<p><strong>ನವದೆಹಲಿ</strong>: ಹೆಸರಾಂತ ಬ್ರಾಂಡ್ಗಳ ಹೆಸರಿನಲ್ಲಿ ದ್ವಾರಕಾದಲ್ಲಿ ನಕಲಿ ತುಪ್ಪ ತಯಾರಿಸಿ, ಮಾರಾಟ ಮಾಡುತ್ತಿದ್ದ ಕಾರ್ಖಾನೆ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.</p><p>ನಗರದ ದಿಚೌನ್ ಕಲಾನ್ನಲ್ಲಿರುವ ಕಾರ್ಖಾನೆ ಮೇಲೆ ದ್ವಾರಕಾ ಜಿಲ್ಲಾ ಪೊಲೀಸ್ ತನಿಖಾ ತಂಡ ಹಾಗೂ ಜಾಗೃತ ದಳಗಳು ಜಂಟಿಯಾಗಿ ನವೆಂಬರ್ 19ರಂದು ದಾಳಿ ನಡೆಸಿದ್ದವು ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ದ್ವಾರಕಾ) ಎಂ. ಹರ್ಷವರ್ಧನ್ ಹೇಳಿದ್ದಾರೆ.</p><p>'ನಕಲಿ ತುಪ್ಪ ತಯಾರಿಕೆಗೆ ಬಳಸುವ ವಿವಿಧ ಉತ್ಪನ್ನಗಳು ದಾಳಿ ವೇಳೆ ಸಿಕ್ಕಿವೆ. ಆ ಸಂದರ್ಭದಲ್ಲಿ ಇಬ್ಬರು ಸ್ಥಳದಲ್ಲಿದ್ದರು. ಕಾರ್ಖಾನೆ ನಡೆಸಲು ಬೇಕಾದ ಸೂಕ್ತ ದಾಖಲೆಗಳನ್ನು ಅವರು ನೀಡಲಿಲ್ಲ. ಕಾರ್ಖಾನೆಗೆ ಬೀಗ ಜಡಿಯಲಾಗಿದೆ' ಎಂದಿದ್ದಾರೆ.</p><p>'ಸುಮಿತ್ ಎಂಬಾತ ಕಾರ್ಖಾನೆ ಮಾಲೀಕ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಆತನ ವಿರುದ್ಧ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ' ಎಂದೂ ಹೇಳಿದ್ದಾರೆ.</p><p>ಪತಂಜಲಿ, ಮದರ್ ಡೈರಿ, ಅಮುಲ್ ಮತ್ತು ನಕ್ಷಾ ಡೈರಿ ಹೆಸರಿನ ಸಾವಿರಾರು ಸ್ಟಿಕ್ಕರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</p><p>'ವಿವಿಧ ಬ್ರಾಂಡ್ಗಳ 4,900 ಸ್ಟಿಕ್ಕರ್ಗಳು, ಗ್ಯಾಸ್ ಬರ್ನರ್ಗಳು, ವನಸ್ಪತಿ, ಕಂಟೈನರ್ ಹಾಗೂ ನಕಲಿ ತುಪ್ಪ ತಯಾರಿಗೆ ಬಳಸುವ ಇನ್ನಷ್ಟು ಪದಾರ್ಥಗಳನ್ನು ವಶಕ್ಕೆ ಪಡೆದಿದ್ದೇವೆ' ಎಂದು ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹೆಸರಾಂತ ಬ್ರಾಂಡ್ಗಳ ಹೆಸರಿನಲ್ಲಿ ದ್ವಾರಕಾದಲ್ಲಿ ನಕಲಿ ತುಪ್ಪ ತಯಾರಿಸಿ, ಮಾರಾಟ ಮಾಡುತ್ತಿದ್ದ ಕಾರ್ಖಾನೆ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.</p><p>ನಗರದ ದಿಚೌನ್ ಕಲಾನ್ನಲ್ಲಿರುವ ಕಾರ್ಖಾನೆ ಮೇಲೆ ದ್ವಾರಕಾ ಜಿಲ್ಲಾ ಪೊಲೀಸ್ ತನಿಖಾ ತಂಡ ಹಾಗೂ ಜಾಗೃತ ದಳಗಳು ಜಂಟಿಯಾಗಿ ನವೆಂಬರ್ 19ರಂದು ದಾಳಿ ನಡೆಸಿದ್ದವು ಎಂದು ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ದ್ವಾರಕಾ) ಎಂ. ಹರ್ಷವರ್ಧನ್ ಹೇಳಿದ್ದಾರೆ.</p><p>'ನಕಲಿ ತುಪ್ಪ ತಯಾರಿಕೆಗೆ ಬಳಸುವ ವಿವಿಧ ಉತ್ಪನ್ನಗಳು ದಾಳಿ ವೇಳೆ ಸಿಕ್ಕಿವೆ. ಆ ಸಂದರ್ಭದಲ್ಲಿ ಇಬ್ಬರು ಸ್ಥಳದಲ್ಲಿದ್ದರು. ಕಾರ್ಖಾನೆ ನಡೆಸಲು ಬೇಕಾದ ಸೂಕ್ತ ದಾಖಲೆಗಳನ್ನು ಅವರು ನೀಡಲಿಲ್ಲ. ಕಾರ್ಖಾನೆಗೆ ಬೀಗ ಜಡಿಯಲಾಗಿದೆ' ಎಂದಿದ್ದಾರೆ.</p><p>'ಸುಮಿತ್ ಎಂಬಾತ ಕಾರ್ಖಾನೆ ಮಾಲೀಕ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಆತನ ವಿರುದ್ಧ ಹಕ್ಕುಸ್ವಾಮ್ಯ ಕಾಯ್ದೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದೇವೆ' ಎಂದೂ ಹೇಳಿದ್ದಾರೆ.</p><p>ಪತಂಜಲಿ, ಮದರ್ ಡೈರಿ, ಅಮುಲ್ ಮತ್ತು ನಕ್ಷಾ ಡೈರಿ ಹೆಸರಿನ ಸಾವಿರಾರು ಸ್ಟಿಕ್ಕರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</p><p>'ವಿವಿಧ ಬ್ರಾಂಡ್ಗಳ 4,900 ಸ್ಟಿಕ್ಕರ್ಗಳು, ಗ್ಯಾಸ್ ಬರ್ನರ್ಗಳು, ವನಸ್ಪತಿ, ಕಂಟೈನರ್ ಹಾಗೂ ನಕಲಿ ತುಪ್ಪ ತಯಾರಿಗೆ ಬಳಸುವ ಇನ್ನಷ್ಟು ಪದಾರ್ಥಗಳನ್ನು ವಶಕ್ಕೆ ಪಡೆದಿದ್ದೇವೆ' ಎಂದು ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>