ಬೇಹುಗಾರಿಕೆ ನಡೆಸುತ್ತಿದ್ದ ವೇಳೆ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು ದೆಹಲಿ ಪೊಲೀಸರ ವಿಶೇಷ ತಂಡ ಮತ್ತು ಇತರ ಸಂಸ್ಥೆಗಳು ಇವರನ್ನು ವಿಚಾರಣೆಗೊಳಪಡಿಸಿವೆ. ಗುಪ್ತಚರ ಇಲಾಖೆಯ ಮಾಹಿತಿ ಲಭಿಸಿದ್ದರಿಂದಇವರ ಮೇಲೆ ಕಣ್ಣಿಡಲಾಗಿತ್ತು. ಅಬೀದ್ ಹುಸೇನ್ ಮತ್ತು ತಾಹೀರ್ ಖಾನ್ನ್ನು ಭಾನುವಾರ ಬೆಳಗ್ಗೆ ಕರೋಲ್ಭಾಗ್ನಲ್ಲಿ ವಶಕ್ಕೆ ಪಡೆದುಕೊಂಡಿದ್ದು,ಅಲ್ಲಿ ಅವರು ಭಾರತೀಯ ಭದ್ರತಾ ವ್ಯವಸ್ಥೆಯ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ವ್ಯಕ್ತಿಯನ್ನು ಭೇಟಿಯಾಗುತ್ತಿದ್ದರು. ಆ ವ್ಯಕ್ತಿಗೆ ₹15 ಸಾವಿರನಗದು ಮತ್ತು ಐಫೋನ್ ನೀಡುತ್ತಿದ್ದ ವೇಳೆ ಇವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ಜಾವೇದ್ ಹುಸೇನ್ ಎಂಬ ವ್ಯಕ್ತಿ ಕೂಡಾ ಸ್ಥಳದಲ್ಲಿದ್ದು, ಪಾಕಿಸ್ತಾನದ ಮೂಲದ ಆತನನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವೆ.