಕೆ ಹೊಸ ಸೇರ್ಪಡೆ‘ ಎಂದಿದ್ದಾರೆ.</p>.<p>‘ಅಲ್ಲದೇ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಎಂಬುದನ್ನು ಅಲ್ಲಿನ ಬಿಜೆಪಿ ಶಾಸಕಾಂಗ ಪಕ್ಷ ನಿರ್ಧರಿಸುವುದಿಲ್ಲ. ಬದಲಿಗೆ ದೆಹಲಿ ನಿರಂಕುಶಾಧಿಕಾರಿಗಳೇ ನಿರ್ಧರಿಸುತ್ತಾರೆ‘ ಎಂದು ಲೇವಡಿ ಮಾಡಿದ್ಧಾರೆ.</p>.<p>‘ಯಾವಾಗ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಂದಿನಿಂದಲೂ ಅದು ಅತ್ಯಂತ ಭ್ರಷ್ಟ ಸರ್ಕಾರವಾಗಿದೆ‘ ಎಂದು ಸುರ್ಜೆವಾಲಾಟೀಕಿಸಿದ್ದಾರೆ.</p>.<p>‘ಮೋದಿ ಅವರು ಪಕ್ಷಕ್ಕಾಗಿ ದುಡಿದ ತಮ್ಮ ಹಿರಿಯ ನಾಯಕರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನ. ಯಡಿಯೂರಪ್ಪ ಅವರು ಮೋದಿ ರಚಿಸಿದ ರಿಟೈರಮೆಂಟ್ ಕ್ಲಬ್ಗೆ ಸೇರಿದಂತಾಗಿದೆ‘ ಎಂದರು.</p>.<p><strong>ಇದನ್ನೂ ಓದಿ:<a href="https://www.prajavani.net/karnataka-news/yediyurappa-karnataka-government-politics-bjp-congress-satish-jarkiholi-851854.html" target="_blank">ಆಗ ಬಸವಣ್ಣ, ಈಗ ಬಿಎಸ್ವೈ ವಿರುದ್ಧ ಮನುವಾದಿಗಳು ಜಯ ಸಾಧಿಸಿದ್ದಾರೆ: ಜಾರಕಿಹೊಳಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಕುರಿತು ಕಾಂಗ್ರೆಸ್ಪ್ರತಿಕ್ರಿಯೆ ನೀಡಿದೆ.</p>.<p>ಈ ಕುರಿತು ನವದೆಹಲಿಯಲ್ಲಿ ಸೋಮವಾರ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾಅವರು, ‘ದೆಹಲಿ ನಾಯಕತ್ವದ ನಿರಂಕುಶಾಧಿಕಾರಕ್ಕೆ ಕರ್ನಾಟಕದಲ್ಲಿ ಯಡಿಯೂರಪ್ಪನವರ ತಲೆದಂಡವಾಗಿದೆ. ಇದು ಪ್ರಧಾನಿ ಮೋದಿ ಅವರು ಬಲವಂತವಾಗಿ ಬಿಜೆಪಿ ಹಿರಿಯ ನಾಯಕರಿಗೆ ನಿವೃತ್ತಿ ನೀಡುತ್ತಿರುವುದಕ್ಕೆ ಹೊಸ ಸೇರ್ಪಡೆ‘ ಎಂದಿದ್ದಾರೆ.</p>.<p>‘ಅಲ್ಲದೇ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಎಂಬುದನ್ನು ಅಲ್ಲಿನ ಬಿಜೆಪಿ ಶಾಸಕಾಂಗ ಪಕ್ಷ ನಿರ್ಧರಿಸುವುದಿಲ್ಲ. ಬದಲಿಗೆ ದೆಹಲಿ ನಿರಂಕುಶಾಧಿಕಾರಿಗಳೇ ನಿರ್ಧರಿಸುತ್ತಾರೆ‘ ಎಂದು ಲೇವಡಿ ಮಾಡಿದ್ಧಾರೆ.</p>.<p>‘ಯಾವಾಗ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆಯೋ ಅಂದಿನಿಂದಲೂ ಅದು ಅತ್ಯಂತ ಭ್ರಷ್ಟ ಸರ್ಕಾರವಾಗಿದೆ‘ ಎಂದು ಸುರ್ಜೆವಾಲಾಟೀಕಿಸಿದ್ದಾರೆ.</p>.<p>‘ಮೋದಿ ಅವರು ಪಕ್ಷಕ್ಕಾಗಿ ದುಡಿದ ತಮ್ಮ ಹಿರಿಯ ನಾಯಕರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಇದು ಮತ್ತೊಂದು ನಿದರ್ಶನ. ಯಡಿಯೂರಪ್ಪ ಅವರು ಮೋದಿ ರಚಿಸಿದ ರಿಟೈರಮೆಂಟ್ ಕ್ಲಬ್ಗೆ ಸೇರಿದಂತಾಗಿದೆ‘ ಎಂದರು.</p>.<p><strong>ಇದನ್ನೂ ಓದಿ:<a href="https://www.prajavani.net/karnataka-news/yediyurappa-karnataka-government-politics-bjp-congress-satish-jarkiholi-851854.html" target="_blank">ಆಗ ಬಸವಣ್ಣ, ಈಗ ಬಿಎಸ್ವೈ ವಿರುದ್ಧ ಮನುವಾದಿಗಳು ಜಯ ಸಾಧಿಸಿದ್ದಾರೆ: ಜಾರಕಿಹೊಳಿ</a></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>