ದ್ವೇಷ ಸಿದ್ಧಾಂತದ ವಿರುದ್ಧ ಹೋರಾಟ: ತೇಜಸ್ವಿ
ಮುಂಬೈ (ಪಿಟಿಐ): ‘ಇಂಡಿಯಾ’ ಮೈತ್ರಿಕೂಟದ ಹೋರಾಟವು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವೈಯಕ್ತಿಕವಾದದ್ದಲ್ಲ ಬದಲಿಗೆ ದ್ವೇಷ ಸಿದ್ಧಾಂತದ ವಿರುದ್ಧವಾದದ್ದು ಎಂದು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ಭಾನುವಾರ ತಿಳಿಸಿದರು.
ಶಿವಾಜಿ ಪಾರ್ಕ್ನಲ್ಲಿ ಮಾತನಾಡಿದ ಅವರು ದೇಶದ ವೈವೀಧ್ಯತೆ ಮತ್ತು ಸಹೋದರತ್ವವನ್ನು ರಕ್ಷಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
‘ಮೋದಿ ಅವರು ಸುಳ್ಳಿನ ತಯಾರಕ ಸಗಟು ವ್ಯಾಪಾರಿ ಮತ್ತು ವಿತರಕ. ಅದರೆ ಅವರಿಗೆ ನಮ್ಮಂತಹ ಸತ್ಯವಂತರು ಹೆದರುವುದಿಲ್ಲ’ ಎಂದ ಅವರು ‘ಮಹಾರಾಷ್ಟ್ರ ಸರ್ಕಾರದಲ್ಲಿ ಇರುವವರು ವಿತರಕರೇ ಹೊರತು ನಾಯಕರಲ್ಲ’ ಎಂದು ಟೀಕಿಸಿದರು.