‘ಘಟನೆಯ ಬಗ್ಗೆ ತಿಳಿದ ತಕ್ಷಣ, ಸ್ಥಳಕ್ಕೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇಡೀ ರಾತ್ರಿ ಅವರು ಸ್ಥಳದಲ್ಲೇ ಇದ್ದರು. ಪರಿಸ್ಥಿತಿ ಸುಧಾರಿಸಿದೆ. ಮುಂದಿನ 5 ಗಂಟೆಗಳಲ್ಲಿ ಹೊಗೆ ನಿಯಂತ್ರಣವಾಗಲಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತೇವೆ. ಬಿಜೆಪಿ ಕೇವಲ ಆರೋಪ ಮಾಡುತ್ತಿದೆ. ರಾಜಕೀಯ ಮಾಡುವ ಸಮಯ ಇದಲ್ಲ’ ಎಂದು ದೆಹಲಿ ಮೇಯರ್ ಶೆಲ್ಲಿ ಓಬೆರಾಯ್ ತಿಳಿಸಿದರು.