<p><strong>ನವದೆಹಲಿ:</strong> ‘ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರಲ್ಲಿ ಭಾರಿ ಸಿದ್ಧತೆ ಕಾಣುತ್ತಿದೆ. ತಮ್ಮ ಗುರಿ ಸಾಧನೆಗೆ ಅಗತ್ಯವಿರುವ ನೀಲನಕ್ಷೆ, ಸ್ಪಷ್ಟತೆಯೊಂದಿಗೆ ಮುಂದಡಿ ಇಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.</p> .<p>‘ನನ್ನ ಮತ್ತು ಟ್ರಂಪ್ ನಡುವಿನ ಸ್ನೇಹಕ್ಕೆ ಪರಸ್ಪರರಲ್ಲಿನ ನಂಬಿಕೆಯೇ ಆಧಾರ. ರಾಷ್ಟ್ರದ ಹಿತಾಸಕ್ತಿಗಳೇ ಎಲ್ಲಕ್ಕಿಂತ ಮಿಗಿಲು ಎಂಬುದರಲ್ಲಿಯೇ ನಮ್ಮಿಬ್ಬರಿಗೆ ವಿಶ್ವಾಸ’ ಎಂದೂ ಹೇಳಿದ್ದಾರೆ.</p>.<p>ಕೃತಕ ಬುದ್ಧಿಮತ್ತೆ (ಎ.ಐ) ಸಂಶೋಧಕ ಹಾಗೂ ವಿಜ್ಞಾನಿ ಲೆಕ್ಸ್ ಫ್ರಿಡ್ಮನ್ ಅವರ ಪಾಡ್ಕಾಸ್ಟ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.</p>.<p>‘ಟ್ರಂಪ್ ಧೈರ್ಯವಂತ ಹಾಗೂ ಅಮೆರಿಕದ ಒಳಿತಾಗಿ ಟ್ರಂಪ್ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರೊಂದಿಗೆ ಬಲಿಷ್ಠ ತಂಡ ಇದೆ. ಟ್ರಂಪ್ ಅವರ ಮುನ್ನೋಟಗಳನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯ ಈ ತಂಡ ಹೊಂದಿದೆ’ ಎಂದು ಮೋದಿ ಹೇಳಿದ್ದಾರೆ.</p>.<p>ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ರಾಷ್ಟ್ರೀಯ ಗುಪ್ತಚರ ಸಂಸ್ಥೆ ನಿರ್ದೇಶಕಿ ತುಳಸಿ ಗಬಾರ್ಡ್, ಉದ್ಯಮಿ ಇಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಅವರೊಂದಿಗಿನ ಭೇಟಿಯನ್ನು ಕೂಡ ಅವರು ಪ್ರಸ್ತಾಪಿಸಿದ್ದಾರೆ.</p>.<blockquote>ಪ್ರಧಾನಿ ಮೋದಿ ಹೇಳಿದ್ದು...</blockquote>.<h2><strong>ಗುಜರಾತ್ ಗಲಭೆಗಳು</strong></h2><p>l ಗುಜರಾತ್ನಲ್ಲಿ 2002ರಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆಗಳ ಕುರಿತು ನನ್ನ ರಾಜಕೀಯ ವಿರೋಧಿಗಳು ಸುಳ್ಳು ಸಂಕಥನ ಸೃಷ್ಟಿಸಿ, ವ್ಯಾಪಕವಾಗಿ ಹಬ್ಬಿಸಿದ್ದರು. ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದರು</p><p>l ಗುಜರಾತ್ನಲ್ಲಿ ಸಂಭವಿಸಿದ್ದ ದೊಡ್ಡ ಪ್ರಮಾಣದ ಗಲಭೆಗಳವು ಎಂಬ ಗ್ರಹಿಕೆ ಕೂಡ ತಪ್ಪು ಮಾಹಿತಿ ಪ್ರಚುರಪಡಿಸುವ ಯತ್ನವಾಗಿತ್ತು</p><p>l 2002ಕ್ಕೂ ಮೊದಲು ಗುಜರಾತ್ನಲ್ಲಿ 250ಕ್ಕೂ ಹೆಚ್ಚು ಗಲಭೆಗಳು ಸಂಭವಿಸಿದ್ದವು. ಕೋಮು ಹಿಂಸಾಚಾರ ಮೇಲಿಂದ ಮೇಲೆ ಸಂಭವಿಸುತ್ತಿದ್ದವು. ಆದರೆ, 2002ರ ನಂತರ ರಾಜ್ಯದಲ್ಲಿ ಇಂತಹ ಒಂದೇ ಒಂದು ಗಲಭೆ ಸಂಭವಿಸಿಲ್ಲ </p>.<h2><strong>ಆರ್ಎಸ್ಎಸ್ ಜೊತೆ ನಂಟು </strong></h2><p>l ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ (ಆರ್ಎಸ್ಎಸ್) ನನಗೆ ಆಳ ನಂಟಿದೆ. ಬದುಕಿನ ಉದ್ಧೇಶ ಹಾಗೂ ನಿಸ್ವಾರ್ಥ ಸೇವೆಯಂತಹ ಮೌಲ್ಯಗಳನ್ನು ಆರ್ಎಸ್ಎಸ್ ನನಗೆ ಕಲಿಸಿಕೊಟ್ಟಿದೆ</p><p>l ಸಣ್ಣ ವಯಸ್ಸಿನಲ್ಲಿಯೇ ನಾನು ಆರ್ಎಸ್ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಅಲ್ಲಿ ಹಾಡುತ್ತಿದ್ದ ದೇಶಭಕ್ತಿ ಗೀತೆಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿದ್ದವು</p><p>l ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆರ್ಎಸ್ಎಸ್ ಅದ್ಭುತ ಸೇವೆ ಮಾಡುತ್ತಿದೆ</p><p>l ‘ಜಗತ್ತಿನ ಕಾರ್ಮಿಕರೇ ಒಂದಾಗಿ’ ಎಂದು ಎಡಪಂಥೀಯ ಸಂಘಟನೆಗಳು ಹೇಳಿದರೆ, ‘ಕಾರ್ಮಿಕರೇ, ಜಗತ್ತನ್ನು ಒಂದುಗೂಡಿಸಿ’ ಎಂಬುದು ಆರ್ಎಸ್ಎಸ್ನ ಧ್ಯೇಯವಾಕ್ಯ</p>.<h2><strong>‘ಮಹಾತ್ಮ ಗಾಂಧಿ ಮಹಾನ್ ನಾಯಕ’</strong></h2><p>l ಮಹಾತ್ಮ ಗಾಂಧೀಜಿಗೆ ಜನರ ಶಕ್ತಿಯ ಅರಿವಿತ್ತು. ಅವರು, ಸ್ವಾತಂತ್ರ್ಯ ಸಂಗ್ರಾಮವನ್ನು ಜನಾಂದೋಲನವಾಗಿ ಪರಿವರ್ತಿಸಿದರು</p><p>l ಗಾಂಧೀಜಿ 20ನೇ ಶತಮಾನದ ದೊಡ್ಡ ನಾಯಕರು ಮಾತ್ರವಲ್ಲ, ಬರುವ ಶತಮಾನಗಳ ನಾಯಕರೂ ಆಗಿದ್ದಾರೆ</p><p>l ಜನರ ಪಾಲ್ಗೊಳ್ಳುವಿಕೆಗೆ ಅವರು ಒತ್ತು ನೀಡುತ್ತಿದ್ದರು. ಹೀಗಾಗಿ ಅವರು ಕೈಗೊಂಡ ಯಾವುದೇ ಕಾರ್ಯಕ್ರಮ<br>ವಾದರೂ ಭಾರಿ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಲು ಶ್ರಮಿಸುತ್ತಿದ್ದರು. </p>.<h2><strong>ಪಾಕ್ ಜೊತೆ ಸಂಬಂಧ</strong></h2><p>l ಪಾಕಿಸ್ತಾನ ಜೊತೆಗಿನ ಸಂಬಂಧ ಸುಧಾರಿಸಿ, ಶಾಂತಿ ಸ್ಥಾಪನೆಗೆ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಪ್ರತಿ ಬಾರಿಯೂ ಭಾರತಕ್ಕೆ ಪಾಕಿಸ್ತಾನ ವಂಚನೆ ಮಾಡಿದೆ, ಹಗೆತನ ಸಾಧಿಸಿದೆ</p><p>l ಸಂಕಷ್ಟ, ಅಶಾಂತಿ ಹಾಗೂ ನಿರಂತರ ಭಯೋತ್ಪಾದಕ ಕೃತ್ಯಗಳಿಂದ ಪಾಕಿಸ್ತಾನದ ಜನತೆ ಕೂಡ ರೋಸಿ ಹೋಗಿದ್ದು, ಅವರು ಕೂಡ ದೇಶದಲ್ಲಿ ಶಾಂತಿ ನೆಲಸುವುದನ್ನು ಬಯಸುತ್ತಿರಬಹುದು </p>.<h2><strong>‘ಚೀನಾ ಜತೆಗಿನ ಸ್ಪರ್ಧೆ ಸಂಘರ್ಷವಾಗಬಾರದು’</strong></h2><p>l ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯಗಳಿರುವುದು ಸಹಜ. ಎರಡು ನೆರೆ ರಾಷ್ಟ್ರಗಳ ಹಿತಾಸಕ್ತಿಗಳ ರಕ್ಷಣೆ ಮತ್ತು ಜಾಗತಿಕ ಸ್ಥಿರತೆ ದೃಷ್ಟಿಯಿಂದ ಉಭಯ ದೇಶಗಳ ನಡುವೆ ಗಟ್ಟಿಯಾದ ಸಹಕಾರ ಇದೆ</p><p>l ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ, ಸಂಘರ್ಷಕ್ಕೆ ಮೊದಲು ಇದ್ದ ಸ್ಥಿತಿ ನಿರ್ಮಾಣಕ್ಕೆ ಎರಡೂ ದೇಶಗಳು ಶ್ರಮಿಸುತ್ತಿವೆ</p>.<h2><strong>‘ಚುನಾವಣಾ ಆಯೋಗ ಕಾರ್ಯವೈಖರಿ ಅದ್ಭುತ’</strong></h2><p>l ಭಾರತದ ಚುನಾವಣಾ ಆಯೋಗ ಸ್ವತಂತ್ರವಾಗಿ ಹಾಗೂ ತಟಸ್ಥ ಧೋರಣೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ</p><p>l ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಗಳನ್ನು ನಿರ್ವಹಿಸುವ ಆಯೋಗದ ಕಾರ್ಯವೈಖರಿ ಕುರಿತು ವಿಶ್ವ ಸಮುದಾಯ ಅಧ್ಯಯನ ಮಾಡುವುದು ಅಗತ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ‘ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರಲ್ಲಿ ಭಾರಿ ಸಿದ್ಧತೆ ಕಾಣುತ್ತಿದೆ. ತಮ್ಮ ಗುರಿ ಸಾಧನೆಗೆ ಅಗತ್ಯವಿರುವ ನೀಲನಕ್ಷೆ, ಸ್ಪಷ್ಟತೆಯೊಂದಿಗೆ ಮುಂದಡಿ ಇಡುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.</p> .<p>‘ನನ್ನ ಮತ್ತು ಟ್ರಂಪ್ ನಡುವಿನ ಸ್ನೇಹಕ್ಕೆ ಪರಸ್ಪರರಲ್ಲಿನ ನಂಬಿಕೆಯೇ ಆಧಾರ. ರಾಷ್ಟ್ರದ ಹಿತಾಸಕ್ತಿಗಳೇ ಎಲ್ಲಕ್ಕಿಂತ ಮಿಗಿಲು ಎಂಬುದರಲ್ಲಿಯೇ ನಮ್ಮಿಬ್ಬರಿಗೆ ವಿಶ್ವಾಸ’ ಎಂದೂ ಹೇಳಿದ್ದಾರೆ.</p>.<p>ಕೃತಕ ಬುದ್ಧಿಮತ್ತೆ (ಎ.ಐ) ಸಂಶೋಧಕ ಹಾಗೂ ವಿಜ್ಞಾನಿ ಲೆಕ್ಸ್ ಫ್ರಿಡ್ಮನ್ ಅವರ ಪಾಡ್ಕಾಸ್ಟ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.</p>.<p>‘ಟ್ರಂಪ್ ಧೈರ್ಯವಂತ ಹಾಗೂ ಅಮೆರಿಕದ ಒಳಿತಾಗಿ ಟ್ರಂಪ್ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರೊಂದಿಗೆ ಬಲಿಷ್ಠ ತಂಡ ಇದೆ. ಟ್ರಂಪ್ ಅವರ ಮುನ್ನೋಟಗಳನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯ ಈ ತಂಡ ಹೊಂದಿದೆ’ ಎಂದು ಮೋದಿ ಹೇಳಿದ್ದಾರೆ.</p>.<p>ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ರಾಷ್ಟ್ರೀಯ ಗುಪ್ತಚರ ಸಂಸ್ಥೆ ನಿರ್ದೇಶಕಿ ತುಳಸಿ ಗಬಾರ್ಡ್, ಉದ್ಯಮಿ ಇಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಅವರೊಂದಿಗಿನ ಭೇಟಿಯನ್ನು ಕೂಡ ಅವರು ಪ್ರಸ್ತಾಪಿಸಿದ್ದಾರೆ.</p>.<blockquote>ಪ್ರಧಾನಿ ಮೋದಿ ಹೇಳಿದ್ದು...</blockquote>.<h2><strong>ಗುಜರಾತ್ ಗಲಭೆಗಳು</strong></h2><p>l ಗುಜರಾತ್ನಲ್ಲಿ 2002ರಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆಗಳ ಕುರಿತು ನನ್ನ ರಾಜಕೀಯ ವಿರೋಧಿಗಳು ಸುಳ್ಳು ಸಂಕಥನ ಸೃಷ್ಟಿಸಿ, ವ್ಯಾಪಕವಾಗಿ ಹಬ್ಬಿಸಿದ್ದರು. ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದರು</p><p>l ಗುಜರಾತ್ನಲ್ಲಿ ಸಂಭವಿಸಿದ್ದ ದೊಡ್ಡ ಪ್ರಮಾಣದ ಗಲಭೆಗಳವು ಎಂಬ ಗ್ರಹಿಕೆ ಕೂಡ ತಪ್ಪು ಮಾಹಿತಿ ಪ್ರಚುರಪಡಿಸುವ ಯತ್ನವಾಗಿತ್ತು</p><p>l 2002ಕ್ಕೂ ಮೊದಲು ಗುಜರಾತ್ನಲ್ಲಿ 250ಕ್ಕೂ ಹೆಚ್ಚು ಗಲಭೆಗಳು ಸಂಭವಿಸಿದ್ದವು. ಕೋಮು ಹಿಂಸಾಚಾರ ಮೇಲಿಂದ ಮೇಲೆ ಸಂಭವಿಸುತ್ತಿದ್ದವು. ಆದರೆ, 2002ರ ನಂತರ ರಾಜ್ಯದಲ್ಲಿ ಇಂತಹ ಒಂದೇ ಒಂದು ಗಲಭೆ ಸಂಭವಿಸಿಲ್ಲ </p>.<h2><strong>ಆರ್ಎಸ್ಎಸ್ ಜೊತೆ ನಂಟು </strong></h2><p>l ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ (ಆರ್ಎಸ್ಎಸ್) ನನಗೆ ಆಳ ನಂಟಿದೆ. ಬದುಕಿನ ಉದ್ಧೇಶ ಹಾಗೂ ನಿಸ್ವಾರ್ಥ ಸೇವೆಯಂತಹ ಮೌಲ್ಯಗಳನ್ನು ಆರ್ಎಸ್ಎಸ್ ನನಗೆ ಕಲಿಸಿಕೊಟ್ಟಿದೆ</p><p>l ಸಣ್ಣ ವಯಸ್ಸಿನಲ್ಲಿಯೇ ನಾನು ಆರ್ಎಸ್ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಅಲ್ಲಿ ಹಾಡುತ್ತಿದ್ದ ದೇಶಭಕ್ತಿ ಗೀತೆಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿದ್ದವು</p><p>l ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆರ್ಎಸ್ಎಸ್ ಅದ್ಭುತ ಸೇವೆ ಮಾಡುತ್ತಿದೆ</p><p>l ‘ಜಗತ್ತಿನ ಕಾರ್ಮಿಕರೇ ಒಂದಾಗಿ’ ಎಂದು ಎಡಪಂಥೀಯ ಸಂಘಟನೆಗಳು ಹೇಳಿದರೆ, ‘ಕಾರ್ಮಿಕರೇ, ಜಗತ್ತನ್ನು ಒಂದುಗೂಡಿಸಿ’ ಎಂಬುದು ಆರ್ಎಸ್ಎಸ್ನ ಧ್ಯೇಯವಾಕ್ಯ</p>.<h2><strong>‘ಮಹಾತ್ಮ ಗಾಂಧಿ ಮಹಾನ್ ನಾಯಕ’</strong></h2><p>l ಮಹಾತ್ಮ ಗಾಂಧೀಜಿಗೆ ಜನರ ಶಕ್ತಿಯ ಅರಿವಿತ್ತು. ಅವರು, ಸ್ವಾತಂತ್ರ್ಯ ಸಂಗ್ರಾಮವನ್ನು ಜನಾಂದೋಲನವಾಗಿ ಪರಿವರ್ತಿಸಿದರು</p><p>l ಗಾಂಧೀಜಿ 20ನೇ ಶತಮಾನದ ದೊಡ್ಡ ನಾಯಕರು ಮಾತ್ರವಲ್ಲ, ಬರುವ ಶತಮಾನಗಳ ನಾಯಕರೂ ಆಗಿದ್ದಾರೆ</p><p>l ಜನರ ಪಾಲ್ಗೊಳ್ಳುವಿಕೆಗೆ ಅವರು ಒತ್ತು ನೀಡುತ್ತಿದ್ದರು. ಹೀಗಾಗಿ ಅವರು ಕೈಗೊಂಡ ಯಾವುದೇ ಕಾರ್ಯಕ್ರಮ<br>ವಾದರೂ ಭಾರಿ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಲು ಶ್ರಮಿಸುತ್ತಿದ್ದರು. </p>.<h2><strong>ಪಾಕ್ ಜೊತೆ ಸಂಬಂಧ</strong></h2><p>l ಪಾಕಿಸ್ತಾನ ಜೊತೆಗಿನ ಸಂಬಂಧ ಸುಧಾರಿಸಿ, ಶಾಂತಿ ಸ್ಥಾಪನೆಗೆ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಪ್ರತಿ ಬಾರಿಯೂ ಭಾರತಕ್ಕೆ ಪಾಕಿಸ್ತಾನ ವಂಚನೆ ಮಾಡಿದೆ, ಹಗೆತನ ಸಾಧಿಸಿದೆ</p><p>l ಸಂಕಷ್ಟ, ಅಶಾಂತಿ ಹಾಗೂ ನಿರಂತರ ಭಯೋತ್ಪಾದಕ ಕೃತ್ಯಗಳಿಂದ ಪಾಕಿಸ್ತಾನದ ಜನತೆ ಕೂಡ ರೋಸಿ ಹೋಗಿದ್ದು, ಅವರು ಕೂಡ ದೇಶದಲ್ಲಿ ಶಾಂತಿ ನೆಲಸುವುದನ್ನು ಬಯಸುತ್ತಿರಬಹುದು </p>.<h2><strong>‘ಚೀನಾ ಜತೆಗಿನ ಸ್ಪರ್ಧೆ ಸಂಘರ್ಷವಾಗಬಾರದು’</strong></h2><p>l ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯಗಳಿರುವುದು ಸಹಜ. ಎರಡು ನೆರೆ ರಾಷ್ಟ್ರಗಳ ಹಿತಾಸಕ್ತಿಗಳ ರಕ್ಷಣೆ ಮತ್ತು ಜಾಗತಿಕ ಸ್ಥಿರತೆ ದೃಷ್ಟಿಯಿಂದ ಉಭಯ ದೇಶಗಳ ನಡುವೆ ಗಟ್ಟಿಯಾದ ಸಹಕಾರ ಇದೆ</p><p>l ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ, ಸಂಘರ್ಷಕ್ಕೆ ಮೊದಲು ಇದ್ದ ಸ್ಥಿತಿ ನಿರ್ಮಾಣಕ್ಕೆ ಎರಡೂ ದೇಶಗಳು ಶ್ರಮಿಸುತ್ತಿವೆ</p>.<h2><strong>‘ಚುನಾವಣಾ ಆಯೋಗ ಕಾರ್ಯವೈಖರಿ ಅದ್ಭುತ’</strong></h2><p>l ಭಾರತದ ಚುನಾವಣಾ ಆಯೋಗ ಸ್ವತಂತ್ರವಾಗಿ ಹಾಗೂ ತಟಸ್ಥ ಧೋರಣೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ</p><p>l ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಗಳನ್ನು ನಿರ್ವಹಿಸುವ ಆಯೋಗದ ಕಾರ್ಯವೈಖರಿ ಕುರಿತು ವಿಶ್ವ ಸಮುದಾಯ ಅಧ್ಯಯನ ಮಾಡುವುದು ಅಗತ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>