<p>ನವದೆಹಲಿ: ತಿಹಾರ್ ಜೈಲಿನಲ್ಲಿ ಸಚಿವ ಸತ್ಯೇಂದ್ರ ಜೈನ್ ಊಟದ ವಿಡಿಯೊಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ಜೈಲಿನ ಕೈಪಿಡಿ ಓದಿಕೊಳ್ಳಿ. ಮುಂದೆ ಯಾರಿಗೆ ಜೈಲಿನ ಆತಿಥ್ಯ ಸಿಗಲಿದೆ ಎಂಬುದು ನಿಮಗೂ ತಿಳಿದಿಲ್ಲ ಎಂದು ಆಪ್ ನಾಯಕ ಮನೀಶ್ ಸಿಸೋಡಿಯಾಗೆ ಲೇವಡಿ ಮಾಡಿದೆ.</p>.<p><br />ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್ ಆಹಾರ ಸೇವನೆಯ ಮತ್ತೊಂದು ವಿಡಿಯೊವನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಅದರಲ್ಲಿ ಜೈನ್ ಜೈಲಿನೊಳಗೆ ಸಲಾಡ್, ಹಣ್ಣು ಹಾಗೂ ಭೂರಿ ಭೋಜನೆ ಆಹಾರ ಸೇವಿಸುತ್ತಿದ್ದಾರೆ. ಆಪ್ ಈ ವಿಡಿಯೊಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿಲ್ಲ.</p>.<p><br />ಜೈಲಿನಲ್ಲಿ ಸರಿಯಾದ ಊಟ ಸಿಗದೆ 28 ಕೆಜಿ ತೂಕ ಇಳಿದಿದೆ ಎಂದು ಜೈನ್ ದೂರು ನೀಡಿದ ಬೆನ್ನಲ್ಲೇ ಬಿಜೆಪಿ ಈ ವಿಡಿಯೊ ಹರಿಬಿಟ್ಟಿದೆ.</p>.<p><br /><strong>ಸರಿಯಾದ ಆಹಾರ ಪೂರೈಕೆಗೆ ಸೂಚನೆ:</strong><br />ಜೈಲಿನಲ್ಲಿರುವ ಆಪ್ ಸಚಿವ ಸತ್ಯೇಂದ್ರ ಕುಮಾರ್ ಜೈನ್ ಅವರ ಧಾರ್ಮಿಕ ಉಪವಾಸದ ಸಂದರ್ಭದಲ್ಲಿ ಸಂಬಂಧಿತ ನಿಯಮಗಳಿಗೆ ಅನುಗುಣವಾಗಿ ಆಹಾರವನ್ನು ನೀಡುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ಬುಧವಾರ ಸೂಚಿಸಿದೆ.</p>.<p><br />ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್, ಜೈನ್ಗೆ ಕಳೆದ ಆರು ತಿಂಗಳಲ್ಲಿ ನೀಡಿದ ಆಹಾರದ ವಿವರಗಳೊಂದಿಗೆ ತನ್ನ ಉತ್ತರವನ್ನು ಗುರುವಾರದೊಳಗೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. </p>.<p><br />ಜೈನ್ ಅವರ ಧಾರ್ಮಿಕ ಉಪವಾಸದ ಸಮಯದಲ್ಲಿ "ಕಾನೂನು ಪ್ರಕಾರ" ಅನುಮತಿಸಲಾದ ಆಹಾರವನ್ನು ನೀಡುವುದನ್ನು ಜೈಲು ಆಡಳಿತವು ನಿಲ್ಲಿಸಿದೆ ಎಂದು ಆರೋಪಿಸಿ ಜೈನ್ ಮನವಿ ಸಲ್ಲಿಸಿದ್ದರು.</p>.<p><br />ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ರಾ, ರಾಜಕಾರಣಿಗಳಿಗೆಸಿಗುತ್ತಿದ್ದ ಹಣ್ಣು, ತರಕಾರಿ, ಡ್ರೈಫ್ರೂಟ್ಸ್ ಜೈಲು ಅಧಿಕಾರಿಗಳು ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಉಪವಾಸದ ಸಮಯದಲ್ಲಿ ಜೈನ್ ಈ ವಿಶೇಷ ಆಹಾರಕ್ರಮಕ್ಕೆ ಅರ್ಹರು ಎಂದು ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ತಿಹಾರ್ ಜೈಲಿನಲ್ಲಿ ಸಚಿವ ಸತ್ಯೇಂದ್ರ ಜೈನ್ ಊಟದ ವಿಡಿಯೊಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ, ಜೈಲಿನ ಕೈಪಿಡಿ ಓದಿಕೊಳ್ಳಿ. ಮುಂದೆ ಯಾರಿಗೆ ಜೈಲಿನ ಆತಿಥ್ಯ ಸಿಗಲಿದೆ ಎಂಬುದು ನಿಮಗೂ ತಿಳಿದಿಲ್ಲ ಎಂದು ಆಪ್ ನಾಯಕ ಮನೀಶ್ ಸಿಸೋಡಿಯಾಗೆ ಲೇವಡಿ ಮಾಡಿದೆ.</p>.<p><br />ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸತ್ಯೇಂದ್ರ ಜೈನ್ ಆಹಾರ ಸೇವನೆಯ ಮತ್ತೊಂದು ವಿಡಿಯೊವನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಅದರಲ್ಲಿ ಜೈನ್ ಜೈಲಿನೊಳಗೆ ಸಲಾಡ್, ಹಣ್ಣು ಹಾಗೂ ಭೂರಿ ಭೋಜನೆ ಆಹಾರ ಸೇವಿಸುತ್ತಿದ್ದಾರೆ. ಆಪ್ ಈ ವಿಡಿಯೊಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿಲ್ಲ.</p>.<p><br />ಜೈಲಿನಲ್ಲಿ ಸರಿಯಾದ ಊಟ ಸಿಗದೆ 28 ಕೆಜಿ ತೂಕ ಇಳಿದಿದೆ ಎಂದು ಜೈನ್ ದೂರು ನೀಡಿದ ಬೆನ್ನಲ್ಲೇ ಬಿಜೆಪಿ ಈ ವಿಡಿಯೊ ಹರಿಬಿಟ್ಟಿದೆ.</p>.<p><br /><strong>ಸರಿಯಾದ ಆಹಾರ ಪೂರೈಕೆಗೆ ಸೂಚನೆ:</strong><br />ಜೈಲಿನಲ್ಲಿರುವ ಆಪ್ ಸಚಿವ ಸತ್ಯೇಂದ್ರ ಕುಮಾರ್ ಜೈನ್ ಅವರ ಧಾರ್ಮಿಕ ಉಪವಾಸದ ಸಂದರ್ಭದಲ್ಲಿ ಸಂಬಂಧಿತ ನಿಯಮಗಳಿಗೆ ಅನುಗುಣವಾಗಿ ಆಹಾರವನ್ನು ನೀಡುವಂತೆ ದೆಹಲಿ ನ್ಯಾಯಾಲಯವು ತಿಹಾರ್ ಜೈಲು ಅಧಿಕಾರಿಗಳಿಗೆ ಬುಧವಾರ ಸೂಚಿಸಿದೆ.</p>.<p><br />ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ್, ಜೈನ್ಗೆ ಕಳೆದ ಆರು ತಿಂಗಳಲ್ಲಿ ನೀಡಿದ ಆಹಾರದ ವಿವರಗಳೊಂದಿಗೆ ತನ್ನ ಉತ್ತರವನ್ನು ಗುರುವಾರದೊಳಗೆ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. </p>.<p><br />ಜೈನ್ ಅವರ ಧಾರ್ಮಿಕ ಉಪವಾಸದ ಸಮಯದಲ್ಲಿ "ಕಾನೂನು ಪ್ರಕಾರ" ಅನುಮತಿಸಲಾದ ಆಹಾರವನ್ನು ನೀಡುವುದನ್ನು ಜೈಲು ಆಡಳಿತವು ನಿಲ್ಲಿಸಿದೆ ಎಂದು ಆರೋಪಿಸಿ ಜೈನ್ ಮನವಿ ಸಲ್ಲಿಸಿದ್ದರು.</p>.<p><br />ಜೈನ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಹುಲ್ ಮೆಹ್ರಾ, ರಾಜಕಾರಣಿಗಳಿಗೆಸಿಗುತ್ತಿದ್ದ ಹಣ್ಣು, ತರಕಾರಿ, ಡ್ರೈಫ್ರೂಟ್ಸ್ ಜೈಲು ಅಧಿಕಾರಿಗಳು ನೀಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಉಪವಾಸದ ಸಮಯದಲ್ಲಿ ಜೈನ್ ಈ ವಿಶೇಷ ಆಹಾರಕ್ರಮಕ್ಕೆ ಅರ್ಹರು ಎಂದು ವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>