<p>ಎಐ ಶೃಂಗದ ಭಾಗವಾಗಲು ಪ್ರಪಂಚದ ವಿವಿಧ ಮೂಲೆಗಳ ತಂತ್ರಜ್ಞಾನ ಪರಿಣಿತರು, ವಿಶ್ವ ನಾಯಕರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ದಾರೆ. </p><p>ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯ ಸೇರಿದಂತೆ ಹಲವು ವಿಚಾರಗಳು ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಜಗತ್ತಿನ ಅತಿದೊಡ್ಡ ಟೆಕ್ ಶೃಂಗಕ್ಕೆ ಬಂದವರಿಗೆ ಬಿಸಿ ಮುಟ್ಟಿಸಿದ್ದು ದೆಹಲಿ ನಗರದ ವಾಹನ ದಟ್ಟಣೆ.</p><p>ಬುಧವಾರ ಸಂಜೆ ಅಂದಿನ ಕಾರ್ಯಕ್ರಮ ಮುಗಿಸಿ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ವಿದೇಶಿ ಪ್ರತಿನಿಧಿಗಳು, ಶೃಂಗಕ್ಕೆ ಬಂದಿದ್ದ ಜನರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದಾರೆ.</p><p>ಭಾರತ್ ಮಂಟಪದ ಹೊರಗಿನ ರಸ್ತೆಗಳಲ್ಲಿ ವಿವಿಐಪಿಗಳ ಸಂಚಾರಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಜತೆಗೆ ಹತ್ತಿರದ ಮೆಟ್ರೊ ನಿಲ್ದಾಣಕ್ಕೆ ಪ್ರವೇಶವನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ತಮ್ಮ ಕ್ಯಾಬ್ಗಳನ್ನು ಹುಡುಕಲು ಕಿಲೋಮೀಟರ್ಗಳಷ್ಟು ದೂರ ನಡೆದುಕೊಂಡು ಹೋಗಬೇಕಾಯಿತು’ ಎಂದು ಪಾಲ್ಗೊಂಡವರು ಅಳಲು ತೋಡಿಕೊಂಡರು.</p><p>ಈ ಕುರಿತು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ‘ಜಾಗತಿಕವಾಗಿ ಏನನ್ನು ತೋರಿಸಲು ಬಯಸಿದ್ದೀರಿ, ಎಐ ಶೃಂಗ ನಡೆಯುವಲ್ಲಿ ಕನಿಷ್ಠ ಪಕ್ಷ ವಾಹನ ದಟ್ಟಣೆಯನ್ನಾದರೂ ನಿರ್ವಹಣೆ ಮಾಡಬೇಕಿತ್ತು’ ಎಂದು ಕೇಂದ್ರ ಸರ್ಕಾರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.</p><p>ಇನ್ನೊಬ್ಬರು, ‘ಕ್ಯಾಬ್ ಹುಡುಕಲು ಸುಮಾರು 5 ಕಿ.ಮೀ ನಡೆಯಬೇಕಾಯಿತು. ಸರ್ಕಾರ ಎಲ್ಲಾ ರಸ್ತೆ, ಗೇಟ್ಗಳನ್ನು ಬಂದ್ ಮಾಡಿದೆ, ಕೇಳಿದರೆ ವಿಐಪಿ ಬರುತ್ತಿದ್ದಾರೆ ಎನ್ನುತ್ತಾರೆ. ಭಾರತದ ಎಐ ಶೃಂಗ ನಿರ್ವಹಣೆ ಮಾಡುತ್ತಿರುವವರು ವಿಫಲರಾಗಿದ್ದಾರೆ’ ಎಂದು ಅಸಮಧಾನ ಹೊರಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಐ ಶೃಂಗದ ಭಾಗವಾಗಲು ಪ್ರಪಂಚದ ವಿವಿಧ ಮೂಲೆಗಳ ತಂತ್ರಜ್ಞಾನ ಪರಿಣಿತರು, ವಿಶ್ವ ನಾಯಕರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ದಾರೆ. </p><p>ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯ ಸೇರಿದಂತೆ ಹಲವು ವಿಚಾರಗಳು ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಜಗತ್ತಿನ ಅತಿದೊಡ್ಡ ಟೆಕ್ ಶೃಂಗಕ್ಕೆ ಬಂದವರಿಗೆ ಬಿಸಿ ಮುಟ್ಟಿಸಿದ್ದು ದೆಹಲಿ ನಗರದ ವಾಹನ ದಟ್ಟಣೆ.</p><p>ಬುಧವಾರ ಸಂಜೆ ಅಂದಿನ ಕಾರ್ಯಕ್ರಮ ಮುಗಿಸಿ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ವಿದೇಶಿ ಪ್ರತಿನಿಧಿಗಳು, ಶೃಂಗಕ್ಕೆ ಬಂದಿದ್ದ ಜನರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದಾರೆ.</p><p>ಭಾರತ್ ಮಂಟಪದ ಹೊರಗಿನ ರಸ್ತೆಗಳಲ್ಲಿ ವಿವಿಐಪಿಗಳ ಸಂಚಾರಕ್ಕೆ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಜತೆಗೆ ಹತ್ತಿರದ ಮೆಟ್ರೊ ನಿಲ್ದಾಣಕ್ಕೆ ಪ್ರವೇಶವನ್ನು ಬಂದ್ ಮಾಡಲಾಗಿತ್ತು. ಹೀಗಾಗಿ ತಮ್ಮ ಕ್ಯಾಬ್ಗಳನ್ನು ಹುಡುಕಲು ಕಿಲೋಮೀಟರ್ಗಳಷ್ಟು ದೂರ ನಡೆದುಕೊಂಡು ಹೋಗಬೇಕಾಯಿತು’ ಎಂದು ಪಾಲ್ಗೊಂಡವರು ಅಳಲು ತೋಡಿಕೊಂಡರು.</p><p>ಈ ಕುರಿತು ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ‘ಜಾಗತಿಕವಾಗಿ ಏನನ್ನು ತೋರಿಸಲು ಬಯಸಿದ್ದೀರಿ, ಎಐ ಶೃಂಗ ನಡೆಯುವಲ್ಲಿ ಕನಿಷ್ಠ ಪಕ್ಷ ವಾಹನ ದಟ್ಟಣೆಯನ್ನಾದರೂ ನಿರ್ವಹಣೆ ಮಾಡಬೇಕಿತ್ತು’ ಎಂದು ಕೇಂದ್ರ ಸರ್ಕಾರದ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.</p><p>ಇನ್ನೊಬ್ಬರು, ‘ಕ್ಯಾಬ್ ಹುಡುಕಲು ಸುಮಾರು 5 ಕಿ.ಮೀ ನಡೆಯಬೇಕಾಯಿತು. ಸರ್ಕಾರ ಎಲ್ಲಾ ರಸ್ತೆ, ಗೇಟ್ಗಳನ್ನು ಬಂದ್ ಮಾಡಿದೆ, ಕೇಳಿದರೆ ವಿಐಪಿ ಬರುತ್ತಿದ್ದಾರೆ ಎನ್ನುತ್ತಾರೆ. ಭಾರತದ ಎಐ ಶೃಂಗ ನಿರ್ವಹಣೆ ಮಾಡುತ್ತಿರುವವರು ವಿಫಲರಾಗಿದ್ದಾರೆ’ ಎಂದು ಅಸಮಧಾನ ಹೊರಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>