<p><strong>ಹೈದರಾಬಾದ್:</strong> ಪ್ರಜಾತಾಂತ್ರಿಕ ರಾಜಕಾರಣವು ಜಗತ್ತಿನ ಎಲ್ಲೆಡೆ ಬದಲಾವಣೆ ಕಂಡಿದೆ, ದಶಕದ ಹಿಂದೆ ಅನ್ವಯವಾಗುತ್ತಿದ್ದ ನಿಯಮಗಳು ಈಗ ಅಪ್ರಸ್ತುತವಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.</p>.<p>‘ಭಾರತ್ ಶೃಂಗ – 2025’ರಲ್ಲಿ ಮಾತನಾಡಿದ ಅವರು, ಇಂದಿನ ಆಕ್ರಮಣಕಾರಿ ರಾಜಕೀಯ ಸನ್ನಿವೇಶದಲ್ಲಿ ವಿರೋಧ ಪಕ್ಷಗಳನ್ನು ಹೊಸಕಿಹಾಕುವ ಹಾಗೂ ಮಾಧ್ಯಮಗಳನ್ನು ದುರ್ಬಲಗೊಳಿಸುವ ಗುರಿಯನ್ನು ಕೆಲವರು ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.</p>.<p class="bodytext">‘ಭಾರತ್ ಜೋಡೊ ಯಾತ್ರೆ’ ಅನುಭವಗಳನ್ನು ನೆನಪಿಸಿಕೊಂಡ ರಾಹುಲ್ ಅವರು, ಜನರ ಧ್ವನಿಗೆ ಕಿವಿಗೊಡಲು ರಾಜಕಾರಣಿಗಳು ವಿಫಲರಾಗಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಂಡಿದ್ದಾಗಿ ಹೇಳಿದರು.</p>.<p class="bodytext">‘ಹಳೆಯ ಮಾದರಿಯ ರಾಜಕಾರಣಿ ಇನ್ನಿಲ್ಲವಾಗಿದ್ದಾನೆ. ಹೊಸ ಬಗೆಯ ರಾಜಕಾರಣಿಯನ್ನು ನಾವು ಸೃಷ್ಟಿಸಬೇಕಿದೆ’ ಎಂದರು.</p>.<p>‘ಭಾರತ್ ಜೋಡೊ ಯಾತ್ರೆ’ಯು ತಾವು ಜನರ ಜೊತೆ ಹೊಂದಿರುವ ಸಂಪರ್ಕದಲ್ಲಿ ಬದಲಾವಣೆ ತಂದಿತು ಎಂದು ಅವರು ಹೇಳಿದರು. ಯಾತ್ರೆಯ ನಂತರದಲ್ಲಿ ತಮಗೆ ಜನರ ಜೊತೆ ಸಂವಾದ ನಡೆಸುವುದು ಸುಲಭವಾಯಿತು ಎಂದರು.</p>.<p>ತಮ್ಮ ವಿರೋಧಿಗಳು ಜಗತ್ತನ್ನು ಭೀತಿ, ಸಿಟ್ಟು ಮತ್ತು ದ್ವೇಷದ ಕನ್ನಡಕದ ಮೂಲಕ ಕಾಣುತ್ತಿದ್ದರೆ ತಾವು ಜಗತ್ತನ್ನು ಪ್ರೀತಿ ಮತ್ತು ಮಮತೆಯ ಮೂಲಕ ಕಾಣುತ್ತಿರುವುದಾಗಿ ಹೇಳಿದರು. ‘ಭಾರತ್ ಶೃಂಗ’ವನ್ನು ತೆಲಂಗಾಣ ಸರ್ಕಾರ ಆಯೋಜಿಸಿದೆ.</p>.<p>ಅಂತರರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ದೇಶಗಳ 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್:</strong> ಪ್ರಜಾತಾಂತ್ರಿಕ ರಾಜಕಾರಣವು ಜಗತ್ತಿನ ಎಲ್ಲೆಡೆ ಬದಲಾವಣೆ ಕಂಡಿದೆ, ದಶಕದ ಹಿಂದೆ ಅನ್ವಯವಾಗುತ್ತಿದ್ದ ನಿಯಮಗಳು ಈಗ ಅಪ್ರಸ್ತುತವಾಗಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.</p>.<p>‘ಭಾರತ್ ಶೃಂಗ – 2025’ರಲ್ಲಿ ಮಾತನಾಡಿದ ಅವರು, ಇಂದಿನ ಆಕ್ರಮಣಕಾರಿ ರಾಜಕೀಯ ಸನ್ನಿವೇಶದಲ್ಲಿ ವಿರೋಧ ಪಕ್ಷಗಳನ್ನು ಹೊಸಕಿಹಾಕುವ ಹಾಗೂ ಮಾಧ್ಯಮಗಳನ್ನು ದುರ್ಬಲಗೊಳಿಸುವ ಗುರಿಯನ್ನು ಕೆಲವರು ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.</p>.<p class="bodytext">‘ಭಾರತ್ ಜೋಡೊ ಯಾತ್ರೆ’ ಅನುಭವಗಳನ್ನು ನೆನಪಿಸಿಕೊಂಡ ರಾಹುಲ್ ಅವರು, ಜನರ ಧ್ವನಿಗೆ ಕಿವಿಗೊಡಲು ರಾಜಕಾರಣಿಗಳು ವಿಫಲರಾಗಿದ್ದಾರೆ ಎಂಬುದನ್ನು ತಾವು ಅರ್ಥ ಮಾಡಿಕೊಂಡಿದ್ದಾಗಿ ಹೇಳಿದರು.</p>.<p class="bodytext">‘ಹಳೆಯ ಮಾದರಿಯ ರಾಜಕಾರಣಿ ಇನ್ನಿಲ್ಲವಾಗಿದ್ದಾನೆ. ಹೊಸ ಬಗೆಯ ರಾಜಕಾರಣಿಯನ್ನು ನಾವು ಸೃಷ್ಟಿಸಬೇಕಿದೆ’ ಎಂದರು.</p>.<p>‘ಭಾರತ್ ಜೋಡೊ ಯಾತ್ರೆ’ಯು ತಾವು ಜನರ ಜೊತೆ ಹೊಂದಿರುವ ಸಂಪರ್ಕದಲ್ಲಿ ಬದಲಾವಣೆ ತಂದಿತು ಎಂದು ಅವರು ಹೇಳಿದರು. ಯಾತ್ರೆಯ ನಂತರದಲ್ಲಿ ತಮಗೆ ಜನರ ಜೊತೆ ಸಂವಾದ ನಡೆಸುವುದು ಸುಲಭವಾಯಿತು ಎಂದರು.</p>.<p>ತಮ್ಮ ವಿರೋಧಿಗಳು ಜಗತ್ತನ್ನು ಭೀತಿ, ಸಿಟ್ಟು ಮತ್ತು ದ್ವೇಷದ ಕನ್ನಡಕದ ಮೂಲಕ ಕಾಣುತ್ತಿದ್ದರೆ ತಾವು ಜಗತ್ತನ್ನು ಪ್ರೀತಿ ಮತ್ತು ಮಮತೆಯ ಮೂಲಕ ಕಾಣುತ್ತಿರುವುದಾಗಿ ಹೇಳಿದರು. ‘ಭಾರತ್ ಶೃಂಗ’ವನ್ನು ತೆಲಂಗಾಣ ಸರ್ಕಾರ ಆಯೋಜಿಸಿದೆ.</p>.<p>ಅಂತರರಾಷ್ಟ್ರೀಯ ಮಟ್ಟದ ಈ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ದೇಶಗಳ 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>