ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ)ನ ಯಾವುದೇ ಬಟನ್ ಒತ್ತಿದರೂ ಆಡಳಿತರೂಢ ಪಕ್ಷಕ್ಕೆ ಮತ ಹೋಗುತ್ತದೆ ಎಂದು ಹರಿಯಾಣದ ಅಸ್ಸಂಧ್ ಕ್ಷೇತ್ರದ ಶಾಸಕ ಬಕ್ಷೀಶ್ಸಿಂಗ್ ವಿರ್ಕ್ ಹೇಳಿದ್ದರು.ವಿರ್ಕ್ ಅವರ ಈ ಹೇಳಿಕೆಯ ವಿಡಿಯೊ ಟ್ವೀಟಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯಲ್ಲಿರುವ ಅತ್ಯಂತಪ್ರಾಮಾಣಿಕ ವ್ಯಕ್ತಿ ಇವರೇ ಎಂದು ಹೇಳಿದ್ದಾರೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಅಸ್ಸಂಧ್ ಚುನಾವಣಾ ಕ್ಷೇತ್ರದ ವಿಶೇಷ ವೀಕ್ಷಕವಿನೋದ್ ಜಸ್ಟಿ ಮತ್ತು ವಿರ್ಕ್ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಚುನಾವಣೆಯನ್ನು ಶಾಂತ ರೀತಿಯಲ್ಲಿ ನಡೆಸಲು ಸರಿಯಾದ ಕ್ರಮ ಕೈಗೊಳ್ಳುವಂತೆ ಜಸ್ಟಿ ಅವರಿಗೆ ಹೇಳಲಾಗಿತ್ತು ಎಂದು ಚುನಾವಣಾ ಆಯೋಗಹೇಳಿಕೆ ನೀಡಿದೆ.
ಬಿಜೆಪಿಯನ್ನು ಜನರು ನಿರ್ಲಕ್ಷಿಸುತ್ತಾರೆ ಎಂದು ಅವರಿಗೆ ಗೊತ್ತಿದೆ. ಹಾಗಾಗಿಯೇ ಅವರ ಶಾಸಕರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಯಾಣದಕಾಂಗ್ರೆಸ್ ಮುಖ್ಯಸ್ಥೆ ಕುಮಾರಿ ಸೆಲ್ಜಾ ಹೇಳಿದ್ದಾರೆ.