<p><strong>ಹರ್ದೋಯಿ (ಉತ್ತರ ಪ್ರದೇಶ</strong>): ಮನೆಯ ಹೊರಗೆ ಮಲಗಿದ್ದವರ ಮೇಲೆ ಮರಳು ತುಂಬಿದ ಲಾರಿಯೊಂದು ಪಲ್ಟಿಯಾಗಿದ್ದು, ಒಂದೇ ಕುಟುಂಬದ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇದ ಹರ್ದೋಯಿಯಲ್ಲಿ ಇಂದು (ಬುಧವಾರ) ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಅತ್ತೆಯನ್ನು 95ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಕೊಂದಿದ್ದ ಮಹಿಳೆಗೆ ಮರಣದಂಡನೆ.ವಾರಾಣಸಿ | ಪ್ರಧಾನಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲು ಬಯಸಿದ್ದೆವು: ಅಜಯ್ ರಾಯ್. <p>ಮರಳಿನಡಿ ಸಿಲುಕಿಕೊಂಡವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದಾದರೂ ಪ್ರಯೋಜನವಾಗಲಿಲ್ಲ. ಬಳಿಕ ಬುಲ್ಡೋಜರ್ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಆದರೆ ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಒಬ್ಬ ಬಾಲಕಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಚದ್ರಾ ಗೋಸ್ವಾಮಿ ಹೇಳಿದ್ದಾರೆ.</p><p>ಮೃತರನ್ನು ಅವಧೇಶ್ (40), ಅವರ ಪತ್ನಿ ಸುಧಾ (35) ಮತ್ತು ಅವರ ಮೂವರು ಮಕ್ಕಳಾದ ಲಲ್ಲಾ (5), ಸುನೈನಾ (11) ಮತ್ತು ಬುದ್ದು (4). ಸಂಬಂಧಿ ಕರಣ್ (35), ಅವರ ಪತ್ನಿ ಹೀರೋ (30) ಮತ್ತು ಇವರ ಮಗಳು ಕೋಮಲ್ (5) ಎಂದು ಗುರುತಿಸಲಾಗಿದೆ.</p>.ಕಂಗನಾ ಮೇಲೆ ಹಲ್ಲೆ ವಿಚಾರ: ಬಿಜೆಪಿ ಸಂಸದ ರಾವತ್ಗೆ ಬೆದರಿಕೆಯೊಡ್ಡಿದ ಅಪರಿಚಿತರು.ಕಾಶ್ಮೀರದಲ್ಲಿ ಎನ್ಕೌಂಟರ್ | ಇಬ್ಬರು ಉಗ್ರರ ಹತ್ಯೆ: ಒಬ್ಬ ಯೋಧ ಹುತಾತ್ಮ.<p>ಈ ಸಂಬಂಧ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಪೊಲೀಸರು ಟ್ರಕ್ ಅನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಹೇಳಿದ್ದಾರೆ.</p><p>ಈ ಘಟನೆ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರ್ದೋಯಿ (ಉತ್ತರ ಪ್ರದೇಶ</strong>): ಮನೆಯ ಹೊರಗೆ ಮಲಗಿದ್ದವರ ಮೇಲೆ ಮರಳು ತುಂಬಿದ ಲಾರಿಯೊಂದು ಪಲ್ಟಿಯಾಗಿದ್ದು, ಒಂದೇ ಕುಟುಂಬದ ಎಂಟು ಜನರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇದ ಹರ್ದೋಯಿಯಲ್ಲಿ ಇಂದು (ಬುಧವಾರ) ಮುಂಜಾನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಅತ್ತೆಯನ್ನು 95ಕ್ಕೂ ಹೆಚ್ಚು ಬಾರಿ ಇರಿದು ಭೀಕರವಾಗಿ ಕೊಂದಿದ್ದ ಮಹಿಳೆಗೆ ಮರಣದಂಡನೆ.ವಾರಾಣಸಿ | ಪ್ರಧಾನಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲು ಬಯಸಿದ್ದೆವು: ಅಜಯ್ ರಾಯ್. <p>ಮರಳಿನಡಿ ಸಿಲುಕಿಕೊಂಡವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದಾದರೂ ಪ್ರಯೋಜನವಾಗಲಿಲ್ಲ. ಬಳಿಕ ಬುಲ್ಡೋಜರ್ ಸಹಾಯದಿಂದ ಮೃತದೇಹಗಳನ್ನು ಹೊರ ತೆಗೆಯಲಾಯಿತು. ಆದರೆ ಈ ಘಟನೆಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ಒಬ್ಬ ಬಾಲಕಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಚದ್ರಾ ಗೋಸ್ವಾಮಿ ಹೇಳಿದ್ದಾರೆ.</p><p>ಮೃತರನ್ನು ಅವಧೇಶ್ (40), ಅವರ ಪತ್ನಿ ಸುಧಾ (35) ಮತ್ತು ಅವರ ಮೂವರು ಮಕ್ಕಳಾದ ಲಲ್ಲಾ (5), ಸುನೈನಾ (11) ಮತ್ತು ಬುದ್ದು (4). ಸಂಬಂಧಿ ಕರಣ್ (35), ಅವರ ಪತ್ನಿ ಹೀರೋ (30) ಮತ್ತು ಇವರ ಮಗಳು ಕೋಮಲ್ (5) ಎಂದು ಗುರುತಿಸಲಾಗಿದೆ.</p>.ಕಂಗನಾ ಮೇಲೆ ಹಲ್ಲೆ ವಿಚಾರ: ಬಿಜೆಪಿ ಸಂಸದ ರಾವತ್ಗೆ ಬೆದರಿಕೆಯೊಡ್ಡಿದ ಅಪರಿಚಿತರು.ಕಾಶ್ಮೀರದಲ್ಲಿ ಎನ್ಕೌಂಟರ್ | ಇಬ್ಬರು ಉಗ್ರರ ಹತ್ಯೆ: ಒಬ್ಬ ಯೋಧ ಹುತಾತ್ಮ.<p>ಈ ಸಂಬಂಧ ಲಾರಿ ಚಾಲಕನನ್ನು ಬಂಧಿಸಲಾಗಿದೆ. ಪೊಲೀಸರು ಟ್ರಕ್ ಅನ್ನು ವಶಪಡಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಂಗಳಾ ಪ್ರಸಾದ್ ಸಿಂಗ್ ಹೇಳಿದ್ದಾರೆ.</p><p>ಈ ಘಟನೆ ಸಂಬಂಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>