ಶಿವಕುಮಾರ್ ಅವರು ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಇ.ಡಿ ಎದುರು ಹಾಜರಾಗಿದ್ದ ವೇಳೆ, ಯಂಗ್ ಇಂಡಿಯಾಗೆ ನೀಡಿರುವ ಹಣಕಾಸು ನೆರವು ಕುರಿತು ಅಧಿಕಾರಿಗಳು ಮಾಹಿತಿ ಕೇಳಿದ್ದರು.ಚಾರಿಟಬಲ್ ಸಂಸ್ಥೆಯಾದ ಕಾರಣ ಕಂಪನಿಗೆ ಚೆಕ್ ಮೂಲಕ ನಾನು ಮತ್ತು ಸಹೋದರ ದೇಣಿಗೆ ನೀಡಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಶಿವಕುಮಾರ್ ಹೇಳಿದ್ದರು.