ಹಿಂದಿನ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್, 2018ರಲ್ಲಿ ಅನಿಲ್ ಅಂಬಾನಿ ಮಾಲೀಕತ್ವದ ಕಂಪನಿ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಿದ್ದರು. ಈ ಯೋಜನೆ ಜಾರಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಕಾರಣ ನೀಡಲಾಗಿತ್ತು.
ನಿರ್ದಿಷ್ಟ ಕಂಪನಿಗೆ ನೆರವಾಗಲು ರಜೆ ದಿನ ಟೆಂಡರ್ ತೆರೆಯಲಾಗಿತ್ತು. ‘ಸಂಬಂಧಿಸಿದ ಕಡತಗಳಿಗೆ ಅನುಮೋದನೆ ನೀಡಲು ತಮಗೆ ₹300 ಕೋಟಿ ಲಂಚದ ಆಮಿಷ ಒಡ್ಡಲಾಗಿತ್ತು‘ ಎಂದು ಮಲ್ಲಿಕ್ 2021ರ ಅಕ್ಟೋಬರ್ನಲ್ಲಿ ಆರೋಪಿಸಿದ್ದರು.