‘ರಾಮಲಾಲಾ (ಶ್ರೀರಾಮನ ವಿಗ್ರಹ) ಹಲವು ವರ್ಷಗಳಿಂದ ಟಾರ್ಪಾಲಿನ್ನಲ್ಲಿ ಉಳಿಯಬೇಕಾಯಿತು. ಆದರೆ, ಈಗ ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುತ್ತಿದೆ. ಇಂದು ಬಾಬರಿ ಮಸೀದಿಯ ಒಂದು ಇಟ್ಟಿಗೆಯೂ ಸಿಗುವುದಿಲ್ಲ. ಜ್ಞಾನವಾಪಿ ಮಸೀದಿಗೂ ಇದೇ ಸ್ಥಿತಿ ಆಗಲಿದೆ. ಆ ಮಸೀದಿಯೊಳಗೆ ದೇವಾಲಯದ ಪುರಾವೆಗಳಿವೆ ಎಂಬುದನ್ನು ತಿಳಿದಿದ್ದರಿಂದಲೇ ಮುಸ್ಲಿಮರು ಉದ್ದೇಶಪೂರ್ವಕವಾಗಿ ಕಾಶಿ ವಿಶ್ವನಾಥ ದೇವಾಲಯದ ಸಂಕೀರ್ಣದ ಸರ್ವೇಕ್ಷಣೆಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದೂ ಅವರು ಆರೋಪಿಸಿದ್ದಾರೆ.